Breaking News

ಕೊಟ್ಟೂರು ಪಟ್ಟಣ ಪಂಚಾಯಿತಿಗೆ ಹೊಸ ಜೆ.ಸಿ.ಬಿ. ಯಂತ್ರ : ಅಧ್ಯಕ್ಷರಾದ ರೇಖಾ ಬದ್ದಿ ರಮೇಶ್ ರವರಿಂದ ಉದ್ಘಾಟನೆ

New JCB for Kottoor Town Panchayat. Yantra: Inauguration by President Rekha Baddi Ramesh

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೊಟ್ಟೂರು ಪಟ್ಟಣದ ಪಟ್ಟಣ ಪಂಚಾಯಿತಿ ವತಿಯಿಂದ ಹೊಸದಾಗಿ ಜೆ.ಸಿ.ಬಿ. ಯಂತ್ರವನ್ನು ಖರೀದಿ ಮಾಡಿ ಮಂಗಳವಾರ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರೇಖಾ ಬದ್ದಿ ರಮೇಶ್ ರವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಾಧಿಕಾರಿ ನಸುರುಲ್ಲಾ ಈ ಜೆ.ಸಿ.ಬಿ. ಯಂತ್ರವನ್ನು ಪಟ್ಟಣದ ಸಾರ್ವಜನಿಕರಿಗೆ ಶವ ಸಂಸ್ಕಾರ ಮಾಡಲು ಗುಂಡಿ ತೆಗೆಯುವ ಸಲುವಾಗಿ ಉಪಯೋಗಿಸಲಾಗುತ್ತದೆ ಎಂದು ತಿಳಿಸಿದರು. ಪಟ್ಟಣದಲ್ಲಿ ಯಾರೇ ಮೃತರಾದರೂ ಪಟ್ಟಣ ಪಂಚಾಯಿತಿಯ ಕಿರಿಯ ಆರೋಗ್ಯ ಸಹಾಯಕರನ್ನು ಸಂಪರ್ಕಿಸಿದರೆ, ಈ ಜೆ.ಸಿ.ಬಿ. ಯಂತ್ರ ಹಾಗೂ ಮುಕ್ತಿ ವಾಹನವನ್ನು ಕಳಿಸಿಕೊಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸಿದ್ದಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷರು ಅಂಜಿನಮ್ಮ, ಪಟ್ಟಣ ಪಂಚಾಯಿತಿ ಸದಸ್ಯರ ಕೆ ಶಫೀ , ಕೆಂಗರಾಜ್, ತೋಟದ ರಾಮಣ್ಣ, ವಿನಯ್ ಕುಮಾರ್ ಹೊಸಮನಿ, ಟಿ ರುಕ್ಸನ ಭಾನು, ಕಡ್ಲಿ ವೀರೇಶ,,ಪ್ರಮುಖ ಮುಖಂಡರಾದ ಬದ್ದಿ ಮರಿಸ್ವಾಮಿ,ರಾಜೀವ್, ವಿರುಪಾಕ್ಷಿ ,ಕಾಸಲ್ ಪ್ರಕಾಶ್, ಉಪಸ್ಥಿತರಿದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *