
The short URL of the present article is: https://kalyanasiri.in/g9ye
ಮೈಲಾರ ಮಲ್ಲಣ್ಣ ದೇವಸ್ಥಾನದ ಜಾತ್ರಾ ಸಂಪನ್ನ

ಭಾಲ್ಕಿ, ಡಿ. ೨೬- ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ನಡೆದ ಒಂದು ತಿಂಗಳ ಕಾಲ ನಡೆದ ಮಲ್ಲಣ್ಣ ದೇವರ ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ದೇವಸ್ಥಾನದ ಹಿರಿವಗ್ಗೆ, ಪೂಜಾರಿಗಳಿಗೆ ದೇವಸ್ಥಾನದ ವತಿಯಿಂದ ಅದ್ದೂರಿ ಸನ್ಮಾನ ಮಾಡಲಾಯಿತು.
ದೇವಸ್ಥಾನದ ಸುತ್ತ-ಮುತ್ತಲಿರುವ ಗಣೇಶ ಕುಂಡ, ತೆಪ್ಪದ ಕುಂಡ, ಜ್ಯೋರ್ತಿಲಿಂಗ ದೇವಸ್ಥಾನ, ಘೃತಮಾರಿ ದೇವಸ್ಥಾನಗಳಿಗೆ ನೈವದ್ಯ ತೋರಿ ಪೂಜೆ ಸಲ್ಲಿಸಲಾಯಿತು.
ಜಾಹೀರಾತು

ದೇವಸ್ಥಾನ ವತಿಯಿಂದ ಹಿರಿವಗ್ಗೆಗಳಿಗೆ ಮತ್ತು ದೇವಸ್ಥಾನದ ಆಡಳಿತಾಧಿಕಾರಿಗಳಾದ ಆನಂತರಾವ ಕುಲಕರ್ಣಿ ನೂತನ ಕಾರ್ಯದರ್ಶಿಯಾದ ಸಂಜೀವಕುಮಾರ ಸುಂದಾಳ ಅವರಿಗೂ ಕಂಬಳಿ ಹೊದಿಸಿ ಸನ್ಮಾನಿಸಲಾಯಿತು.

The short URL of the present article is: https://kalyanasiri.in/g9ye






