ಸದೃಡ ಕಾಯಕ್ಕೆ ಕ್ರೀಡೆ ಅವಶ್ಯ : ಗೌರಮ್ಮ ನಾಗನೂರ ಅಭಿಮತ

Mallikarjun
1 Min Read
ಜಾಹೀರಾತು

Exercise is essential for a healthy body: Gouramma Naganoor Abhimata

ಜಾಹೀರಾತು

ಬನ್ನಿಕೊಪ್ಪದಲ್ಲಿ ಜರುಗಿದ ವಲಯ ಮಟ್ಟದ ಕ್ರೀಡಾಕೂಟ,,,


ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ವಿದ್ಯಾರ್ಥಿಗಳು ಕ್ರೀಡೆ, ಯೋಗ ಶಿಬಿರಗಳಲ್ಲಿ ಪಾಲ್ಗೋಳ್ಳುವ ಮೂಲಕ ಸದೃಡ ಕಾಯವನ್ನು ರೂಪಿಸಿಕೊಳ್ಳುವಲ್ಲಿ ಪ್ರತಿಯೊಬ್ಬರು ಮುಂದಾಗಬೇಕು ಎಂದು ಮಾಜಿ ತಾಲೂಕ ಪಂಚಾಯತಿ ಸದಸ್ಯೆ ಗೌರಮ್ಮ ನಾಗನೂರು ಹೇಳಿದರು.

ಅವರು ಕುಕನೂರು ತಾಲೂಕಿನ ಬನ್ನಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗದ ಶಾಲಾ ಆವರಣದಲ್ಲಿ ಆಯೋಜಿಸಿದ್ದ ತಳಕಲ್ ವಲಯ ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕ್ರೀಡಾ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಂತರದಲ್ಲಿ ಶಿಕ್ಷಕ ಬಸವರಾಜ ಮೇಟಿ ಮಾತನಾಡಿ ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಕ್ರೀಡೆಗಳಲ್ಲಿ ಪಾಲ್ಗೋಳ್ಳಿ, ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ, ಸೋಲೆ ಗೆಲುವಿನ ಸೋಪಾನ ಎನ್ನುವ ನಾಣ್ಣುಡಿಯಂತೆ ಸೋಲನ್ನು ಸವಾಲಾಗಿ ಸ್ವೀಕರಿಸಿ ಮುನ್ನೆಡೆದಾಗ ಗೆಲುವು ತಾನಾಗಿಯೇ ದೊರೆಯುತ್ತದೆ ಎಂದರು.

ಇಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಆತ್ಮ ಸ್ಥೈರ್ಯದಿಂದ ಭಾಗವಹಿಸಿ ಇದು ವಲಯ ಮಟ್ಟದ ಕ್ರೀಡಾ ಕೂಟವಾಗಿದ್ದು ಉತ್ತಮವಾಗಿ ಆಡಿದಾಗ ತಾಲೂಕಾ, ಜಿಲ್ಲಾ, ಹಾಗೂ ರಾಜ್ಯ ಮಟ್ಟದವರೆಗೂ ಅವಕಾಶ ಪಡೆಯಲು ಮುಂದಾಗಿ, ಮುಂದಿನ ಓಲಂಪಿಕ್ ಕ್ರೀಡೆಗಳಲ್ಲಿ ಪಾಲ್ಗೋಳ್ಳುವ ಛಲದಿಂದ ಸಾಗಿರಿ ಎಂದು ತಿಳಿಸಿದರು.

ನಂತರದಲ್ಲಿ ಬನ್ನಿಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ವೀರಪ್ಪ ಗೊಂದಿ ಹಾಗೂ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷೆ ಸುಜಾತ ಡಂಬಳ, ಗುಂಡು ಎಸೆಯುವ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು.

ಈ ವೇಳೆ ತಾಲೂಕಿನ ವಿವಿಧ 11 ಶಾಲೆಯ ವಿದ್ಯಾರ್ಥಿಗಳು ಕ್ರೀಡಾ ಕೂಟದಲ್ಲಿ ಪಾಲ್ಗೋಂಡಿದ್ದರು.

ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಶರಣಪ್ಪಗೌಡ ವೀರಪ್ಪಗೌಡ್ರ,ಯಲಬುರ್ಗಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉದಯ ಕುಮಾರ ತಳವಾರ, ಕಾರ್ಯದರ್ಶಿ ಶೇಖರಪ್ಪ ಚಿಂಚಲಿ, ಶಿಕ್ಷಕ ಶ್ರೀಕಾಂತ ಮುರಗೋಡ, ಹನುಮೇಶ ಎಂ.ಬಿ ಹಾಗೂ ನಿರ್ಣಾಯಕ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.

Total Views: 0
Share This Article