Breaking News

ಗಂಗಾವತಿ-ವಿಜಯಪುರ ನೂತನ ರೇಲ್ವೆ ,ನಿಲ್ದಾ ಮೇಲ್ದರ್ಜೆಗೆ:ಸಂಸದರಿಗೆ ಕೃತಜ್ಞತೆ.

Gangavati-Vijaypur New Railway, Nilda for Upgrading: Thanks to MPs.

ಜಾಹೀರಾತು

ಗಂಗಾವತಿ:ಕೊಪ್ಪಳ ಲೋಕಸಭಾ ಕ್ಷೇತ್ರದ ಸದಸ್ಯರಾದ ಸಂಗಣ್ಣ ಕರಡಿಯವರು ಗಂಗಾವತಿ ಮತ್ತು ಭಾನಾಪೂರ ರೇಲ್ವೆ ನಿಲ್ದಾಣ ಮೇಲ್ದರ್ಜೆಗೆ ಏರಿಸಲು ಮತ್ತು ಜಿಲ್ಲೆಯ ವಿವಿಧ ರೇಲ್ವೆ ಸೌಲಭ್ಯ ಒದಗಿಸಲು ಒತ್ತಾಯಿಸಿ, ಹುಬ್ಬಳ್ಳಿಯ ನೈರುತ್ಯ ರೇಲ್ವೆ ವಿಭಾಗದ ಜನರ ಮ್ಯಾನೇಜರ್ ಅವರನ್ನು ಭೇಟಿಯಾಗಿ,ಒತ್ತಾಯಿಸಿದ್ದಾರೆ.

ಗಂಗಾವತಿ ರೇಲ್ವೆ ಸ್ಟೇಷನ್ ನಲ್ಲಿ ಎಕ್ಸಿಲೇಟರ್,ಲಿಫ಼್ಟ ಅಳವಡಿಸಲು ಮತ್ತು ಅಧಿಕೃತ ರೇಲ್ವೆ ಸಿಬ್ಬಂದಿ ಹೊಂದಿರುವ ಟಿಕೆಟ್ ಕೌ೦ಟರ್ ಆರಂಭಿಸಲು ಸಂಸದರು ಆಗ್ರಹಿಸಿದ್ದು,ಅದಕ್ಕೆ ರೇಲ್ವೆ ಇಲಾಖೆ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಸಂಸದರ ಕೋರಿಕೆಯ ಪ್ರಕಾರ ಗಂಗಾವತಿ-ವಿಜಯಪುರ ನೂತನ ರೇಲ್ವೆ ಆರಂಭವಾಗಲಿದೆ ಮತ್ತು ಅಯೋಧ್ಯೆ-ಗಂಗಾವತಿ ನಡುವೆ ರಾಮಾಂಜನೇಯ ಎಕ್ಸ್‌ಪ್ರೆಸ್‌ ರೇಲ್ವೆ ಆರಂಭಿಸಲು ಆಗ್ರಹಿಸಿ ಪತ್ರ ಬರೆದಿದ್ದಾರೆ.

ಗಾಂಧೀಜಿಯವರು ಇಳಿದಿದ್ದ ಭಾನಾಪೂರ ರೇಲ್ವೆ ಸ್ಟೇಷನ್ ಅಭಿವೃದ್ಧಿ ಪಡಿಸಲು ಸಂಸದರು ಈ ಸಂಧರ್ಬದಲ್ಲಿ ಒತ್ತಾಯಿಸಿದ್ದಾರೆ.

ಗಿಣಿಗೇರಾ ರೇಲ್ವೆ ನಿಲ್ದಾಣದ ನಾಲ್ಕನೇ ಪ್ಲಾಟ್ ಫಾರಂ ಎತ್ತರಿಸಲು ಸಂಗಣ್ಣ ಕರಡಿ ಒತ್ತಾಯಿಸಿದ್ದಾರೆ.ಈ ಬಗ್ಗೆ ಮಾಹಿತಿ ಪಡೆದ ಕರ್ನಾಟಕ ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ಧೇಶಕ ಹಾಗೂ ಕೊಪ್ಪಳ ಜಿಲ್ಲೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಸಂಸದರಿಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

About Mallikarjun

Check Also

1000184549

ರಾಜ್ಯ ಮಟ್ಟದ ಖಾದಿ ಗ್ರಾಮೋದ್ಯೋಗ ವಸ್ತು ಪ್ರದರ್ಶನ,ಮಾರಾಟ ಮೇಳಕ್ಕೆ ತೆರೆ: ರೂ. 1.50 ಕೋಟಿ ವಹಿವಾಟ

State-level Khadi Village Industries Exhibition, Sale Fair opens: Rs. 1.50 crore turnover ಕೊಪ್ಪಳ ಸೆಪ್ಟೆಂಬರ್ 03 …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.