Breaking News

ದೇವದುರ್ಗತಾಲೂಕಿನಲ್ಲಿ ಮತ್ತೆ 15 ಮಕ್ಕಳ ರಕ್ಷಣೆ

Rescue of 15 more children in Devadurga Taluk

ಜಾಹೀರಾತು

ರಾಯಚೂರು ಜನವರಿ 17 (ಕ.ವಾ.): ದೇವದುರ್ಗ ತಾಲೂಕಿನ ಕಾರ್ಮಿಕ ನಿರೀಕ್ಷಕರು, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಮಕ್ಕಳ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಚಟುವಟಿಕೆಗಳಿಗೆ ಕರೆದೊಯ್ಯುತ್ತಿದ್ದ 5 ಸರಕು ಸಾಗಣೆ ವಾಹನಗಳನ್ನು ಜನವರಿ 17ರಂದು ಜಪ್ತಿ ಮಾಡಿ ವಾಹನಗಳಲ್ಲಿ ಒಟ್ಟು 15 ಮಕ್ಕಳು ಕೆಲಸಕ್ಕೆ ಹೋಗುವುದನ್ನು ತಡೆದು ಸಂಬಂಧಪಟ್ಟ ಶಾಲೆಗಳಲ್ಲಿ ಪುನಃ ದಾಖಲಿಸಲಾಯಿತು.
ಮಾಲೀಕರು, ಚಾಲಕರ ಮೇಲೆ ಕ್ರಮ: ಮಕ್ಕಳನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದ
ವಾಹನ ಮಾಲೀಕರು ಚಾಲಕರ ವಿರುದ್ಧ ಪೊಲೀಸ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಕ್ರಮವಹಿಸಿದರು.
ಕಾರ್ಯಾಚರಣೆಯಲ್ಲಿ
ಕಾರ್ಮಿಕ ನಿರೀಕ್ಷಕರಾದ ಮಲ್ಲಪ್ಪ, ರಾಯಚೂರ ಮೋಟಾರ್ ವಾಹನ ನಿರೀಕ್ಷಕರಾದ ರಾಕೇಶ್ ಎಮ್., ಟ್ರಾಫಿಕ್ ಪೊಲೀಸ್ ಠಾಣೆ ಪಿಎಸ್ಐ ನಾರಾಯಣ, ಇ.ಸಿ.ಓ ರಾಜನಗೌಡ, ಬಿ.ಆರ್.ಪಿ ಮನೋಹರ ಶಾಸ್ತ್ರಿ, ಸಿ.ಆರ್.ಪಿಗಳಾದ ದಾಕ್ಷಾಯಿಣಿ, ಬಸವರಾಜ ಸಾತಾಲ್, ಮಹಾದೇವ, ವೆಂಕಟಾಂಜನೇಯ, ರಘು.ಎನ್., ಬಿ.ಎಸ್. ಕೇಶಾಪೂರ, ಟ್ರಾಫಿಕ್ ಪೊಲೀಸ್ ಠಾಣೆ ಸಿಬ್ಬಂದಿ ರಾಜಾಸಾಬ್, ಸಂಗಪ್ಪ ಹಾಗೂ ಹುಸೇನ್ ನಾಯ್ಕ ಅಕೌಂಟೆಂಟ್ ಇದ್ದರು.

About Mallikarjun

Check Also

ವಿಷ ಸೇವಿಸಿದ ವೀರಪ್ಪ ತಂದೆ ಹನುಮಪ್ಪ ಹಿರೇ ಕುರುಬರ ಸಾವು ಅಧಿಕಾರಿಗಳ ಭೇಟಿ

Veerappa’s father Hanumappa Hire, who consumed poison, died, officials meet ಗಂಗಾವತಿ, ತಾಲೂಕಿನಮರಳಿ ಸಮೀಪದ ಆಚಾರ ನರಸಾಪುರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.