
Distribution of tool kits to workers as part of Labour Day celebrations by Shri Sevalal Mahajaraj Construction Workers' Association.

ಶ್ರೀ ಸೇವಾಲಾಲ್ ಮಹಾಜರಾಜ್ ಕಟ್ಟಡ ಕಾರ್ಮಿಕರ ಸಂಘದಿಂದಕಾರ್ಮಿಕ ದಿನಾಚರಣೆ ಅಂಗವಾಗಿ ಕಾರ್ಮಿಕರಿಗೆ ಟೂಲ್ ಕಿಟ್ ಗಳ ವಿತರಣೆ.

ಗಂಗಾವತಿ: ನಗರದ ಶ್ರೀ ಸೇವಾಲಾಲ್ ಸರ್ಕಲ್ ನಲ್ಲಿ ಇಂದು ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕರ ಸಂಘ (ರಿ) ವತಿಯಿಂದ “ವಿಶ್ವ ಕಾರ್ಮಿಕ ದಿನಾಚರಣೆಯನ್ನು” ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಸೇವಾಲಾಲ್ ಮಹಾರಾಜರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಕಾರ್ಮಿಕರ ಕಾಯಕಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಕಾರ್ಮಿಕ ಮಂಡಳಿ ಹಾಗೂ ಸಂಘದ ಸಹಯೋಗದೊಂದಿಗೆ ಅರ್ಹ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಟೂಲ್ ಕಿಟ್ ಗಳನ್ನು ವಿತರಿಸಲಾಯಿತು.
ಸಂಘದ ಅಧ್ಯಕ್ಷರಾದ ಪಾಂಡು ನಾಯ್ಕ್ ಮೇಸ್ತ್ರಿ ಕಾರ್ಮಿಕರನ್ನು ಉದ್ದೇಶಿಸಿ “ದೇಶದ ಪ್ರಗತಿಯಲ್ಲಿ ಕಾರ್ಮಿಕರ ಪಾತ್ರ ಬಹಳ ದೊಡ್ಡದು. ಶ್ರಮಿಕ ವರ್ಗದವರ ಕಲ್ಯಾಣಕ್ಕಾಗಿ ನಮ್ಮ ಸಂಘವು ಸದಾ ಶ್ರಮಿಸುತ್ತದೆ. ಕಾರ್ಮಿಕರ ಹಿತರಕ್ಷಣೆ ಮತ್ತು ಒಗ್ಗಟ್ಟಿನ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಕಾರ್ಮಿಕರಿಗೆ ಸಿಹಿ ವಿತರಿಸಿ ಶುಭಾಶಯ ಕೋರಲಾಯಿತು.
ಶ್ರೀ ಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕ ಸಂಘದ ವೆಂಕಟೇಶ್ ಮೇಸ್ತ್ರಿ, ಹನುಮಂತ ಮೇಸ್ತ್ರಿ, ದಾವಲ್ ಸಾಬ್ ಮೇಸ್ತ್ರಿ, ಸೇಟು ಮೇಸ್ತ್ರಿ ವೆಂಕಣ್ಣ,. ಕೃಷ್ಣ ನಾಯ್ಕ ಮೇಸ್ತ್ರಿ ರವಿಚಂದ್ರ ಮೇಸ್ತ್ರಿ, ವೆಂಕಟೇಶ ಸಂಘದ ಸದಸ್ಯರು ಇನ್ನಿತರರು ಉಪಸ್ಥಿತರಿದ್ದರು.
