Breaking News

ಮೈನಹಳ್ಳಿ ಶ್ರೀ ಶಿವಶರಣಿ ಬುಡ್ಡಮ್ಮ ದೇವಿ ಜಾತ್ರಾ ಮಹೋತ್ಸವ* 

Mainahalli Sri Shivasharani Buddamma Devi Jatra Mahotsav* 

ಜಾಹೀರಾತು

ಕೊಪ್ಪಳ: ಕೊಪ್ಪಳ ತಾಲೂಕಿನ ಮೈನಹಳ್ಳಿ ಗ್ರಾಮದ ಶ್ರೀ ಶಿವಶರಣಿ ಬುಡ್ಡಮ್ಮ ದೇವಿ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ ಇದೇ ದಿನಾಂಕ 26.5.2024 ರಿಂದ 29.05.2024ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ 

 ದಿನಾಂಕ: 26-5 -2024 ರವಿವಾರ ರಾತ್ರಿ 9:30ಕ್ಕೆ ಲಘು ರಥೋತ್ಸವ ಜರಗಲಾಗುವುದು ದಿನಾಂಕ 27.05.2024 ಸೋಮವಾರ ಸಾಯಂಕಾಲ ಮಹಾರಥೋತ್ಸವ ಜರಗಲಾಗುವುದು ದಿ. 28.05.2024 ಮಂಗಳವಾರದಂದು ಶ್ರೀ ಶಿವಶರಣೆ ಬುಡ್ಡಮ್ಮ ದೇವಿ ಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ರಾತ್ರಿ 8:00 ಗಂಟೆಗೆ ಶ್ರೀ ಮೈಲಾರಲಿಂಗೇಶ್ವರ ಮತ್ತು ಗಂಗಿ ಮಾಳಮ್ಮನವರ ವಿವಾಹ ಕಾರ್ಯಕ್ರಮ ತದನಂತರ ರಾತ್ರಿ ಶ್ರೀ ಗದುಗಿನ ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶ್ರೀ ವೇದಮೂರ್ತಿ ಬೆಟ್ಟದಯ್ಯ್ ಶಾಸ್ತ್ರಿಗಳಿಂದ ಶಿವ ಕೀರ್ತನ ಹಾಗೂ ಹಾಸ್ಯ ರಸಮಂಜಾರಿ ಕಾರ್ಯಕ್ರಮ ದಿನಾಂಕ 29-5-2024 ಬುಧವಾರ ಸಾಯಂಕಾಲ 5:30ಕ್ಕೆ ಕಡುಬಿನ ಕಾಳಗ ಕಾರ್ಯಕ್ರಮ ಇರುತ್ತದೆ

 27-5-2024 ಸೋಮವಾರ ಮಹಾ ರಥೋತ್ಸವ ದಿನದಂದು ಶ್ರೀ ಶಿವಶರಣೆ ಬುಡ್ಡಮ್ಮ ದೇವಿ ಕಲಾ ನಾಟ್ಯ ಸಂಘ ಮೈನಹಳ್ಳಿ ಇವರಿಂದ ಅಗಡಿಯವರ ಬಂಧುಗಳ ಬಯಲು ಜಾಗದಲ್ಲಿ ಶ್ರೀ ಬನಶಂಕರಿ ಡ್ರಾಮಾ ಸೀನ್ಸ್ ಬೇವೂರು ಇವರ ಹಾಕಿದ ಭವ್ಯರಂಗ ಸಜ್ಜೆಕೆಯಲ್ಲಿ ಶ್ರೀ ಗುರು ಪಂಚಾಕ್ಷರಿ ವಾದ್ಯವೃಂದ ಶ್ರೀ ಗವಿಶ್ ಹಾಗೂ ಸಂಗಡಿಗರು ಬಸಪಟ್ಟಣ ಇವರ ಸಂಗೀತ ನಿರ್ದೇಶನದಲ್ಲಿ ತಯಾರಿಸಲ್ಪಟ್ಟ ಸುಂದರ ಸಾಮಾಜಿಕ ನಾಟಕ ಎಸ್ ಎಸ್ ಗಡದ್ ಸಾಕಿನ್ ಮಂಡಲಗಿರಿ ಇವರ ವಿರಚಿತ ಧನಿಕರ ದೌರ್ಜನ್ಯ ಅರ್ಥಾತ್ ಅಣ್ಣನ ಕಣ್ಣೀರು ಎಂಬ ಸುಂದರ ಕ್ರಾಂತಿಕಾರಿ ಸಾಮಾಜಿಕ ನಾಟಕ ರಾತ್ರಿ 10:30 ಕ್ಕೆ ಪ್ರದರ್ಶನಗೊಳ್ಳಲಿದೆ 

 ಶ್ರೀ ಶಿವಶರಣೆ ಬುಡ್ಡಮ್ಮ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ದೇವಿ ಕೃಪೆಗೆ ಪಾತ್ರರಾಗಬೇಕಾಗಿ ಎಂದು ಶ್ರೀ ಶಿವಶರಣೆ ಬುಡ್ಡಮ್ಮ ದೇವಿ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.