ಗಂಗಾವತಿಯ ಸಿದ್ಧಿಕೆರೆಯಲ್ಲಿ ಬೇಡರ ಕಣ್ಣಪ್ಪನ ಜಯಂತಿ ಆಚರಣೆ

Mallikarjun
1 Min Read

ಗಂಗಾವತಿಯ ಸಿದ್ಧಿಕೆರೆಯಲ್ಲಿ ಬೇಡರ ಕಣ್ಣಪ್ಪನ ಜಯಂತಿ ಆಚರಣೆ

Bedara Kannappa's birthday celebrated at Siddikere on the banks of Gangavathi

ಗಂಗಾವತಿ: ಬೇಟೆಗಾರನಾದ ಕಣ್ಣಪ್ಪ ಶಿವನಿಗೆ ತನ್ನ ಕಣ್ಮನ್ನು ನೀಡುವ ಮುಖಾಂತರ ಶಿವಮೆಚ್ಚಿದ ಬೇಡರ ಕಣ್ಣಪ್ಪ ಎಂದು ಖ್ಯಾತಿಯನ್ನು ಪಡೆದಿದ್ದು, ಶಿವನೊಲಿದ ದಿನರ್ವೆ ಶಿವರಾತ್ರಿಯಾಗಿದೆ ಎಂದು ಅಖಿಲ ಪಿರಾಮಿಡ್ ಧ್ಯಾನ ಕೇಂದ್ರದ ಶ್ರೀಮತಿ ಲಲಿತಾ ವಗ್ಗೆ ಹೇಳಿದರು.

ಅವರು ಗಂಗಾವತಿಯ ಸಿದ್ಧಿಕೆರೆಯಲ್ಲಿ ಫೆಬ್ರವರಿ-15 ರವಿವಾರದಂದು ಬೇಡರ ಕಣ್ಣಪ್ಪ ಸಂಘ ಗಂಗಾವತಿ ಹಾಗೂ ಗಂಗಾವತಿ ತಾಲೂಕು ಶ್ರೀಗುರು ಆದಿಕವಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಕಲಾವಿದರ ಸಂಘದಿಂದ ಆಚರಿಸಿದ ಬೇಡರ ಕಣ್ಣಪ್ಪ ಜಯಂತಿಯಲ್ಲಿ ಬೇಡರ ಕಣ್ಣಪ್ಪ ಭಾವಚಿತ್ರಕ್ಕೆ ಪೂಜೆ ಸಲಿ.ಸಿ ಮಾತನಾಡಿದರು. ದಯಬೇಕು ಸಕಲ ಪ್ರಾಣಿಗಳಲ್ಲಿ, ದಯವೇ ಧರ್ಮದ ಮೂಲ, ಪ್ರತಿ ಪ್ರಾಣಿಗೂ ನಮ್ಮಂತೆ ಬದುಕುವ ಹಕ್ಕಿದೆ. ಮಾಂಸಹಾರ ಬಿಟ್ಟು ಶಾಖಾಹಾರಕ್ಕೆ ಮಹತ್ವ ನೀಡಿ ಎಂದು

ಇದೇ ಸಂದರ್ಭದಲಿ ಕಾಮಧೇನು ನ್ಯೂಟ್ರಿಷನ್ ಸೆಂಟರ್ ನ ಶಿವದೀಪಕ್ ಹಾದಿಮನಿ ಮಾತನಾಡಿ, ಭಕ್ತಿಗೆ ಯಾವುದೇ ನಿಯಮಗಳಿಲ್ಲ.., ದೇವರು ಒಲಿಯಲು ಸತ್ಯ, ಶುದ್ಧ ಕಾಯಕದ ಜೊತೆಗೆ ನಿರ್ಮಲವಾದ ಮನಸ್ಸು ಇರಬೇಕೆಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಿಂಗಾಪುರ ಭೀಮರಾಯ ನಾಯಕ, ಬಸಪ್ಪ ನಾಯಕ ಸೋಮಲಾಪುರ, ಭೀಮಣ್ಯ ನಾಯಕ ಗುಡ್ಡಕಲ್ ಹನುಮಂತಪ್ಪ ನಾಯಕ ಕೋಲಾರ್, ಗಿರಿಶ್ ನಾಯಕ ಬಸವನದುರ್ಗ, ಜಾನ್ ನಾಯಕ ಜೋಗದ ಪ್ರಭಾಕರ ಅರ್ಚಕರು, ರಾಮಣ ನಾಯಕ ತೊಂಡೇಕಟದ, ನಾರಾಯಣ ವಗಾ, ಪರಸಪ್ಪ ನಾಯಕ ಕ್ಯಾಡೇವು, ಸಿಂಗಾಪುರ ಶ್ರೀನಿವಾಸ ನಾಯಕ, ಹೇಮಂತ ತಳಕಲ್ ಶ್ರೀಮತಿ ವಿನುತಾ ಶಿವದೀಪಕ್ ಹಾದಿಮನಿ, ಕುಮಾರಿ ರಿಷಿಕಾ, ಕುಮಾರಿ ಹರ್ಷಿಕಾ ಸೇರಿದಂತೆ ಮತ್ತಿತರು ಇದ್ದರು.

Total Views: 0
Share This Article