Breaking News

ಸಂಧ್ಯಾ ಹೇರೂರಗೆ ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ.

Best Woman Entrepreneur Award for Sandhya Heroor.

ಜಾಹೀರಾತು

ಗಂಗಾವತಿ: ಕಲ್ಯಾಣ ಕರ್ನಾಟಕ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ಕಲಬುರ್ಗಿ ಈ ಸಂಸ್ಥೆಯಿಂದ ಕೊಡ ಮಾಡುವ ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ, ಇಲ್ಲಿನ ನಗರದ ಸಗಟು ಔಷಧ ಮಾರಾಟಗಾರರಾದ ಶ್ರೀಮತಿ ಸಂಧ್ಯಾ ಪಾರ್ವತಿ ಹೇರೂರ ಅವರಿಗೆ ಲಭಿಸಿದೆ.ಇವರೊಂದಿಗೆ ಶ್ರೀಮತಿ ನಮ್ರತಾ ಪಟಾಟೆ, ಶೀತಲ ಗಿಲ್ಡಾ, ಕುಮಾರಿ ನಂದಿನಿ ರಘೊಜಿ ಇವರುಗಳಿಗೂ ಗಣರಾಜ್ಯೊತ್ಸವ ದಿನವಾದ ಜನವರಿ-29 ರಂದು ಈ ಕಲಬುರ್ಗಿಯ ಎಮ್.ಆರ್.ಎಮ್.ಸಿ. ಮೆಡಿಕಲ್ ಕಾಲೇಜಿನ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

2021 ರಲ್ಲಿ ಕರ್ನಾಟಕ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಮಹಾ ಮಂಡಳಿ ಬೆಂಗಳೂರು ಈ ಸಂಸ್ಥೆ ನೀಡುವ ಮಹಿಳಾ ಶ್ರೇಷ್ಠ ವ್ಯಾಪಾರಿ ಪ್ರಶಸ್ತಿಯನ್ನು ಮತ್ತು ಗಂಗಾವತಿಯ ಮಹಿಳಾ ಸಂಘದಿಂದ ನೀಡಲಾದ ಉತ್ತಮ ಮಹಿಳಾ ಪ್ರಶಸ್ತಿಯನ್ನು ಶ್ರೀಮತಿ ಸಂಧ್ಯಾ ತಮ್ಮದಾಗಿಸಿಕೊಂಡಿದ್ದರು.ಪ್ರಸ್ತುತ ಗಂಗಾವತಿ ತಾಲೂಕು ವೀರಶೈವ ಮಹಾ ಸಭಾ ಘಟಕದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಸಂಧರ್ಭದಲ್ಲಿ ಸಣ್ಣ ಕೈಗಾರಿಕಾ ಖಾತೆಯ ಸಚಿವ ಶರಣಪ್ಪ ದರ್ಶನಾಪೂರ,ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಸಿ,ಮಾಜಿ ಸದಸ್ಯ ಅಮರನಾಥ ಪಾಟೀಲ್, ಕಲ್ಯಾಣ ಕರ್ನಾಟಕ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶಶಿಕಾಂತ ಬಿ.ಪಾಟೀಲ್, ಮಾಜಿ ಅಧ್ಯಕ್ಷ ಪ್ರಶಾಂತ ಎಸ್.ಮಾನಕರ್,ಉಪಾಧ್ಯಕ್ಷ ಚನ್ನ ಮಲ್ಲಿಕಾರ್ಜುನ ಅಕ್ಕಿ ಯಾದಗಿರಿ, ಕಾರ್ಯದರ್ಶಿ ಮಂಜುನಾಥ ಜೆವರ್ಗಿ, ಮಾಜಿ ಕಾರ್ಯದರ್ಶಿ ಶರಣಬಸಪ್ಪ ಎಮ್.ಪಪ್ಪಾ ಮತ್ತು ಸಂಸ್ಥೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.ಈ ಸಂಧರ್ಭದಲ್ಲಿ
ಶ್ರೀಮತಿ ಸಂಧ್ಯಾ ಅವರ ಪತಿ ಅಶೋಕಸ್ವಾಮಿ ಹೇರೂರ, ಮಕ್ಕಳಾದ ಡಾ.ಅಭಿಷೇಕಸ್ವಾಮಿ, ಡಾ.ಅಭಿಲಾಷಾ ಹಾಜರಿದ್ದರು.

About Mallikarjun

Check Also

ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದ ನ್ಯಾಯಾಧೀಶ ರಮೇಶ ಗಾಣಿಗೇರ ಅವರಿಗೆ ಆತ್ಮೀಯ ಬೀಳ್ಕೊಡುಗೆ

A heartfelt farewell to Judge Ramesh Ganigera, who was popular for his social work. ಗಂಗಾವತಿ: …

Leave a Reply

Your email address will not be published. Required fields are marked *