Breaking News

ಪ್ರವಾಸಿ ಮಂದಿರ-ಸರ್ಕೀಟ್ ಹೌಸ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ೧೭ ತಿಂಗಳುಗಳಿAದ ವೇತನ ನೀಡದಿರುವುದು ಖಂಡನೀಯ: ಭಾರಧ್ವಾಜ್

Non-payment of wages for 17 months to outsourced workers working in tourist temples-circuit houses is condemnable: Bhardwaj

.

ಜಾಹೀರಾತು

ಗಂಗಾವತಿ: ಗಂಗಾವತಿ, ಕಾರಟಗಿ, ಕನಕಗಿರಿ ತಾಲ್ಲೂಕುಗಳಲ್ಲಿ ಪ್ರವಾಸಿ ಮಂದಿರ-ಸರ್ಕೀಟ್ ಹೌಸ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ೧೪ ಜನ ಹೊರಗುತ್ತಿಗೆ ಕಾರ್ಮಿಕರಿಗೆ ಕಳೆದ ೧೭ ತಿಂಗಳುಗಳಿAದ ವೇತನ ಕೊಡದೇ ಇರುವುದು ಖಂಡನೀಯವಾಗಿದೆ ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ಸರ್ಕಾರದ ನಿಲುವಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆದಾರರಾದ ಸಂತೋಷ ತಂ. ಈರಣ್ಣ ಕಮಲಾಪುರ ಇವರು ೧೭ ತಿಂಗಳುಗಳಿAದ ಗಂಗಾವತಿ, ಕಾರಟಗಿ, ಕನಕಗಿರಿ ತಾಲ್ಲೂಕುಗಳಲ್ಲಿ ಪ್ರವಾಸಿ ಮಂದಿರ-ಸರ್ಕೀಟ್ ಹೌಸ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ೧೪ ಜನ ಹೊರಗುತ್ತಿಗೆ ಕಾರ್ಮಿಕರಿಗೆ ಸಂಬಳ ನೀಡದೇ ಇರುವುದರಿಂದ ಕಾರ್ಮಿಕರ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟದಿAದ ಬೀದಿಪಾಲಾಗಿದ್ದಾರೆ. ಕೂಡಲೇ ಮೂಲ ಮಾಲಿಕರಾದ ಸರ್ಕಾರ ೧೪ ಜನ ಹೊರಗುತ್ತಿಗೆ ಕಾರ್ಮಿಕರಿಗೆ ಕನಿಷ್ಟ ವೇತನ ಕಾಯ್ದೆಯ ಪ್ರಕಾರ ಸಂಬಳ ನೀಡಬೇಕು. ಇವರೆಲ್ಲರಿಗೂ ಪಿ.ಎಫ್., ಇ.ಎಸ್.ಐ. ವಂತಿಕೆಗಳನ್ನು ತುಂಬಿ, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಬೇಕೆಂದು ಕ್ರಾಂತಿಚಕ್ರ ಬಳಗ ಸರ್ಕಾರವನ್ನು ಒತ್ತಾಯಿಸುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸದಿದ್ದಲ್ಲಿ ರಾಜ್ಯಾಧ್ಯಂತ ಕಾರ್ಮಿಕರಿಗೆ ನ್ಯಾಯಕ್ಕಾಗಿ ಕ್ರಾಂತಿಚಕ್ರ ಬಳಗ ಹೋರಾಟ ಮಾಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

About Mallikarjun

Check Also

screenshot 2025 10 13 18 34 27 81 965bbf4d18d205f782c6b8409c5773a4.jpg

ಕನ್ನೇರಿ ಸ್ವಾಮಿಗಳು ನಿಂದಿಸಿರುವುದುಲಿಂಗಾಯತ ಮುಖವಾಡದ ವೀರಶೈವರಿಗೆ ಹೊರತು ಗುರು ಬಸವಣ್ಣನವರ ಲಿಂಗಾಯತ ಧರ್ಮ ಅನುಯಾಯಿಗಳಿಗಲ್ಲ- ಶರಣ ಚಟ್ನಳ್ಳಿ

Kanneri Swamiji has insulted the Veerashaivas in the guise of Lingayats, not the followers of …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.