Breaking News

ಕೆ.ಆರ್.ಪಿ.ಪಿ.ಯುವ ನಾಯಕ ಹೊಸಮಲಿ ರಮೇಶ ನಾಯಕ್ ಒತ್ತಾಯ ಕರೋನಾದ ಬಗ್ಗೆ ಜಿಲ್ಲಾಡಳಿತ ನಿಗಾವಹಿಸಲಿ

KRPP youth leader Hosamali Ramesh Nayak urges district administration to monitor Corona

ಜಾಹೀರಾತು
Screenshot 2023 12 29 19 28 44 17 E307a3f9df9f380ebaf106e1dc980bb6 855x1024

ಗಂಗಾವತಿ:ರಾಜ್ಯದಲ್ಲಿ ಈಗಾಗಲೆ ಕರೋನಾ ನಿಧಾನವಾಗಿ ಹೆಚ್ಚಳವಾಗುತ್ತಿದ್ದು ಇನ್ನೂ ನಮ್ಮ ಕೊಪ್ಪಳ ಜಿಲ್ಲೆಗೆ ಇನ್ನು ಕಾಲಿರಿಸಿಲ್ಲ. ಜಿಲ್ಲೆಯ ಜನತೆ ಆರೋಗ್ಯ ರಕ್ಷಣೆಯ

ದೃಷ್ಟಿಯಿಂದ ಕೂಡಲೆ ಜಿಲ್ಲಾಡಳಿತ ಸಕಲ

ಮುಂಜಾಗ್ರತಾ ಸಿದ್ಧತೆ ಕೈಗೊಳ್ಳಬೇಕು ಎಂದು ಕೆಆರ್ ಪಿ.ಪಿ.ಯುವ ಮುಖಂಡ ಹೊಸಮಲಿ ರಮೇಶ ನಾಯಕ್ ಒತ್ತಾಯಿಸಿದ್ದಾರೆ. 

ಈ ಬಗ್ಗೆ ಮಾತನಾಡಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಕೈಗೊಂಡ ಸಿದ್ದತೆಗಳ ಪರಿಶೀಲನೆ ನಡೆಸಬೇಕು. ಬಳಿಕ ಎಲ್ಲಾ ಇಲಾಖೆಯ ಅಧಿಕಾರಿಗಳ ಸಭೆ ನಡೆಸಬೇಕು. ಕರೋನಾ ಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಬೇಕು.

ಕರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಕೇವಲ ಔಪಚಾರಿಕ ಸಭೆಗಳು ನಡೆದಿವೆ. ಅದು ಅನುಷ್ಠಾನಕ್ಕೆ ಬರಬೇಕು. ಜಿಲ್ಲೆಯಲ್ಲಿ ನಡೆಯುವ ಸಾರ್ವಜನಿಕ ಉತ್ಸವ, ಸಭೆ, ಸಮಾರಂಭಗಳ ಮೇಲೆ ಜಿಲ್ಲಾಡಳಿತ ನಿಗಾವಹಿಸಬೇಕು.

ಅಲ್ಲದೇ ವರ್ಷಾಚರಣೆ ಸೇರಿದಂತೆ ಸಭೆ-ಸಮಾರಂಭದಲ್ಲಿ ಜನದಟ್ಟಣೆ ಅಧಿಕವಾಗದಂತೆ ತಡೆಯಲು ಪೊಲೀಸ್ ಇಲಾಖೆಯ ನೆರವಿನೊಂದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮಾಸ್ಕ್ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೊಸಮಲಿ ರಮೇಶ ನಾಯಕ್ ಒತ್ತಾಯಿಸಿದ್ದಾರೆ

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.