Breaking News

ವಿದ್ಯಾರ್ಥಿಗಳು ವಿವೇಕವಂತರಾಗಬೇಕು – ಡಾ. ವೊಡೇ ಪಿ. ಕೃಷ್ಣ

Students need to be smart. Wodey P. Krishna

ಜಾಹೀರಾತು
WhatsApp Image 2024 06 29 At 6.25.54 PM 300x200


ಬೆಂಗಳೂರು, ಜೂ,29; ಆಧುನಿಕ ಬದುಕಿಗೆ ಶಿಕ್ಷಣ ಅತ್ಯಂತ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳು ಅಕ್ಷರಸ್ಥರಾಗುವ ಜೊತೆಗೆ ವಿವೇಕವಂತರಾಗಬೇಕು ಎಂದು ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ, ನಾಡೋಜ ಡಾ.ವೂಡೇ ಪಿ.ಕೃಷ್ಣ ಹೇಳಿದ್ದಾರೆ.
ಶೇಷಾದ್ರಿಪುರಂ ಸಂಜೆ ಕಾಲೇಜು ವಾರ್ಷಿಕೋತ್ಸವದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಬುದಕಿನಲ್ಲಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡು ಮುನ್ನಡೆಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಚಿತ್ರನಟ ಚೇತನ್ ಕುಮಾರ್ ಅವರು ಭಾಗವಹಿಸಿದ್ದರು, ಕಾಲೇಜಿನ ಆಡಳಿತ ಸಲಹಾ ಮಂಡಳಿಯ ಅಧ್ಯಕ್ಷರಾದ ಪಿ. ಸಿ. ನಾರಾಯಣ, ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಉಪಾಧ್ಯಕ್ಷರಾದ ಹೆಂಜಾರಪ್ಪರವರು ಹಾಗೂ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಜಂಟಿ ಕಾರ್ಯದರ್ಶಿಗಳಾದ ಎಂ. ಎಸ್ ನಟರಾಜ್, ಧರ್ಮದರ್ಶಿ ಮೃತ್ಯುಂಜಯ, ಪ್ರಾಚಾರ್ಯರಾದ ಡಾ. ಎನ್. ಎಸ್ ಸತೀಶ್, ಸಂಚಾಲಕರುಗಳಾದ ಸಂಧ್ಯಾ ಕಲರವದ ಸಂತೋಷ್ ಜೆ. ವಿ , ಲೀಲಾವತಿ ಎಂ, ನಾಗಸುಧ ಆರ್ ಮತ್ತಿತರರು ಪಾಲ್ಗೊಂಡಿದ್ದರು

About Mallikarjun

Check Also

screenshot 2025 10 09 18 49 33 65 e307a3f9df9f380ebaf106e1dc980bb6.jpg

2005ರಪೂರ್ವಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು : ಮುಖ್ಯಮಂತ್ರಿ ಸಿದ್ದರಾಮಯ್ಯ 

Those who made a living in forest land before 2005 have the right to land: …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.