We should preserve the indigenous culture and preserve folk epics: Registrar Prof. B. Ramesh

ಬೆಂಗಳೂರು, ಮೇ, 14; ಯುವ ಸಮೂಹ ಮತ್ತು ಶಿಕ್ಷಣ ಸಂಸ್ಥೆಗಳು ನೆಲಮೂಲ ಸಂಸ್ಕೃತಿಯನ್ನು ಉಳಿಸಿ ಜನಪದ ಮಹಾಕಾವ್ಯಗಳನ್ನು ಸಂರಕ್ಷಿಸಲು ಮುಂದಾಗಬೇಕು ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಿ. ರಮೇಶ್ ಹೇಳಿದ್ದಾರೆ.
ನಗರದ ಎ.ಪಿ.ಎಸ್ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಕರ್ನಾಟಕ ಜಾನಪದ ಅಕಾಡೆಮಿ ಸಹಯೋಗದೊಂದಿಗೆ “ಜನಪದ ಮಹಾಕಾವ್ಯಗಳು ಪರಂಪರೆಯ ಮೌಲ್ಯಗಳು” ವಿಷಯ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಜನಪದ ಮಹಾ ಕಾವ್ಯಗಳು ಯುಗ ಯುಗಗಳ ಕಥನಕ್ಕೆ ಸಾಕ್ಷಿಯಾಗಿವೆ. ಇಂತಹ ಮಹಾ ಕಾವ್ಯಗಳ ಸಂರಕ್ಷಣೆ ಇಂದಿನ ಅಗತ್ಯವಾಗಿದೆ ಎಂದರು.
ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಹಿ.ಚಿ ಬೋರಲಿಂಗಯ್ಯ ಮಾತನಾಡಿ, ‘ಪರಂಪರೆ ಮೆಲುಕಿನಲ್ಲಿ ಜನಪದ ಮಹಾಕಾವ್ಯಗಳ ಸ್ವರೂಪ ಮತ್ತು ಗುಣ ಲಕ್ಷಣಗಳು ಅನನ್ಯ. ಜನಪದ ವೃತ್ತಿಗಾಯಕರ ಸಂಸ್ಕೃತಿ ಮತ್ತು ಪರಂಪರೆಯ ಮೌಲ್ಯಗಳನ್ನು ಇಂದಿನ ಯುವ ಜನತೆಗೆ ಪರಿಚಯಿಸುವ ಅಗತ್ಯವಿದೆ ಎಂದು ತಿಳಿಸಿದರು.
ಎ.ಪಿ.ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿಎ. ಡಾ. ವಿಷ್ಣು ಭರತ್ ಎ.ಎಸ್, ಉಪಾಧ್ಯಕ್ಷ ವಿಜಯ ಭಾಸ್ಕರ್, ಪ್ರಧಾನ ಕಾರ್ಯದರ್ಶಿಗಳು ಪ್ರೊ. ಎ. ಪ್ರಕಾಶ್, ಜಂಟಿ ಕಾರ್ಯದರ್ಶಿಗಳು ಮಂಜುನಾಥ್, ಮೆಂಟರ್ ಮತ್ತು ಟ್ರಸ್ಟಿ ಎ. ಪಿ. ಆಚಾರ್ಯ, ಎ.ಪಿ.ಎಸ್.ಇ.ಟಿ, ಮತ್ತು ಎ.ಪಿ.ಸ್ ಕಲೆ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಬಿ. ಜಯಶ್ರೀ ಉಪಸ್ಥಿತರಿದ್ದರು.