Breaking News

ನಮ್ಮ ನಡುವೆ ಈಗಿಲ್ಲದ ಕೆ.ಶಿವರಾಮ

Nam’ma naḍuve īgillada ke.ŚivarāmaK. Shivaram who is no longer with us

ಜಾಹೀರಾತು
Screenshot 2024 03 05 07 34 37 30 6012fa4d4ddec268fc5c7112cbb265e7 300x293

ಶ್ರೀ.ಕೆ.ಶಿವರಾಮ ಅವರು ದೈಹಿಕವಾಗಿ ನಮ್ಮ ನಡುವೆ ಇಲ್ಲ ಅಂದಾಗ ಸಂಕಟವಾಯ್ತು. ಹಳೆಯ ನೆನಪುಗಳು ನುಗ್ಗಿ ಬಂದವು. ಅಪ್ಪ ಲಂಕೇಶ್ ಪತ್ರಿಕೆಗೆ ಬರೆಯುತ್ತಿದ್ದ ದಿನಗಳವು. ಆಗ ಕೆ.ಶಿವರಾಮ ಯಾದಗಿರಿಯ ಉಪ ವಿಭಾಗ ಅಧಿಕಾರಿಯಾಗಿ ಬಂದರು. ಜನ ಸಾಮಾನ್ಯರ ಬಗೆಗೆ ಪ್ರೀತಿ ವಿಶ್ವಾಸ ಹಾಗೂ ನೋವುಗಳನ್ನು ಅರಿತಿದ್ದ ಶಿವರಾಮ ಸರ್, ಸರಕಾರದ ಸೌಲತ್ತುಗಳನ್ನು ಜನ ಸಾಮಾನ್ಯರಿಗೆ ತಲುಪಲಿ ಎಂದು ಕಾಳಜಿ ವಹಿಸಿದ್ದರು. ಇದನ್ನು ತಿಳಿದುಕೊಂಡಿದ್ದ ಅಪ್ಪ ಲಂಕೇಶ್ ಪತ್ರಿಕೆಗೆ ವರದಿ ಮಾಡಿದ್ದರು.

ನಮ್ಮ ಭಾಗದಲ್ಲಿ ಆಗ ಪ್ರತಿ ಜಿಲ್ಲೆಯಲ್ಲಿ ಒಬ್ಬೊಬ್ಬ ವಿಭಾಗಾಧಿಕಾರಿ ಇರುತ್ತಾರೆಂದೆ ಗೊತ್ತಿರಲಿಲ್ಲ. ಈ ಸಂಗತಿ ಗೊತ್ತಾಗಿದ್ದು ಕೆ.ಶಿವರಾಮ ಅವರ ವಿಭಿನ್ನ ನಡವಳಿಕೆಯಿಂದ. ಪತ್ರಿಕೆಯಲ್ಲಿ ಕೆ. ಶಿವರಾಮ ಕುರಿತು ಬಂದಾಗ ನಮ್ಮ ಭಾಗದ ಜನ‌ಸಾಮಾನ್ಯರಿಗೇನೋ ಖುಷಿ ಆಗಿತ್ತು. ಆದರೆ ಪಟ್ಟಭದ್ರರಿಗೆ ಕೆಲವು ರಾಜಕಾರಣಿಗಳಿಗೆ ಇರಿಸು ಮುರಿಸು ಉಂಟಾಗಿತ್ತು.

ರಾಜಕೀಯ ದುಷ್ಟ ಕೈಗಳು, ಅವರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದವು. ಇದನ್ನು ಸಹಿಸದ ಕೆ.ಶಿವರಾಮ ಸಿಡಿದೆದ್ದರು. ಆಗ ಪಟ್ಟಭದ್ರರು ಹಲ್ಲೆ ಮಾಡಿದರು. ಆಗ ಶಿವರಾಮ್ ಕೊಂಚ ನೊಂದಿದ್ದರು.

ಇದಾದ ಎಷ್ಟೋ ವರ್ಷಗಳ ನಂತರ ಅವರು ಮೈಸೂರಿನ‌ ಮಹಾ ನಗರ ಪಾಲಿಕೆ ಕಮೀಶನರ ಆಗಿದ್ದಾಗ ಅವರನ್ನು ಕಂಡು ಸಂದರ್ಶನ ಮಾಡಿದ್ದೆ. ಆಗ ಯಾವುದೋ ಚಿತ್ರದ ಚಿತ್ರಿಕರಣ ನಡೆದಿದ್ದ ನೆನಪು. ಆ ಬ್ಯೂಸಿ ಸೆಡ್ಯೂಲನಲ್ಲಿಯೂ ನನ್ನನ್ನು ಗುರುತಿಸಿ ಮಾತನಾಡಿದರು. ಅಪ್ಪನ ಆರೋಗ್ಯ, ಓದು- ಬರಹ ಮುಂತಾದವುಗಳ ಕುರಿತು ವಿಚಾರಿಸಿದರು.

ಅವರೊಂದಿಗೆ ಮಾಡಿದ್ದ ಸಂದರ್ಶನ ಅಗ್ನಿ ಅಂಕುರದಲ್ಲಿ ಪ್ರಕಟಿಸಿದೆ. ಆಗ ನಮ್ಮ ಲ್ಯಾಂಡ ಫೋನ್ ಗೆ ಕರೆ ಮಾಡಿ ಸಂತೋಷ ವ್ಯಕ್ತ ಪಡಿಸಿದ್ದರು. ಮತ್ತೊಂದು ಮಾತು ಅವರು ಕನ್ನಡದ ಮೊಟ್ಟ ಮೊದಲ ಐಎಎಸ್ ಅಧಿಕಾರಿಗಳು. ಇವರಿಗೆ ಕನ್ನಡದ ಬಗೆಗೆ ಸರಿಯಾಗಿ ಮಾರ್ಗದರ್ಶನ ಮಾಡಿದವರು ಡಾ.ಸಾ.ಶಿ.ಮರುಳಯ್ಯ. ಅವರು ಅಪ್ಪನ ಆತ್ಮೀಯರು.

ಕೊಪ್ಪಳದಲ್ಲೊಂದು ಸಲ ಜಿಲ್ಲಾಧಿಕಾರಿಯಾಗಿದ್ದಾಗ ಭೇಟಿ ಆಗಿದ್ದೆ. ಮತ್ತೆ ಅವರಷ್ಟಕ್ಕೆ ಅವರು, ನನ್ನಷ್ಟಕ್ಕೆ ನಾನು. ಕೃಷ್ಣೆ ಭೀಮೆಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಅವರು ಸಿನೆಮಾ ರಾಜಕೀಯ ಇತ್ಯಾದಿಗಳಲ್ಲಿ ತೊಡಗಿಕೊಂಡರು.

ರಾಜಕೀಯ ಪಕ್ಷದ ಆಯ್ಕೆ ವಿಷಯಕ್ಕೆ ಬಂದಾಗ ಅವರು ಎಡವಿದ್ದರು. ಈಗ ಹಠಾತ್ತನೆ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ. ಬುದ್ದ ಬಸವ ಅಂಬೇಡ್ಕರ್ ಅವರ ವಿಚಾರಧಾರೆಯ ಬಗೆಗೆ ಒಲವಿದ್ದ ಸ್ನೇಹ ಜೀವಿಯೊಬ್ಬರನ್ನು ಕಳಕೊಂಡ ನೋವು ಕಾಡುತ್ತಿದೆ

Screenshot 2024 03 05 07 40 21 29 6012fa4d4ddec268fc5c7112cbb265e7

ವಿಶ್ವಾರಾಧ್ಯ ಸತ್ಯಂಪೇಟೆ

About Mallikarjun

Check Also

screenshot 2025 10 09 18 37 46 40 e307a3f9df9f380ebaf106e1dc980bb6.jpg

ಕರ್ನಾಟಕ ಇತಿಹಾಸ ಅಕಾಡೆಮಿ ಪ್ರಶಸ್ತಿಗಳು ಪ್ರಕಟ, ಡಾ. ಶರಣಬಸಪ್ಪ ಕೋಲ್ಕಾರ ಸಂಶೋಧನಾ ಶ್ರೀ ಪ್ರಶಸ್ತಿ ಗೆ ಭಾಜನ  

Karnataka Itihasa Academy Awards announced, Dr. Sharanabasappa Kolkara Research Award conferred ಬೆಂಗಳೂರು:  ಕರ್ನಾಟಕ ಇತಿಹಾಸ ಅಕಾಡೆಮಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.