Breaking News

ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ನಡೆದಭಗತಸಿಂಗ್‌ರ ಹುತಾತ್ಮದಿನಾಚರಣೆಭಾರಧ್ವಾಜ್

Held in the office of the Krantichakra Balaga Bhagat Singh’s Martyrdom Day Bhardwaj

ಜಾಹೀರಾತು
Screenshot 2024 03 23 20 50 17 32 E307a3f9df9f380ebaf106e1dc980bb6 300x128

ಗಂಗಾವತಿ: ಮಾರ್ಚ್-೨೩ ಶನಿವಾರ ನಗರದ ರಾಯಚೂರು ರಸ್ತೆಯಲ್ಲಿರುವ ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಭಗತಸಿಂಗ್, ರಾಜಗುರು, ಸುಖದೇವ್ ರವರ ಹುತಾತ್ಮ ದಿನಾಚರಣೆ ನಡೆಸಲಾಯಿತು ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.
ಈ ಹುತಾತ್ಮ ದಿನಾಚರಣೆ ಪ್ರಯುಕ್ತ ಭಗತಸಿಂಗ್, ರಾಜಗುರು, ಸುಖದೇವ್‌ರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಹುತಾತ್ಮರ ಜೀವನ ಚರಿತ್ರೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು.
ಹಾಗೆಯೇ ವಿದ್ಯಾರ್ಥಿ ಘಟಕದ ನಾಯಕರಾದ ಇಂಕಿಲಾಬ್ ಫಯಾಜ್ ಮಾತನಾಡಿ, ಉರ್ದು ಭಾಷೆಯಲ್ಲಿರುವ ಕ್ರಾಂತಿಕಾರಿ ಕವಿತೆಯನ್ನು ಕನ್ನಡಕ್ಕೆ ಅರ್ಥೈಸಿ ಹೇಳಿದರು.
ಸಿ.ಪಿ.ಐ.ಎಂ.ಎಲ್ ಜಿಲ್ಲಾ ಕಾರ್ಯದರ್ಶಿ ವಿಜಯ್ ದೊರೆರಾಜು ಮಾತನಾಡಿ, ಭಗತಸಿಂಗ್‌ರ ಜೀವನ ಕಾರ್ಮಿಕರಿಗೆ ಮಾರ್ಗದರ್ಶನ ಎಂದರು.
ಈ ಸಂದರ್ಭದಲ್ಲಿ ಕಾರ್ ಮೆಕ್ಯಾನಿಕ್ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.