Breaking News

ಮತರಾರರಿಗೆ ಅಭಿನಂದನೆ ಕಾರ್ಯಕ್ರಮಕ್ಕೆ ಸಿಎಮ್ ಆಗಮಿಸುವ ಹಿನ್ನಲೆ ಕಾರ್ಯಕ್ರಮ ಯಶಸ್ವಿಯಾಗಿಸಿ : ಮಾಜಿ ಶಾಸಕ ಆರ್ ನರೇಂದ್ರ

The background of CM’s arrival at the felicitation program for the converts made the program a success: Former MLA R Narendra

ಜಾಹೀರಾತು


ವರದಿ : ಬಂಗಾರಪ್ಪ. ಸಿ .
ಹನೂರು : ನಮ್ಮ ಸರ್ಕಾರದ ಜನಪ್ರಿಯ ಯೋಜನೆಗಳಾದ
ಗ್ಯಾರಂಟಿ ಯೋಜನೆಯಗಳನ್ನು ಅನುಷ್ಠಾನಕ್ಕಾಗಿ ಹಾಗೂ ಲೋಕಸಭಾ ಕ್ಷೇತ್ರದ ಗೆಲುವು ಸಾದಿಸಿದ ಹಿನ್ನಲೆಯಲ್ಲಿ ಸಿಎಮ್ ಸಿದ್ದರಾಮಯ್ಯರವರು ಚಾಮರಾಜನಗರ ಜಿಲ್ಲೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದರು .
ಹನೂರು ಪಟ್ಟಣದ ಕಾಂಗ್ರೇಸ್ ಪಕ್ಷದ ಕಛೇರಿಯಲ್ಲಿ ಕಾರ್ಯಕರ್ತರನ್ನೂದ್ದೇಶಿಸಿ ಮಾತನಾಡಿದ ಅವರು ನೂತನ ಸಂಸದರು ಆಯ್ಕೆಯಾದ ನಂತರ ಇದೆ ಮೊದಲ ಬಾರಿಗೆ ಮತದಾರರಿಗೆ ಕೃತಜ್ಞತೆ ಸಭೆಯನ್ನು ಏರ್ಪಡಿಸಿರುವ ಹಿನ್ನಲೆಯಲ್ಲಿ
ಇದೇ ತಿಂಗಳು ಹತ್ತನೆ ತಾರೀಖಿನಂದು ನಡೆಯುವ ಅಭಿನಂದನ ಸಮಾರಂಭದಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಬೇಕಾಗಿದೆ . ಕಳೆದ ನಡೆದ ಚುನಾವಣೆಯಲ್ಲಿ
ನಮ್ಮ ಕ್ಷೇತ್ರದಲ್ಲೆ ಅತಿ ಹೆಚ್ವು ಮತ ನೀಡಿದ ನಿಮಗೆ ಧನ್ಯವಾದಗಳು, ರಾಜ್ಯ ನಾಯಕರು ಸೇರಿದಂತೆ ಎಲ್ಲಾರು ಭಾಗವಿಹಿಸುವ ಹಿನ್ನಲೆಯಲ್ಲಿ ಪ್ರತಿ ಗ್ರಾಮದ ಮುಖಂಡರುಗಳು ಎಲ್ಲಾ ಆಗಮಿಸಿ ಜೊತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಬೇಕು , ಹೆಚ್ಚಿನ ಸಂಖ್ಯೆಯಲ್ಲಿ ತಳಮಟ್ಟದ ಕಾರ್ಯಕರ್ತರು ಆಗಮಿಸಬೇಕು, ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಮುಖಂಡರ ಸಭೆಯನ್ನು ಮಾಡಲು ತಿರ್ಮಾನಿಸಲಾಗಿದೆ , ಅಲ್ಲದೆ ಎಲ್ಲರೂ ತಾವು ನೀಡಿದ ಮತಕ್ಕೆ ಅನುಗುಣವಾಗಿ ನಮ್ಮ ಜಿಲ್ಲೆಯ ಎಲ್ಲಾ ಜನಾಂಗದವರ ನಂಬಿಕೆಯನ್ನು ಹಿಮ್ಮಡಿಗೊಳಿಸಬೇಕು ,ನನ್ನ ಅವಧಿಯಲ್ಲಿ ನಡೆದ ಕಾಮಗಾರಿಗಳು ಹಾಗೆ ಹುಳಿದಿದೆ .ನಾನು ಈಗಾಗಲೇ ಗುಂಡಲ್ ,ಡ್ಯಾಂ ,ರಸ್ತೆಗಳು ಸೇರಿದಂತೆ ಇನ್ನಿತರರ ಕೆಲಸಗಳನ್ನು ಸಚಿವರಲ್ಲಿ ಮನವಿವಮಾಡಿದ್ದೆನೆ , ನಮಗೆ ಆಗಬೇಕಿದ್ದ ಆಸ್ಪತ್ರೆಯನ್ನು ಯಳಂದೂರಿಗೆ ವರ್ಗಾವಣೆಮಾಡಲಾಗಿದೆ ,ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಮಾಡಲು ತಿರ್ಮಾನಿಸಲಾಗುವುದು , ಕ್ಷೇತ್ರದಲ್ಲಿನ ಜಮಿನು ಸಮಸ್ಯೆಗಳಾದ ಹೂಗ್ಯ, ನಾಗಣ್ಣನಗರ , ಜಾಗೆರಿ ಸೇರಿದಂತೆ ಇನ್ನಿತರರ ಕೆಲವು ಕಡೆ ಜಮಿನು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು , ಕ್ಷೇತ್ರದಲ್ಲಿ ನಮ್ಮ ಮನೆತನದ
ಕೆಲಸ ಮಾಡಿದ ಮೆಲೆ ನಮಗೆ ಮತ ನೀಡಲು ಮನವಿ ಮಾಡಿಕೊಂಡರು ನಮ್ಮ ಮನೆತನದಿಂದ ಹದಿನಾಲ್ಕು ಚುನಾವಣಾ ನಡೆದಿದೆ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನಡೆದ ವ್ಯವಸ್ಥೆ ಬಹಳ ನೋವುಂಟುವಮಾಡಿದೆ ಅಭಿವೃದ್ಧಿಯಾಗಬೆಕದರೆ ಸೂಕ್ತ ಅಭ್ಯರ್ಥಿ ಆಯ್ಕೆ ನಿಮ್ಮ ಕೈಯಲ್ಲಿದೆ ಹಣವನ್ನು ನೀಡಿ ಮರೆಯಾಗುವ ವ್ಯಕ್ತಿಗಳು ನಿಮಗೆ ಬೆಕಿತ್ತ ಎಂದರು . ತಿರುಪತಿ ತಿಮ್ಮಪ್ಪ ದರ್ಶನ ಮಾಡಬಹುದು ಆದರೆ ಅವರ ದರ್ಶನವಿಲ್ಲ ಕ್ಷೇತ್ರವು ಅಭಿವೃದ್ಧಿ ಮಾಡುವುದು ಶಾಸಕರ ಅಭಿಪ್ರಾಯ ಮುಖ್ಯ
ನಮ್ಮ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ನಾನು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಜನರಲ್ಲಿ ದೇವರನ್ನು ಕಾಣಬಹುದು ,ಹತ್ತನೆ ತಾರೀಖಿನಂದು ಎಲ್ಲಾರು ಹೆಚ್ವಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಬ್ಲಾಕ್ ಅದ್ಯಕ್ಷರಾದ ಕೆ ಈಶ್ವರ್ , ಉದ್ಯಮಿ ರಂಗಸ್ವಾಮಿ ,ಬಸವರಾಜು ,ವೆಂಕಟರಮಣ ನಾಯ್ಡು ,ಗಿರೀಶ್ ಕುಮಾರ್ ,ಮಣಿ ,ನಟರಾಜು ,ಸಿದ್ದರಾಜು .ಮಂಜು ,ಗೋವಿಂದರಾಜು,ಸೇರಿದಂತೆ ಇನ್ನಿತರರು ಹಾಜರಿದ್ದರು

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.