Breaking News

ರಾಜ್ಯ ಯುವಒಕ್ಕೂಟಕ್ಕೆ ಗೊಂಡಬಾಳವಿಭಾಗೀಯ ಸಂಚಾಲಕ

Screenshot 2024 07 13 17 44 36 28 E307a3f9df9f380ebaf106e1dc980bb6 296x300

ಕೊಪ್ಪಳ : ನಗರದ ಯುವ ಸಂಘಟಕ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ. ಗೊಂಡಬಾಳ ಅವರನ್ನು ಪ್ರತಿಷ್ಠಿತ ರಾಜ್ಯಮಟ್ಟದ ಏಕೈಕ ಯುವ ಸಂಘಟನೆಯಾದ ಕರ್ನಾಟಕ ರಜ್ಯ ಯುವ ಸಂಘಗಳ ಒಕ್ಕೂಟಕ್ಕೆ ಕಲಬುರಗಿ ವಿಭಾಗೀಯ ಸಂಚಾಲಕ (ಅಧ್ಯಕ್ಷ)ರನ್ನಾಗಿ ನೇಮಿಸಿ ರಾಜ್ಯ ಅಧ್ಯಕ್ಷ ಡಾ. ಎಸ್. ಬಾಲಾಜಿ ಆದೇಶ ಮಾಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕಳೆದ ೧೫ ವರ್ಷಗಳ ಹಿಂದೆ ಯುವ ಸಂಘಗಳಿಗೆ ಅತ್ಯಂತ ಮಹತ್ವ ಇತ್ತು ಆದರೆ ಇಗ ಅವುಗಳು ಅಳಿವಿನ ಅಂಚಿಗೆ ತಲುಪಿದ್ದು, ಜಾತ್ಯಾತೀತವಾಗಿ ಗ್ರಾಮವನ್ನು ಕಟ್ಟುವ ಯುವಜನರನ್ನು ಪ್ರೋತ್ಸಾಹಿಸುವ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಕಾರ್ಯ ಮಾಡುತ್ತಿದ್ದವು ಆದರೆ ಈಗ ಅವು ಸಂಪೂರ್ಣವಾಗಿ ಇಲ್ಲವಾಗಿದ್ದು, ಮತ್ತೆ ಯುವ ಸಂಘಗಳ ಪುನಶ್ಚೇತನಕ್ಕೆ ಶ್ರಮಿಸಲು ವಿಭಾಗೀಯ ಮಟ್ಟದಲ್ಲಿ ಸಂಚಾಲಕರನ್ನು ನೇಮಿಸಲಾಗಿದೆ.
ಕಲಬುರಗಿ ವಿಭಾಗದಲ್ಲಿ ಬರುವ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಅತ್ಯಂತ ಕ್ರಿಯಾತ್ಮಕವಾಗಿ ಕಾರ್ಯಮಾಡಲು ಅಲ್ಲಿನ ಜಿಲ್ಲಾ ಸಂಘಗಳನ್ನು ಮತ್ತೆ ಸಶಕ್ತಗೊಳಿಸಲು ಕ್ರಮವಹಿಸಿಉವಂತೆ ಸೂಚಿಸಲಾಗಿದೆ.
ಇವರ ಜೊತೆಗೆ ಸುರೇಶ ಎನ್. ಋಗ್ವೇದಿ (ಮೈಸೂರು ವಿಭಾಗ), ವೀರಭದ್ರಸ್ವಾಮಿ (ಬೆಂಗಳೂರು ವಿಭಾಗ) ಮತ್ತು ಅಶೋಕ ಚವ್ಹಾಣ ಬೆಳಗಾವಿ ವಿಭಾಗಕ್ಕೆ ನೇಮಿಸಲಾಗಿದೆ.
ನೂತನ ವಿಭಾಗೀಯ ಸಂಚಾಲಕರಾದ ಮಂಜುನಾಥ ಗೊಂಡಬಾಳ ಅವರು ಪ್ರತಿ ಗ್ರಾಮಕ್ಕೊಂದು ಉತ್ತಮ ಸಂಘ ರಚನೆ, ತಾಲೂಕು, ಜಿಲ್ಲಾ ಮತ್ತು ವಿಭಾಗಮಟ್ಟದಲ್ಲಿ ಯುವಜನ ಮೇಳಗಳ ಆಯೋಜನೆ ಜೊತೆಗೆ ಗ್ರಾಮೀಣ ಕ್ರೀಡಾ ಚಟುವಟಿಕೆಗಳನ್ನು ಸಂಘಟಿಸುವ, ಯುವ ಸಂಘಗಳಿಗೆ ಸರಕಾರದ ಸೌಲಭ್ಯ ಒದಗಿಸುವ ಜೊತೆಗೆ ಒಕ್ಕೂಟದ ಜಿಲ್ಲಾ ಮತ್ತು ವಿಭಾಗೀಯ ಕಛೇರಿ ತೆರೆಯುವ ನಿಟ್ಟಿನಲ್ಲಿ ಸಂಘಟನೆ ಮಾಡುವದಾಗಿ ತಿಳಿಸಿದ್ದಾರೆ.

ಜಾಹೀರಾತು

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.