Breaking News

ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಿದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯವಿಶ್ವ ವಿದ್ಯಾಲಯ

Prajapita Brahmakumari Ishwariya Vishwa Vidyalaya celebrated the New Year meaningfully

ಜಾಹೀರಾತು

.
ವರದಿ : ಬಂಗಾರಪ್ಪ .ಸಿ .
ಹನೂರು : ಪ್ರತಿಯೊಬ್ಬ ವ್ಯಕ್ತಿಯೂ ಅವರು ಮಾಡುವ ಕರ್ಮಕ್ಕೆ ತಕ್ಕ ಫಲವನ್ನು ಪಡೆಯುತ್ತಾರೆ. ಆದ ಕಾರಣ ಸದಾ ಭಗವಂತನ ನೆನಪಿನಿಂದ ಒಳ್ಳೆಯ ಕರ್ಮವನ್ನೇ ಮಾಡಬೇಕು. ಸದ್ಗುರುವಾದ ಶಿವತಂದೆಯನ್ನು ನೆನೆಪು ಮಾಡಲು, ಅವರ ಯಥಾರ್ಥ ಪರಿಚಯವನ್ನು ತಿಳಿದು ಸದ್ಗುರುವಿನ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ರಾಜಯೋಗಿನಿ ಬ್ರಹ್ಮಾಕುಮಾರಿ ಪ್ರಭಾಮಣಿ ಬೆಹಂಜಿರವರು ತಿಳಿಸಿದರು .
ಹನೂರು ಪಟ್ಟಣದಲ್ಲಿನ ಬ್ರಹ್ಮಾಕುಮಾರಿ ವಿಶ್ವ ವಿದ್ಯಾಲಯದ ಶಾಖೆಯಲ್ಲಿ ಮಾತನಾಡಿದ ಅವರು ಮನುಷ್ಯನು ಆತ್ಮ ಮತ್ತು ಶರೀರ ಎರಡರಿಂದ ಮಾಡಲ್ಪಟ್ಟಿದೆ.ನಾನೊಂದು ಆತ್ಮ. ಆತ್ಮದಲ್ಲಿ ಮೂರು ಭಾಗಗಳಿವೆ, ಅವು ಮನಸ್ಸು, ಬುದ್ದಿ, ಸಂಸ್ಕರವಾಗಿದೆ.ನಾವು ಕೇವಲ ಸತ್ಕಾರ್ಯಗಳನ್ನು ಮಾಡುವುದರಿಂದ ಅದರ ಪುಣ್ಯದ ಫಲವನ್ನು ಪಡೆಯುತ್ತೇವೆ ಎಂದು ತಿಳಿಸಿದರು. ಇಂದು ಹಳೆಯ ವರ್ಷದ ಜೊತೆ ನಮ್ಮಹಳೆಯ ನಿಶ್ಶಕ್ತತೆಗೆ ವಿದಾಯಿ ಕೊಟ್ಟು, ಹೊಸ ವರ್ಷದಲ್ಲಿ ಹೊಸ ನವೀನತೆಯನ್ನು ತರಬೇಕಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಶ್ರೀ ಬಿಂದು ಅಕ್ಕನವರು ,ಸುಶೀಲಾ ಅಕ್ಕನವರು ,ಸಂತೋಷಣ್ಣ ನವರು, ಮೋಹನರವರು, ವೆಂಕಟೇಶಣ್ಣನವರು, ಮಲ್ಲೇಶಣ್ಣನವರು,ಪುಟ್ಟಸ್ವಾಮಿಣ್ಣನವರು ,ಸೇರಿದಂತೆ ಇನ್ನಿತರರು ಹಾಜರಿದ್ದರು

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *