Breaking News

ಹನೂರು ಪಟ್ಟಣದಲ್ಲಿ ಎಟಿಎಂನಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚನೆ ದೂರು ದಾಖಲು


ವರದಿ :ಬಂಗಾರಪ್ಪ ಸಿ .
ಹನೂರು:ತನ್ನ ಖಾತೆಯಲ್ಲಿ ಟ್ಟಿದ ಹಣವನ್ನು ಮನೆಗೆ ತೆಗೆದುಕೊಂಡು ಮನೆಗೆ ಹೋಗಲು ಎಟಿಎಂನಲ್ಲಿ ಸಹಾಯ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ರೈತರೊಬ್ಬರು ತನ್ನ ಕಾರ್ಡು ನೀಡಿದಾಗ ಅಪರಿಚತರೊಬ್ಬ ವಂಚಿಸಿ ಹಣ ಲಪಟಾಯಿಸಿರುವ ಘಟನೆ ಹನೂರು ಪಟ್ಟಣದ ಕೆನರಾ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ಸೋಮವಾರ ನಡೆದಿದೆ.

ತಾಲ್ಲೂಕಿನ ಕೌದಳ್ಳಿ ಜಿಪಂ ವ್ಯಾಪ್ತಿಯ ಕುರಟ್ಟಿ ಹೊಸೂರು ಗ್ರಾಮದ ರೈತ ಬಸವರಾಜು ಹಣ ಕಳೆದುಕೊಂಡ ವ್ಯಕ್ತಿ. ಘಟನೆ ವಿವರ: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ಕಾಂಪ್ಲೆಕ್ಸ್ ನಲ್ಲಿರುವ ಕೆನರಾ ಬ್ಯಾಂಕ್‌ನ ಎಟಿಎಂಗೆ ತೆರಳಿದ ಬಸವರಾಜುರವರು ಎಟಿಎಂನಿಂದ ಹಣ ತೆಗೆದು ಕೊಳ್ಳಲು ಗೊತ್ತಾಗದೆ ಇದ್ದಾಗ ಎಟಿಎಂನಲ್ಲಿ ಹಣ ತೆಗೆದು ಕೊಂಡು ಬರುತ್ತಿದ್ದ ವ್ಯಕ್ತಿಯೋರ್ವನ ಸಹಾಯ ಕೇಳಿದ್ದಾರೆ. ಈ ವೇಳೆ ರೈತ ಕೇಳಿದ 5 ಸಾವಿರ ರೂ.ಗಳನ್ನು ಎಟಿಎಂನಿಂದ ತೆಗೆದುಕೊಟ್ಟು, ನಂತರ ರೈತನಿಗೆ ಬೇರೆ ಎಟಿಎಂ ಕಾರ್ಡ್ ಕೊಟ್ಟು ರೈತನ ಎಟಿಎಂ ಕಾರ್ಡ್‌ನಿಂದ 61 ಸಾವಿರ ರೂ. ಲಪಟಾಯಿಸಿಕೊಂಡು ಪರಾರಿಯಾಗಿ ದ್ದಾನೆ. ಈ ಸಂಬಂಧ ಹಣ ಕಳೆದುಕೊಂಡ ರೈತ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೆನರಾ ಬ್ಯಾಂಕ್ ಎಟಿಎಂಗೆ ತೆರಳಿ ಸಿಸಿಟಿವಿಯನ್ನು ಪರಿಶೀಲಿಸಿದ್ದು, ಆತನ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ.

About Mallikarjun

Check Also

ಅಡವಿ ಔಡಲ ಸೇವಿಸಿ : ಶಾಲಾ ವಿದ್ಯಾರ್ಥಿಗಳು ಅಸ್ವಸ್ಥ

ಕುಕನೂರು : ಕುಕನೂರು ತಾಲೂಕಿನ ಕೋನಾಪೂರ ಶಾಲೆಯ ಆವರಣದ ಅಡಿವಿ ಔಡಲ ಕಾಯಿಯನ್ನು ತಿಂದು ಸುಮಾರು 35 ರಿಂದ 40 …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.