MoulasabGPL Season Nine Tournament Inaugurated by Municipal Chairman Moulasab

ಗಂಗಾವತಿ: ಇಂದು ಜಿ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ಮಾಡಿ ಮಾತನಾಡಿ ದೈಹಿಕ ಮತ್ತು ಮಾನಸಿಕ ಸದೃಢತೆ ಹೊಂದಿದಾಗ ಮಾತ್ರ. ಕ್ರೀಡೆ ಆಡೋದು ಉತ್ತಮ: ಮೌಲಸಾಬ್ ನಗರಸಭೆ ಅಧ್ಯಕ್ಷರ ಸಲಹೆ ನೀಡಿದರು.
ಈ ಪಂದ್ಯಾವಳಿಯ ಉದ್ಘಾಟನೆ ಕಾರ್ಯಕ್ರಮವನ್ನು ಉದ್ದೇಶಿಸಿನಗರಸಭೆ ಅಧ್ಯಕ್ಷ ಮೌಲಸಾಬ್ ಮಾತನಾಡಿ. ದೈಹಿಕ ಚಟುವಟಿಕೆಯ
ಮುಂದುವರಿದ ಭಾಗವೇ ಕ್ರೀಡೆಯಾಗಿದ್ದು, ಪ್ರತಿಯೊಬ್ಬರೂಚಿಕ್ಕವಯಸ್ಸಿನಿಂದಲೇ ಕ್ರೀಡೆಯ ಬಗ್ಗೆ ಆಸಕ್ತಿ ಹಾಗೂ ಮಹತ್ವವನ್ನುಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು. ನಗರದ ಎಪಿಎಂಸಿ
ಪಕ್ಕದಲ್ಲಿರುವ ಸಿ.ಬಿ.ಎಸ್ ತಾಲೂಕ ಕ್ರೀಡಾಂಗಣದಲ್ಲಿ ಜಿಪಿಎಲ್ ಸೀಸನ್-೯ಆಯೋಜಿಸಲಾಗಿತ್ತು. ಅವರು ಗಂಗಾವತಿ ಪ್ರೀಮಿಯರ್ ಲೀಗ್ ಕ್ರಿಕೆಟ್ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಪಂದ್ಯಾವಳಿ ತಂಡಗಳಲೋಗೋ ಅನಾವರಣ ಮಾಡಿ ಮಾತನಾಡಿದರು. ಕ್ರೀಡಾಕೂಟಗಳಮಹತ್ವವನ್ನು ಅರಿತು ಕ್ರೀಡೆಗಳನ್ನು ಅಬಿವೃದ್ಧಿಪಡಿಸುವ
ಮನೋಭಾವ ಬೆಳೆಸಿಕೊಂಡು ಇಂದಿನ ಯುವಜನತೆಯುಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕವಾಗಿಮತ್ತು ಮಾನಸಿಕವಾಗಿ ಸದೃಢರಾಗಬೇಕೆಂದರು.
ಅದೇ ರೀತಿಯಾಗಿ ನಗರಸಭೆ ಪೌರಾಯುಕ್ತ ಆರ್. ವಿರುಪಾಕ್ಷಪ್ಪಮೂರ್ತಿ ಟ್ರೋಫಿ ಅನಾವರಣಗೊಳಿಸಿ ಮಾತನಾಡಿ, ಎಲ್ಲಕ್ರೀಡಾಭಿಮಾನಿಗಳನ್ನು ಕ್ರೀಡಾಂಗಣದಲ್ಲಿ ಹಿಡಿದಿಟ್ಟುಕೊಳ್ಳುವ ಶಕ್ತಿಕ್ರಿಕೆಟ್ ಪಂದ್ಯಾವಳಿಗಿದೆ. ಕ್ರೀಡಾಭಿಮಾನಿಗಳಿಗೆ ಹಬ್ಬದ ವಾತಾವರಣವೇಸೃಷ್ಟಿಯಾಗಲಿದೆ. ಹಾಗಾಗಿ ಕ್ರಿಡಾಪಟುಗಳು ಕ್ರೀಡಾಮನೋಭಾವನೆಯಿಂದ ಭಾಗವಹಿಸಿ ಸೋಲು-ಗೆಲುವನ್ನು ಸಮನಾಗಿ
ಸ್ವೀಕರಿಸಬೇಕೆಂದು ಕ್ರೀಡಾಪಟುಗಳಿಗೆ ಹೇಳಿದರು ಮತ್ತು ನಂತರಕಪ್ಗಳನ್ನು ವೀಕ್ಷಣೆ ಮಾಡಿ ಎಲ್ಲಾ ಕ್ರೀಡಾಪಟುಗಳಿಗೆ ಶುಭಹಾರೈಸಿದರು.
ಈ ಜಿಪಿಎಲ್ ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ.
ಇದರಲ್ಲಿ ಪ್ರಥಮ ಬಹುಮಾನ ರೂ. ೨ ಲಕ್ಷ, ದ್ವಿತೀಯ ಬಹುಮಾನ ೧
ಲಕ್ಷ, ತೃತೀಯ ಬಹುಮಾನ ೫೦,೦೦೦ ಇರುತ್ತದೆ. ಭಾಷಾ ಪಾಂಟಿಂಗ್,ಪರಂಜೋತಿ, ದೀಪಕ್ ಪಾಂಡೆ, ರಾಜ್ ಮೊಹಮ್ಮದ್ ರವರು ಈ ಪಂದ್ಯದಮುಖ್ಯ ಆಯೋಜಕರಾಗಿದ್ದು, ಪಂದ್ಯಾವಳಿಗಳು ನಾಳೆಯಿಂದಪ್ರಾರಭವಾಗಲಿವೆ.
ಈ ಸಂದರ್ಭದಲ್ಲಿ ನಗರಸಭೆಯ ಸಾಯಿ ಸಮಿತಿ ಅಧ್ಯಕ್ಷ ರಮೇಶ್ಚೌಡ್ಕಿ. ನಗರಸಭೆ ಸದಸ್ಯರಾದ ನವೀನ್ ಮಾಲಿಪಾಟೀಲ್ ಮತ್ತು ಮತ್ತೊಬ್ಬ ಈ
ಪಂದ್ಯಾವಳಿ ಆಯುಕ್ತರಾದ ಭಾಷೆಸಾಬ್, ನಗರಸಭೆ ಸದಸ್ಯಗಳಾದಉಮೇಶ್ ಸಿಂಗನಾಳ, ಪರಶುರಾಮ ಮಡ್ಡೇರ್, ಮುಸ್ತಾಕ್ ಅಲಿ, ಫಾರೂಕ್,ದಲಿತ ಮುಖಂಡ ದುರ್ಗೇಶ್, ಉಡಚಪ್ಪ, ಅರ್ಜುನ್ ಶ್ರೀರಾಮನಗರ, ಈ.ದೊಡ್ಡಮನಿ, ರಮೇಶ್ ಹೊಸಮಲಿ, ವಿರುಪಣ್ಣ ಹಿರೇಜಂತಕಲ್, ನವೀನ್,
ರಂಜಿತ, ಸಿರಾಜ್, ಹಜರತ್, ಬಸವ ಸೇರಿದಂತೆ ಅನೇಕ ಕ್ರಿಕೆಟ್ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.