Breaking News

ಕಮಿಷನರ್ ದಯಾನಂದ್ ರವರನ್ನು ಸಸ್ಪೆಂಡ್ ಮಾಡಿರುವುದುಖಂಡನೀಯ. ಭಾಸ್ಕರ್.

The suspension of Commissioner Dayanand is condemnable. Bhaskar.

ಜಾಹೀರಾತು

ತಿಪಟೂರು : ನಗರದ ಹಾಸನ ಸರ್ಕಲ್ ನಂದಿನಿ ಡೈರಿ ಮುಂಬಾಗ ಪತ್ರಿಕೆಯನ್ನು ಉದ್ದೇಶಿಸಿ ಮಾತನಾಡಿದ ಡಾ.ಭಾಸ್ಕರ್ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ,ಮಾಡೋ ರೀತಿಯಲ್ಲಿ ಸರ್ಕಾರದ ನಡೆ
ಐಪಿಎಲ್ ಪಂದ್ಯದಲ್ಲಿ ಆರ್ ಸಿ ಬಿ ಜಯಗಳಿಸಿ ಐತಿಹಾಸಿಕ ದಾಖಲೆಯನ್ನು ಸ್ಥಾಪಿಸಿದ್ದು ಸಂತೋಷದ ವಿಚಾರ ಇದು ಇಡೀ ಕರುನಾಡಿಗೆ ಹೆಮ್ಮೆಯ ವಿಚಾರ, ಇಡೀ ಕರ್ನಾಟಕ ಈ ಜಯಭೇರಿಯನ್ನು ಅವರದೇ ಆದ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡಿದ್ದು ತುಂಬಾ ಅಭಿಮಾನದ ವಿಚಾರ ಆದರೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿದ್ದು ಮಾತ್ರ ನಾಚಿಗೆಗೇಡು, ಈ ವಿಚಾರವಾಗಿ ಗೃಹ ಮಂತ್ರಿಗಳಾದ ಜಿ ಪರಮೇಶ್‍ರವರು ನೀಡಿರುವ ಹೇಳಿಕೆ ತುಂಬಾ ಬಾಲಿಶವಾದುದು ಇಡಿ ನಾಡೆ ಸಂಭ್ರಮಾಚರಣೆಯಲ್ಲಿ ಮುಳುಗಿರುವಾಗ ಕೇವಲ ಎರಡರಿಂದ ಎರಡುವರೆ ಲಕ್ಷ ಜನ ಸೇರುತ್ತಾರೆಂಬ ನಿರೀಕ್ಷೆಯಲ್ಲಿ ಆತುರವಾಗಿ ಯಾವುದೇ ಕಾನೂನಾತ್ಮಕವಾದ ಮತ್ತು ಭದ್ರತೆ ದೃಷ್ಟಿಯಲ್ಲಿ ರೂಪರೇಷೆ ಮಾಡದೆ ಕಾರ್ಯಕ್ರಮ ಆಯೋಜಿಸಿದ್ದು ಮೂರ್ಖತನ ಆದರೆ ಅಲ್ಲಿ ಸೇರಿದ್ದು ಸುಮಾರು ಏಳುವರೆಯಿಂದ ಎಂಟು ಲಕ್ಷ ಜನ ಅದರ ಹೊರತಾಗಿ ಗೇಟ್ ನಂಬರ್ 7ರಲ್ಲಿ ಉಚಿತ ಪಾಸ್ ಗಳನ್ನು ನೀಡುವುದಾಗಿ ಘೋಷಣೆ ಮಾಡಲಾಯಿತು ಎಂದು ತಿಳಿದು ಪಾಸ್ಗಾಗಿ ಜನಗಳು ಮುಗಿಬಿದ್ದಾಗ ನೂಕುಲು ನೂಕುನುಗ್ಗುಲುಂಟಾಗಿದೆ ಈ ಸಂದರ್ಭದಲ್ಲಿ ಅಮಾಯಕರ ಜೀವ ಹಾನಿಯಾಗಿದೆ ತದನಂತರ ಪೊಲೀಸರು ಲಾಠಿಚಾರ್ಜ್ ಮಾಡಿ ಜನರನ್ನು ಚಿದರಿಸುವ ಪ್ರಯತ್ನ ಮಾಡಿದ್ದಾರೆ ನಿರೀಕ್ಷೆಗೂ ಮೀರಿ ಜನ ಸೇರಿದ್ದರಿಂದ ನೂಕು ನುಗ್ಗಲು ಉಂಟಾಗಿದೆ ಈ ಸಂದರ್ಭದಲ್ಲಿ ಅಮಾಯಕ 11 ಜನ ಪ್ರಾಣ ಕಳೆದುಕೊಂಡಿದ್ದಾರೆ ಈ ಸಂದರ್ಭದಲ್ಲಿ ಪೊಲೀಸರು ಏನು ಮಾಡದೆ ನಿಸಾಯಕರಂತೆ ವಿಧಿ ಇಲ್ಲದೆ ಲಾಠಿಚಾರ್ಜ್ ಮಾಡಿದ್ದಾರೆ ಹಾಗಾಗಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಬೆಂಗಳೂರು ನಗರ ಆಯುಕ್ತರಾದ ದಯಾನಂದ್ ರವರನ್ನು ಹೊಣೆ ಮಾಡಿ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿರುವುದು ಖಂಡನೀಯ ವಿಚಾರ ಹಾಗಾಗಿ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದಿರುವ ಕಾಲ್ತುಳಿತದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಸಾವನ್ನಪ್ಪಿರುವ ಯುವಕರ ಕುಟುಂಬಗಳಿಗೆ ತಲ ಇಪ್ಪತೈದು ಸಾವಿರ ಪರಿಹಾರದ ನೀಡಿ ಹಾಗೂ ಅವರ ಕುಟುಂಬಗಳಿಗೆ ಸರ್ಕಾರಿ ನೌಕರಿಯನ್ನು ನೀಡಬೇಕು, ಎಂದು ಒತ್ತಾಯಿಸಿ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ಜಿಲ್ಲಾಧ್ಯಕ್ಷರಾದ ಡಾ. ಭಾಸ್ಕರ್ ಮತ್ತು ತಿಪಟೂರು ತಾಲೂಕ ಅಧ್ಯಕ್ಷರಾದ ಟಿ ರಾಜು ಬೆಣ್ಣೆನಹಳ್ಳಿ ಆಗ್ರಹಿಸಿದ್ದಾರೆ ಈ ಘಟನೆಯನ್ನು ಕುರಿತು ಖಂಡಿಸಿದ್ದಾರೆ .

ವರದಿ ಮಂಜು ಗುರುಗದಹಳ್ಳಿ

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.