31st Anniversary of Swami Vivekananda Public School, Sri Ramanagara

ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಪಬ್ಲಿಕ್ ಸ್ಕೂಲ್ ನ 31 ನೇ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥ ಅವರು ಹಾಗೂ ಶಾಲೆ ಹಳೆಯ ವಿದ್ಯಾರ್ಥಿನಿ ವೈದ್ಯರಾದ ಡಾಕ್ಟರ್. ವರಲಕ್ಷ್ಮಿ ಅವರು ನೆರವೇರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ಪಾರ್ಥಸಾರಥಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪರಿಸರಪ್ರೇಮಿ, ಸಮಾಜ ಸೇವಕ ಮಹ್ಮದ್ ರಫಿ,ಶಾಲೆಯ ಉಪಾಧ್ಯಕ್ಷೆ ಪ್ರಿಯಾಕುಮಾರಿ, ಕಾರ್ಯದರ್ಶಿ ಜಗನ್ನಾಥ ಅಲಂಪಲ್ಲಿ,ಖಜಾಂಚಿ ಶ್ರೀ ವೆಂಕಟಕೃಷ್ಣ ಪೋಲಿನ(ನಾನಿ), ನಿರ್ದೇಶಕರುಗಳಾದ ರಾಮರಾವ್ ಆಲಂಪಲ್ಲಿ, ಕೃಷ್ಣಪ್ರಸಾದ ಪೋಲಿನ, ರಜನಿ ಆಲಂಪಲ್ಲಿ, ಶ್ರುತಿ ಚೆನ್ನಪಾಟಿ ಹೆಡ್ ಮಿಸ್ಟ್ರೆಸ್ ಶಾರೋನ್ ವೇದಿಕೆಯನ್ನು ಅಲಂಕಾರಿಸಿದ್ದರು. ಪ್ರಾಸ್ತವಿಕವಾಗಿ ಶಾಲೆಯ ಕಾರ್ಯದರ್ಶಿ ಜಗನ್ನಾಥ್ ಆಲಂಪಲ್ಲಿ ಮಾತನಾಡಿ ಸ್ವಾಮಿ ವಿವೇಕಾನಂದ ಅವರ ಕನಸಿನ ಸದೃಢ ಯುವಕರನ್ನು ನಿರ್ಮಾಣ ಮಾಡುವ ಜವಾಬ್ದಾರಿ ಶಾಲೆಗಳ ಮೇಲೆ ಪಾಲಕರ ಮೇಲಿದ್ದು ಮಕ್ಕಳು ಹಲವಾರು ದುರಾಭ್ಯಾಸಗಳಿಗೆ, ಮೊಬೈಲ್ ಗೀಳಿಗೆ ಬಲಿಯಾಗುತ್ತಿದ್ದೂ ಆದಷ್ಟು ಬೇಗನೆ ಎಚ್ಚತ್ತುಕೊಳ್ಳಬೇಕಾಗಿದೆ ಜೊತೆಗೆ ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಇತರೆ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ. ಹಲವಾರು ಕಾರ್ಯಕ್ರಮದ ಮೂಲಕ. ಉತ್ತಮ ಸಂಸ್ಕಾರವನ್ನು ಬೆಳೆಸಲಾಗುತ್ತದೆ ಎಂದು ತಿಳಿಸಿದರು. ಪ್ರಿಯಕುಮಾರಿಯವರು ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಶಾರೋನ್ ಶಾಲೆಯ ವಾರ್ಷಿಕ ವರದಿವಾಚನ ಮಾಡಿದರು. ವೇದಿಕೆಯ ಕಾರ್ಯಕ್ರಮದ ನಂತರ ಮಕ್ಕಳಿಂದ, ಮಹಿಳಾ ಪಾಲಕರಿಂದ, ಶಿಕ್ಷಕ/ಶಿಕ್ಷಕಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಕ್ಕಳೊಂದಿಗೆ ಪಾಲಕರು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರ/ಶಿಕ್ಷಕಿಯರು ಮತ್ತು ಸುಮಾರು 3 ಸಾವಿರಕ್ಕೂ ಹೆಚ್ಚು ಪಾಲಕರು, ಗ್ರಾಮದ ಜನರು ಭಾಗವಹಿಸಿದರು