Breaking News

ನಕಲಿ ಬಿಲ್ ಸೃಷ್ಠಿಸಿ ತೆರಿಗೆ ಹಣ ವಂಚನೆ ಪಿಡಿಒಗಳ ವಿರುದ್ಧ ಕ್ರಮಕ್ಕೆ ಆಗ್ರಹ

Demand action against PDOs who cheat tax money by creating fake bills

ಜಾಹೀರಾತು
18 Gvt 01 224x300


ಗಂಗಾವತಿ
:ಗಂಗಾವತಿ, ಕಾರಟಗಿ ಹಾಗೂ ಕನಕಗಿರಿ ತಾಲೂಕುಗಳ ಕೆಲ ಗ್ರಾ.ಪಂ.ಗಳಲ್ಲಿ ೨೦೧೭-೨೨ ವರೆಗೆ ನರೇಗಾ ಯೋಜನೆಯಡಿ ಸಾಮಾಗ್ರಿ ವೆಚ್ಚದ ಬಿಲ್ ಗಳ ನಕಲಿ ಸೃಷ್ಠಿ ಮಾಡಿ ಲಕ್ಷಾಂತರ ರೂ.ಗಳ ಭ್ರಷ್ಠಾಚಾರ ಮಾಡಿದ್ದು ಮಾಹಿತಿ ಹಕ್ಕಿನಡಿ ಬಹಿರಂಗವಾಗಿದ್ದು ಕೂಡಲೇ ಗ್ರಾಮೀಣಾಭಿವೃದ್ಧಿ ಇಲಾಖೆ ಭ್ರಷ್ಠಾಚಾರವೆಸಗಿರುವ ಪಿಡಿಒ ಗಳನ್ನು ಅಮಾನತುಗೊಳಿಸಿ ಅವರಿಂದ ಹಣ ವಸೂಲಿ ಮಾಡುವಂತೆ ಮಾಹಿತಿ ಹಕ್ಕು ಹೋರಾಟಗಾರ ಹಾಗೂ ಗುತ್ತಿಗೆದಾರ ಚಂದನಗೌಡ ಸರಕಾರವನ್ನು ಒತ್ತಾಯಿಸಿದ್ದಾರೆಂ
೨೦೧೭-೨೨ ನೇ ಸಾಲಿನ ಕಾರಟಗಿ, ಗಂಗಾವತಿ ಮತ್ತು ಕನಕಗಿರಿ ತಾಲೂಕಿನ ಕೆಲವು ಗ್ರಾ. ಪಂ.ಗಳಲ್ಲಿ ನರೇಗಾ ಯೋಜನೆಯ ಕಾಮಗಾರಿಯ ಸಾಮಗ್ರಿ ವೆಚ್ಚದ ಬಿಲ್ಲುಗಳನ್ನು ನಕಲಿ ಸೃಷ್ಟಿ ಮಾಡಿ ಸರಕಾರಕ್ಕೆ ಕಟ್ಟಬೇಕಾದ ತೆರಿಗೆ ಹಣವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಲಪಟಾಯಿಸಿದ್ದಾರೆ. ನನ್ನ ಹೆಸರಿನಲ್ಲಿ ನಕಲಿ ಬಿಲ್ ಮುದ್ರಿಸಿ ಖರ್ಚಿನ ಖಾತೆ ಕಡತಗಳಲ್ಲಿ ದಾಖಲು ಮಾಡಲಾಗಿದ್ದು ನನ್ನ ಟಿನ್ ಮತ್ತು ಜಿಎಸ್ಟಿ ನಂಬರ್ ಹಾಕಿರುವುದರಿಂದ ೬೦ ಲಕ್ಷ ರೂ.ಟಿಡಿಎಸ್ ಕಟಾವು ಮಾಡಲಾಗಿದೆ. ಜತೆಗೆ ವಾಣಿಜ್ಯ ತೆರಿಗೆ ಇಲಾಖೆಯವರು ತೆರಿಗೆ ಬಾಕಿ ಪಾವತಿಸುವಂತೆ ನನ್ನ ವೈಯಕ್ತಿಕ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದ್ದು ಕುಟುಂಬ ನಿರ್ವಾಹಣೆ ತೊಂದರೆಯಾಗಿದೆ. ಗ್ರಾ.ಪಂ.ಗಳ ಪಿಡಿಒಗಳು ಮಾಡಿದ ಭ್ರಷ್ಠಾಚಾರಕ್ಕೆ ನನ್ನ ಬ್ಯಾಂಕ್ ಖಾತೆ ಸೀಜ್ ಆಗಿದ್ದು ಜಿ.ಪಂ. ಸಿಇಒ ಅವರು ಕೂಡಲೇ ಭ್ರಷ್ಠಾಚಾರವೆಸಗಿದ ಪಿಡಿಒಗಳನ್ನು ಅಮಾನತುಗೊಳಿಸಿ ತಮಗೆ ನ್ಯಾಯ ಒದಗಿಸಬೇಕೆಂದು ಚಂದನಗೌಡ ಮನವಿ ಮಾಡಿದ್ದಾರೆ.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.