Breaking News

ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ : ಮತ ಎಣಿಕೆ ಸ್ಥಗಿತ,,

Farmers’ Co-operative Society Election: Counting of Votes Stopped

ಜಾಹೀರಾತು
IMG 20241230 WA0131 1024x576

ಆಡಳಿತ ಪಕ್ಷದ ಷಡ್ಯಂತ್ರ ಬಳಸಿ ವಾಮ ಮಾರ್ಗದ ಮೂಲಕ ಚುನಾವಣೆ ಗೆಲುವು ಸಾಧಿಸಲು ಹೊರಟ ಕಾಂಗ್ರೆಸ್ಸಿಗರು,,! ಬಿಜೆಪಿ ಅಭ್ಯರ್ಥಿಗಳ ಆರೋಪ,,,

IMG 20241230 WA0132

ವರದಿ : ಪಂಚಯ್ಯ ಹಿರೇಮಠ.
ಕುಕನೂರು : ರವಿವಾರದಂದು ಬೆಳಗ್ಗೆ 9ಕ್ಕೆ ಪ್ರಾರಂಭಗೊಂಡ
ಪತ್ತಿನ ಸಹಕಾರಿ ಸಂಘದ ಚುನಾವಣೆ ಪ್ರಾರಂಭ ಹಂತದಲ್ಲಿ ಶಾಂತಿಯುತವಾಗಿ ನಡೆದರು, ಮೊದಲು ಮತದಾರರೆಂದು ಮತದ ಅರ್ಹತೆ ಹೊಂದಿದ 338
ಸಾಲಗಾರರ ಕ್ಷೇತ್ರದ ಸದಸ್ಯರು ಮತದಾರರಿದ್ದು, 79 ಜನ ಸದಸ್ಯರು ಸಾಲಗಾರರಲ್ಲದ ಕ್ಷೇತ್ರದ ಮತದಾರರಿದ್ದರು.

ತನ್ಮದ್ಯೆ ಏಕಾ ಏಕಿ ರವಿವಾರದಂದು ಬೆಳಗ್ಗೆ ಕೊರ್ಟಿನ ಆದೇಶದಂತೆ ಷೇರುದಾರರ ಪೈಕಿ ಇನ್ನೂ 438 ಸದಸ್ಯ ಮತದಾರರು ಇದ್ದು ಇವರು ಅನರ್ಹರಾಗಿದ್ದರೆಂದು ಬಿಜೆಪಿ ಕೈಬಿಟಿತ್ತು, ಆದರೆ ಕೊರ್ಟ್ ಈ ಷೇರುದಾರ ಸದಸ್ಯರು ಮತ ಚಲಾವಣೆಗೆ ಅರ್ಹರು ಎಂದು ಆದೇಶ ಹೊರಡಿಸಿದರಿಂದ, ಬಿಜೆಪಿಯ ಬೆಂಬಲಿತ ಅಭ್ಯರ್ಥಿಗಳು
ಅಸಮಾಧಾನ ಹೊರ ಹಾಕಿ, ಮಾತನಾಡಿ ಚುನಾವಣೆಗೂ ಮುನ್ನ ಇವರನ್ನು ಅರ್ಹರು ಎಂದು ಪರಿಗಣಿಸಿದ್ದರೇ ನಾವು ಪ್ರಚಾರ ವೇಳೆ
ಇವರಲ್ಲೂ ಮತದಾನ ಮಾಡುವಂತೆ ಮನವಿ ಮಾಡುತ್ತಿದ್ದೇವು.

ಆದರೆ ಏಕಾ ಏಕಿ ಅನರ್ಹರಾದ ಸದಸ್ಯರ ಮತವನ್ನು ಕೋರ್ಟ್ ಮೂಲಕ ಅರ್ಹರೆಂದು ಪರಿಗಣಿಸಿ ಈ ರೀತಿಯಾಗಿ ಚುನಾವಣೆ ನಡೆಸುತ್ತಿರುವುದು ಇದು ಆಡಳಿತ ಪಕ್ಷದ ಷಡ್ಯಂತ್ರವಾಗಿದ್ದು, ವಾಮ ಮಾರ್ಗದ ಮೂಲಕ
ಗೆಲುವು ಸಾಧಿಸಲು ಹೊರಟಿದ್ದಾರೆ ಎಂದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಕ್ರೋಶಗೊಂಡು ಚುನಾವಣಾ ಅಧಿಕಾರಿ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳ ದಬ್ಬಾಳಿಕೆಗೆ ವಿರೋಧ ವ್ಯಕ್ತ ಪಡಿಸಿ ಸರಕಾರ ಹಾಗೂ ಅಧಿಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ ಚುನಾವಣಾ ಬೂತ್ ನಿಂದ ಮತ ಪೆಟ್ಟಿಗೆ ಸ್ಥಳಾಂತರ ಮಾಡಿದ ಎಪಿಎಂಸಿ ಆವರಣದ ಸ್ಟ್ರಾಂಗ್ ರೂಮ್ ಮುಂದೆ ನ್ಯಾಯ ಸಿಗುವವರೆಗೂ ಜಾಗ ಬಿಟ್ಟು ಕದಲುವುದಿಲ್ಲಾ ಎಂದು ಅಹೋ ರಾತ್ರಿ ಧರಣಿ ನಡೆಸಿ ಪ್ರತಿಭಟನೆಗೆ ಕುಳಿತರು.

ಸೋಮವಾರದಂದು ಬೆಳಗ್ಗೆ ಧರಣಿ ಕುಳಿತ ಎಪಿಎಂಸಿ ಆವರಣಕ್ಕೆ ಬಿಜೆಪಿಯ ವಿವಿಧ ಮುಖಂಡರು ಆಗಮಿಸಿದರು. ನಂತರ ನಡೆಯುವ ಪ್ರತಿಭಟನೆಯಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ ಭಾಗವಹಿಸಲಿದ್ದಾರೆ. ಈ ಪ್ರತಿಭಟನೆಯಲ್ಲಿ ತಾಲೂಕಿನ ಬಿಜೆಪಿ ಕಾರ್ಯಕರ್ತರು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದ್ದು, ನ್ಯಾಯಯುತವಾಗಿ ಚುನಾವಣಾ ಮತ ಎಣಿಕೆ ನಡೆಸುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲಾ ಎಂದು ಮುಖಂಡರು ತಿಳಿಸಿದರು.

ಚುನಾವಣಾ ಅಧಿಕಾರಿ ಹನುಮಂತಪ್ಪ ಹೈಡ್ರಾಮಾದ ನಡುವೆ ನಡೆಯದ ಮತ ಎಣಿಕೆ ಕಾರ್ಯ,, ಮಾರುತಿ ಗಾವರಾಳ ಆರೋಪ ,,

ಆಡಳಿತ ಪಕ್ಷದಿಂದ ಅಧಿಕಾರಿಗಳಿಗೆ ಒತ್ತಡ ಮೂರ್ಛೆ ನಾಟಕಕ್ಕೆ ತಯಾರಾದ ಆರ್ ಓ ಬಿಜೆಪಿ ಆರೋಪ,,

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.