Daily newspaper editor Mahadevayya passes away

ಮಳವಳ್ಳಿ: ಸಮೀಪದ ಶಿರಮಹಳ್ಳಿ ಗ್ರಾಮದನಿವಾಸಿ ಹಾಗೂ ಆಕ್ರಂದನ ದಿನಪತ್ರಿಕೆಯ ಸಂಪಾದಕ ಮಹದೇವಯ್ಯ(59) ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ ಹಾಗೂ ಓರ್ವಪುತ್ರ, ಸಹೋದರಿಯರು ಇದ್ದಾರೆ. ಶನಿವಾರ ಮಧ್ಯಾಹ್ನ ಮೃತರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಅಂತಿಮದರ್ಶನ: ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಸಿ.ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಎ.ಬಿ.ಚೇತನ್ ಕುಮಾರ್,ಜಿಲ್ಲಾ ನಿರ್ದೇಶಕ ಎಚ್.ಉಮೇಶ್ ಮಾಳಿಗೆ, ಹಿರಿಯಪತ್ರಕರ್ತರಾದ ಎ.ಎನ್.ಪ್ರಭಾಕರ್, ಎಂ.ಮಲ್ಲಿಕಾರ್ಜುನಸ್ವಾಮಿ, ಎಂ.ನಾಗೇಶ್,ಜಯರಾಜು, ಶಿವಕುಮಾರ್, ಸಿದ್ದಾರ್ಥ,ಲಿಂಗರಾಜು, ಶಿವಸ್ವಾಮಿ, ರಾಮಕೃಷ್ಣ, ವೇಣುಗೋಪಾಲ್, ಸೇರಿದಂತೆ ಹಲವು ಪತ್ರಕರ್ತರು ಹಾಗೂ ಮುಖಂಡರುಗಳು ಅಂತಿಮ ದರ್ಶನ ಪಡೆದರು.