
ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ 12ನೆಯ ವಾರ್ಷಿಕೋತ್ಸವ.

ವೈ ಮನಸ್ಸು ತ್ಯಜಿಸಿ ಗುರುಸ್ವಾಮಿ ಸೇರಿದಂತೆ ಶಿಷ್ಯರು ಭಾಗವಿಸುವಂತೆ ಅಧ್ಯಕ್ಷ ಜಟ್ಟಿ ವೀರಪ್ರಸಾದ್ ಕರೆ.
12th anniversary of Sri Ayyappa Swamy Temple.
ಗಂಗಾವತಿ. ಕೊಪ್ಪಳ ಜಿಲ್ಲೆಯ ಗಂಗಾವತಿ ಮಹಾನಗರದ ಸುಕ್ಷೇತ್ರ ಅಯ್ಯಪ್ಪ ಗಿರಿಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ ಆಚರಣೆ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸ ಕಾರ್ಯಗಳು ಆರಂಭಗೊಂಡಿದ್ದು ಈ ಸಂದರ್ಭದಲ್ಲಿ ಮಾಧ್ಯಮದವರು ದೇವಸ್ಥಾನ ಸಮಿತಿಯ ಅಧ್ಯಕ್ಷ ಜಟ್ಟಿ ವೀರ ಪ್ರಸಾದ್ ಅವರೊಂದಿಗೆ ಮಾತನಾಡಿದಾಗ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಯಾವುದೇ ಒಬ್ಬ ವ್ಯಕ್ತಿಯ ಹಕ್ಕು ಅಲ್ಲ ಸಾರ್ವಜನಿಕ ಭಕ್ತಾದಿಗಳಿಗಾಗಿ ನಿರ್ಮಿಸಲಾದ ಸದರಿ ದೇವಸ್ಥಾನಕ್ಕೆ 12ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮ ನಡೆಯುತ್ತದೆ. ದಿನಾಂಕ 2ರಿಂದ ಆರಂಭಗೊಂಡ ದಿನಂಪತಿ ಪೂಜಾ ಕಾರ್ಯಕ್ರಮಗಳ ಜೊತೆಗೆ ದಿನಾಂಕ 12ರಂದು ಕುಂಭೋತ್ಸವ ಹೋಮ ಹ ವನ ಕಾರ್ಯಕ್ರಮಗಳು ಜರುಗಲಿದ್ದು ತಾಲೂಕಾ ಸೇರಿದಂತೆ ವಿವಿಧ ಭಾಗಗಳಿಂದ ಬರುವ ಗುರುಸ್ವಾಮಿಗಳು ಸೇರಿದಂತೆ ಅವರ ಶಿಷ್ಯ ಬಾಂಧವರು ಯಾವುದೇ ಒಂದು ವೈ ಮನಸ್ಸು ಬೇದ ಭಾವ ಸಂಕುಚಿತ ಮನೋಭಾವನೆಗಳನ್ನು ತೊರೆದು ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಅಯ್ಯಪ್ಪ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೈ ಮುಗಿದು ಮುಕ್ತ ಕಂಠ ದಿಂದ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಎಂದಿನಂತೆ ಹೋಮ ಶ್ರೀ ಗಂಗಾದೇಶ್ವರ ಮಹಿಳಾ ಭಜನಾ ಸಂಘದಿಂದ ಭಜನೆ ಲಲಿತ ಸಹಸ್ರ ಪಾರಾಯಣ ಜರುಗಿದವು. ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ 18 ಮೆಟ್ಟಿಲುಗಳಿಗೆ ಪಂಚಲೋಹದ ಕವಚಸಮರ್ಪಣೆಯ ಕಾರ್ಯ ಹಾಗೂ ಗುಡಿ ಗೋಪುರದ ಸುಣ್ಣ ಬಣ್ಣ ಹಚ್ಚುವ ಕೆಲಸ ಕಾರ್ಯಗಳು ಭರದಿಂದ ಸಾಗಿದವು. ಒಟ್ಟಾರೆ ಅಯ್ಯಪ್ಪ ಗಿರಿಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಎರಡನೆಯ ಶಬರಿಮಲೈ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನಾಗಿಸಲು ಸರ್ವ ಜನಾಂಗದವರ ಸಹಕಾರ ಅವಶ್ಯವಾಗಿದೆ ಎಂದು ಹೇಳಿದರು




