Breaking News

ಮೋದಿಜಿ ಆಡಳಿತದಲ್ಲಿ ಮಾತ್ರ ಭಾರತ ಸುರಕ್ಷಿತ: ಸುಗ್ರೀವಾ


ಗಂಗಾವತಿ.ಏ.27: ಭಾರತದ ಸರ್ವಾಂಗೀಣ ಅಭಿವೃದ್ಧಿಯೇ ಮೋದಿ ಗ್ಯಾರಂಟಿ. ಬಿಜೆಪಿಗೆ ನೀಡುವ ಒಂದೊಂದು ಮತವು ಭಾರತ ವಿಕಾಸಕ್ಕೆ ಶಕ್ತಿ ತುಂಬುತ್ತವೆ ಎಂದು ಬಿಜೆಪಿ ಯುವ ಮುಖಂಡ ಸಂಗಮೇಶ್ ಸುಗ್ರೀವಾ ತಿಳಿಸಿದರು.
ಬಿಜೆಪಿ ನಿಯೋಜಿತ ಕೊಪ್ಪಳ ಲೋಕಸಭಾ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಪರ ಇಲಕಲ್ ಗಡ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸುಗ್ರೀವಾ ಅವರು, ಭಾರತೀಯ ಜನತಾ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಅಭಿವೃದ್ಧಿಗೆ ವೇಗ ನೀಡಿದೆ. ವಿಶ್ವದಲ್ಲಿ ಭಾರತವನ್ನು ಐದನೇಯ ಅತಿ ದೊಡ್ಡ ಆರ್ಥಿಕ ಸದೃಢ ದೇಶವನ್ನಾಗಿ ಮಾಡಿದೆ. ಭಾರತದ ಗಡಿಗಳ ಮೇಲೆ ಕಣ್ಣು ಹಾಕುವ ನೆರೆಹೊರೆಯ ರಾಷ್ಟ್ರಗಳಿಗೆ, ಉಗ್ರವಾದಿಗಳಿಗೆ ಎದುರೇಟು ನೀಡುವ ಮೂಲಕ ದೇಶದ ಭದ್ರತೆಗೆ ಬಲ ತುಂಬಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಮೂಲಕ ಭಾರತೀಯರ 500 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿದೆ. ಸನಾತನ ಧರ್ಮವನ್ನು ಜಗತ್ತಿಗೆ ಪರಿಚಯಿಸಿ ಭಾರತಕ್ಕೆ ವಿಶ್ವ ಗುರು ಪಟ್ಟಕ್ಕೇರಿಸಿದೆ. ಕಾಂಗ್ರೆಸ್ ನ ಉಚಿತ ಭಾಗ್ಯಗಳು ತಾತ್ಕಾಲಿಕ ಹಾಗೂ ದೇಶವನ್ನು ದಿವಾಳಿತನಕ್ಕೆ ದೂಡುವ ಭಾಗ್ಯಗಳಾಗಿವೆ. ನರೇಂದ್ರ ಮೋದಿಯಂತಹ ಸದೃಢ ಪ್ರಧಾನಿಯ ಆಡಳಿತದಲ್ಲಿ ಮಾತ್ರ ಭಾರತ ಸುರಕ್ಷಿತವಾಗಿರಲು ಸಾಧ್ಯ. ಯುವ ಸಮೂಹ ನವ ಭಾರತ ನಿರ್ಮಾಣಕ್ಕಾಗಿ ಬಿಜೆಪಿಗೆ ಬೆಂಬಲಿಸಿ ಮೋದಿಜಿ ಪರ ಅಭ್ಯರ್ಥಿಗೆ ಮತ ನೀಡಬೇಕು ಎಂದರು.

ಜಾಹೀರಾತು

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *