Breaking News

ವಿದ್ಯಾರ್ಥಿನಿಯರ ಕರಾಟೆ ತರಬೇತಿ ಕಾರ್ಯಕ್ರಮಕ್ಕೆ ಎಸ್ ಡಿಎಮ್ ಸಿ ಹಾಗೂ ಮುಖ್ಯೋಪಾಧ್ಯಾಯರಿಂದ ಚಾಲನೆ,,

Karate training program for female students launched by SDMC and Headmaster.


ಜಾಹೀರಾತು
IMG 20241129 WA0303

ಕೊಪ್ಪಳ : ತಾಲೂಕಿನ ಹೃದಯ ಭಾಗದಲ್ಲಿರುವ ಆದರ್ಶ ವಿದ್ಯಾಲಯ ಶಾಲೆಯಲ್ಲಿ ಶುಕ್ರವಾರದಂದು ಹೆಣ್ಣು ಮಕ್ಕಳ ಆತ್ಮ ರಕ್ಷಣೆಗಾಗಿ ಕರಾಟೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು .

ಈ ವೇಳೆ ಅಧ್ಯಕ್ಷತೆ ವಹಿಸಿ ಎಸ್ ಡಿ ಎಂ ಸಿ ಅಧ್ಯಕ್ಷ ಈಶಪ್ಪ ಕಾತರಕಿ ಮಾತನಾಡಿ ಇಂದಿನ ದಿನಮಾನಗಳಲ್ಲಿ ಕರಾಟೆ ಅತ್ಯವಶ್ಯಕವಾಗಿದ್ದು ಮಹಿಳೆಯರ ಆತ್ಮ ರಕ್ಷಣೆಗೆ ಸಹಕಾರಿಯಾಗುವುದಲ್ಲದೇ ಸುಸ್ಥಿರ ಸಮಾಜದಲ್ಲಿ ಆರೋಗ್ಯವಂತರಾಗಿರಲು ಸಹಾಯಕವಾಗುತ್ತದೆ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ನಂತರ ಶಾಲೆಯ ಮುಖ್ಯಶಿಕ್ಷಕ ಪ್ರಕಾಶ್ ಬಿ ತಗಡಿಮನಿ ಮಾತನಾಡಿ ಸರ್ಕಾರ ಮಹಿಳೆಯರ ಮತ್ತು ಮಕ್ಕಳ ಸಂರಕ್ಷಣೆಗಾಗಿ ಸುಮಾರು ಕಾಯ್ದೆಗಳನ್ನು ಜಾರಿಗೊಳಿಸುತ್ತದೆ ಅದರಲ್ಲಿ ಈ ಕರಾಟೆ ಕಲೆ ಕೂಡ ಒಂದು ಎಂದರು.

ಶಾಲೆಯ ಕರಾಟೆ ಶಿಕ್ಷಕ ರಾಘವೇಂದ್ರ ಅರಕೆರೆ ಅವರು ಕರಾಟೆಯ ಕುರಿತು ಸವಿಸ್ತಾರವಾಗಿ ತಿಳಿಸಿಕೊಡುತ್ತಾರೆ ಅವರ ಮಾರ್ಗದರ್ಶನದಲ್ಲಿ ಕಲಿತು ಒಳ್ಳೆಯ ಆರೋಗ್ಯ ನಿಮ್ಮದಾಗಿಸಿಕೊಳ್ಳಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪಾಲಕರಾದ ವಿನಾಯಕ ಜೋಶಿ , ಹಿರಿಯ ಶಿಕ್ಷಕ ಉದಯಕುಮಾರ್ . ಸಹ ಶಿಕ್ಷಕಿ ಶಾರದಾ, ಸುನಿತಾ , ಗಂಗಾಧರ ಸಾಲಿಮನಿ ಹಾಗೂ ಶಿಕ್ಷಕರು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

About Mallikarjun

Check Also

screenshot 2025 10 25 17 53 12 59 6012fa4d4ddec268fc5c7112cbb265e7.jpg

ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವದ ಪೂರ್ವಭಾವಿ ಸಭೆ

Preparatory meeting for the centenary celebrations of Shivaratri Rajendra Mahaswamy. ವರದಿ: ಬಂಗಾರಪ್ಪ .ಸಿ .ಹನೂರು : …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.