ಎಸ್.ಕೆ.ಎನ್.ಜಿ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆದ ಆರೋಗ್ಯ ಜಾಗೃತಿ‌ ಕಾರ್ಯಕ್ರಮ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Health awareness program successfully held at SKNG College

ಎಸ್.ಕೆ.ಎನ್.ಜಿ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆದ ಆರೋಗ್ಯ ಜಾಗೃತಿ‌ ಕಾರ್ಯಕ್ರಮ

ಜಾಹೀರಾತು


ಗಂಗಾವತಿ : ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರಕಾರಿ‌ ಪ್ರಥಮ‌ ದರ್ಜೆ ಕಾಲೇಜು, ಯುವ ರೆಡ್ ಕ್ರಾಸ್ ಘಟಕ‌ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಇವುಗಳ ಸಹಯೋಗದಲ್ಲಿ ಬುಧವಾರ ‘ ಹದಿಹರೆಯದವರ ಆರೋಗ್ಯ – ಸಮಸ್ಯೆ ಮತ್ತು ಪರಿಹಾರ’ ಕುರಿತ ಆರೋಗ್ಯ ಜಾಗೃತಿ‌‌ ವಿಶೇಷ ಉಪನ್ಯಾಸ, ವೈದ್ಯರೊಂದಿಗೆ ಮುಖಾಮುಖಿ ಕಾರ್ಯಕ್ರಮ‌ ಯಶಸ್ವಿಯಾಗಿ‌ ಜರುಗಿತು.

ಕಾಲೇಜಿನ ಡಾ. ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಆರಂಭದಲ್ಲಿ ಕಾಲೇಜು ಅಭಿವೃದ್ದಿ ಸಮಿತಿ‌ ಉಪಾಧ್ಯಕ್ಷರಾದ ವೀರೇಶ ಬಲಕುಂದಿಯವರು ಸಸಿಗೆ ನೀರುಣಿಸುವ ಮೂಲಕ‌ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಹದಿಹರೆಯದ ದಿನಗಳಲ್ಲಿ ಆರೋಗ್ಯ ಬಹಳ‌ ಮುಖ್ಯ. ಆದ್ದರಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆಯ‌ ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚಿನ‌ ಕಾಳಜಿ ವಹಿಸಬೇಕು. ದೇಶದ ಭವಿಷ್ಯ ತರುಣ- ತರುಣಿಯರ ಮೇಲೆ ನಿಂತಿದೆ. ಸುಭದ್ರ ಸಮಾಜ, ರಾಷ್ಟ್ರ ನಿರ್ಮಾಣಕ್ಕಾಗಿ ಯುವಕ‌ ಯುವತಿಯರು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ‌ ಕಾಳಜಿ ವಹಿಸಬೇಕು, ಸಮಸ್ಯೆ ಸವಾಲುಗಳನ್ನು ಆತ್ಮ ವಿಶ್ವಾಸದಿಂದ ಎದುರಿಸಿ ಧೈರ್ಯದಿಂದ ಬದುಕು‌ ಕಟ್ಟಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮ‌ದ ವಿಶೇಷ ಉಪನ್ಯಾಸಕರಾಗಿದ್ದ ಬೆಂಗಳೂರು ಸೇಂಟ್ ಜಾನ್ಸ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಸುರೇಶ ಬಿರಾದಾರ, ಹಾಗೂ ಹಾಸನದ ಮಹಿಳಾ ವೈದ್ಯರಾದ ಡಾ. ಶಿಫಾಲಿಯವರು ವಿಶೇಷ ಉಪನ್ಯಾಸ‌ ನೀಡಿ ಆರೋಗ್ಯ, ಶುಚಿತ್ವದ ಮಹತ್ವ, ವಹಿಸಬೇಕಾದ ಕಾಳಜಿ, ಯೋಗ, ನಡಿಗೆ, ಒಳ್ಳೆಯ ಆಹಾರ ಕ್ರಮ, ಸೇವಿಸುವ ಆಹಾರದಲ್ಲಿರಬೇಕಾದ ಪೌಷ್ಠಿಕತೆ , ದೇಹಾರೋಗ್ಯ ಕಾಪಾಡಿಕೊಳ್ಳುವದರಿಂದಾಗುವ ಪ್ರಯೋಜನಗಳು ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಸಲಹೆಗಳನ್ನು ನೀಡಿದರು. ವಿದ್ಯಾರ್ಥಿಗಳ ಆರೋಗ್ಯ‌ ಸಮಸ್ಯೆಗಳನ್ನು ಆಲಿಸಿ ಪರಿಹಾರ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ.ಶಿವರಾಜ ಗುರಿಕಾರ ಅವರು‌ ಮಾತನಾಡಿ, ಆರೋಗ್ಯದ ಮಹತ್ವ ವಿದ್ಯಾರ್ಥಿ‌ ಜೀವನದಲ್ಲಿ ವಹಿಸಬೇಕಾದ ಕಾಳಜಿ ಕುರಿತು‌ ತಿಳಿಸಿದರು.
ಈ‌ ನೂರಾರು ವಿದ್ಯಾರ್ಥಿಗಳು ವೈದ್ಯರೊಂದಿಗೆ ವಾರೋಗ್ಯ ಸಮಸ್ಯೆಗಳ‌ ಬಗ್ಗೆ ಸಲಹೆ , ಚಿಕಿತ್ಸೆ ಪಡೆದರು. ಈ ವೇಳೆ ವಿಶೇಷ ಉಪನ್ಯಾಸ ನೀಡಿದ ಡಾ. ಸುರೇಶ ಬಿರಾದಾರ, ಡಾ.ಶಿಫಾಲಿ ಇವರಿಗೆ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಆಂತರಿಕ ಗುಣಮಟ್ಟ‌ ಕೋಶದ ಸಂಯೋಜಕರಾದ ಮಂಜುನಾಥ್ ಕೆ.ಎಚ್, ಸಖಿ‌ ಮಹಿಳಾ ಘಟಕದ ಸಂಯೋಜಕರಾದ ಮೆಹ್ತಾಬ್ ಅಂಜುಮ್, ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಪವನ ಗುಂಡೂರ ಉಪಸ್ಥಿತರಿದ್ದರು.
ಈ ವೇಳೆ ಯುವ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಅಕ್ಕಿ‌ ಮಾರುತಿಯವರು ಸಂಸ್ಕೃತ ಶ್ಲೋಕದ ಮೂಲಕ ಪ್ರಾರ್ಧಿಸಿ, ಪ್ರಸ್ತಾವಿಕವಾಗಿ‌ ಮಾತನಾಡಿದರು. ಉಪನ್ಯಾಸಕರಾದ ಡಾ. ಬಸವರಾಜ್ ಎಸ್.‌ಗಡಾದ ಕಾರ್ಯಕ್ರಮ‌ ನಿರೂಪಿಸಿದರು ಭೀಮಪ್ಪ ಸ್ವಾಗತಿಸಿದರು, ಡಾ. ಮೆಹ್ತಾಬ್ ಅಂಜುಮ್ ರವರು ವಂದಿಸಿದರು.
ಈ ವೇಳೆ ವಿವಿಧ ವಿಭಾಗದ ಬೋಧಕ‌ ಸಿಬ್ಬಂಧಿ, ನೂರಾರು ವಿದ್ಯಾರ್ಥಿನಿಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Total Views: 0
Share This Article