Breaking News

ಅಂಬೇಡ್ಕರ್ ವಿಧೋದ್ದೇಶ ಸಹಕಾರಿ ಸಂಘ ಸ್ಥಾಪನೆಗೆ ಪೂರ್ವ ಭಾವಿ ಸಭೆ

Ambedkar Vidhodesha Co-operative Society Pre-Prospective Meeting

ಜಾಹೀರಾತು

ಸುಳ್ಯ: ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಕರ್ನಾಟಕ ದಕ್ಷಿಣಕನ್ನಡ ಜಿಲ್ಲೆ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರಿ ಸಂಘ ನಿ.ಇದರ ಪೂರ್ವ ಭಾವಿ ಸಭೆ ಮೇನಾಲ ಅಂಬೇಡ್ಕರ್ ಭವನದಲ್ಲಿ ಮನೋಹರ ಪಲ್ಲತ್ತಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಂಬೇಡ್ಕರ್ ವಿವಿಧೋದ್ದೇಶ ಸಹಕಾರಿ ಸಂಘ ನಿ.ಇದರ ಸಂಸ್ಥಾಪಕರಾದ ತುಂಬಲ ರಾಮಣ್ಣ ಸಂಘದ ಮಾಹಿತಿ ನೀಡಿ ರಾಜ್ಯಾಧ್ಯಂತ 27 ಶಾಖೆ ಆರಂಭವಾಗಿದೆ ಇದರ ಸದುಪಯೋಗವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರು ಪಡೆದುಕೊಳ್ಳಿ ಸುಳ್ಯ ತಾಲೂಕಿನಲ್ಲಿ ಕೂಡ ಶಾಖೆ ತೆರೆದು ಸಮುದಾಯದ ಏಳಿಗೆಗೆ ಶ್ರಮ ವಹಿಸಿ ಎಂದರು. ಕೋಲಾರ ಶಾಖೆಯ ಸಿದ್ಧಾರ್ಥ್ ಆನಂದ ಮಾಲೂರು. ಕನಕಪುರ ಶಾಖೆಯ ಸಿಂಡಿಕೇಟ್ ಶಿವಣ್ಣ.ಪಿರಿಯಪಟ್ಣ ಶಾಖೆಯ ಐಲಪುರ ರಾಮು.ಕುಶಾಲನಗರ ಶಾಖೆಯ ಗಣೇಶ ಮತ್ತು ಆದಿದ್ರಾವಿಡ ಸುಳ್ಯ ತಾಲೂಕು ಅಧ್ಯಕ್ಷರಾದ ಬಾಲಕೃಷ್ಣ ಡಿ.ಪಿ.ದೊಡ್ಡೇರಿ.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಹರೀಶ್ ಮೇನಾಲ.ಸುಂದರ ಬಾಡೇಲು. ಪ್ರಕಾಶ್ ಕಲ್ಲಗುಡ್ಡೆ, ಮಧುಸೂದನ್ ಕಾಟಿಪಳ್ಳ ಸಂಪೂರ್ಣ ಸಹಕಾರ ನೀಡಿದರು.ಮತ್ತು ಸಭೆಯಲ್ಲಿ ಐವತ್ತು ಹೆಚ್ಚು ಜನ ಭಾಗವಹಿಸಿದರು. ಸಾರ್ವಜನಿಕರಿಗೆ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಯಿತು.ಸತೀಶ್ ಬೂಡುಮಕ್ಕಿ ಸ್ವಾಗತಿಸಿದರು.ಚಂದ್ರಶೇಖರ ಕೆ ಪಲ್ಲತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.