Breaking News

ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದ ತಕ್ಷಣ ಬಂಧಿಸುವ ಅಗತ್ಯವಿಲ್ಲ : ಮಾಜಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ

There is no need to arrest as soon as a case is registered under the FOXO Act: Former Law Minister J.C. Madhuswami

ಜಾಹೀರಾತು
Screenshot 2024 03 16 18 34 19 34 6012fa4d4ddec268fc5c7112cbb265e7 257x300

ಬೆಂಗಳೂರು, ಮಾ, 16; ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಹುಲಿಯೂರು ದುರ್ಗದ ವಿದ್ಯಾಚೌಡೇಶ್ವರಿ ಮಠದ ಪೀಠಾಧಿಪತಿ ಬಾಲ ಮಂಜುನಾಥ ಸ್ವಾಮೀಜಿ ಅವರನ್ನು ಬಂಧಿಸಿರುವ ಬೆನ್ನಲ್ಲೇ ಇದೇ ರೀತಿಯ ಆರೋಪ ಹೊತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರ ಬಂಧನ ಏಕಿಲ್ಲ ಎಂಬ ಪ್ರಶ್ನೆ ಚೌಡೇಶ್ವರಿ ಮಠದ ಭಕ್ತ ಸಮೂಹದಿಂದ ಕೇಳಿ ಬಂದಿದೆ.

ಸ್ವಾಮೀಜಿ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ದು, ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಸದೇ ಬಂಧಿಸಲಾಗಿದೆ. ಇದರಲ್ಲಿ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಮಠದ ಭಕ್ತರು ಆರೋಪಿಸಿದ್ದಾರೆ.

ಈ ‍ಮಧ್ಯೆ ಮಾಜಿ ಕಾನೂನು ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಜೆ. ಸಿ.ಮಾಧುಸ್ವಾಮಿ ಮಾತನಾಡಿ, ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದ ತಕ್ಷಣ ಆರೋಪಿಯನ್ನು ಬಂಧಿಸಲೇಬೇಕು ಅಂತ ಏನಿಲ್ಲ ಎಂದು ಹೇಳಿದ್ದಾರೆ.

ಬಿ.ಎಸ್ ಯಡಿಯೂರಪ್ಪ, ಹಾಗೂ ವಿದ್ಯಾ ಚೌಡೇಶ್ವರಿ ಮಠದ ಪೀಠಾಧಿಪತಿಗಳಾದ ಬಾಲ ಮಂಜುನಾಥ ಸ್ವಾಮೀಜಿ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಬೆನ್ನೆಲ್ಲೇ ಜೆ.ಸಿ. ಮಾಧುಸ್ವಾಮಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಯಡಿಯೂರಪ್ಪ ಅವರ ವಿರುದ್ಧ ನೀಡಿರುವ ದೂರು ಗಂಭೀರವಾದದ್ದಲ್ಲ. ದೂರು ನೀಡಿದಾಕೆ ಈಗಾಗಲೇ 53 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದು ದುರುದ್ದೇಶದಿಂದ ನೀಡಿರುವ ದೂರು. ಇದು ಗಂಭೀರ ಹಂತಕ್ಕೆ ಹೋಗುವುದಿಲ್ಲ ಎಂದು ಭಾವಿಸಿದ್ದೇನೆ. ದೂರು ನೀಡಿರುವವರಿಗೆ ಮಾನಸಿಕ ಸ್ಥಿಮಿತ ಇಲ್ಲ ಎಂಬುದು ಈಗಾಗಲೇ ತಿಳಿದು ಬರುತ್ತದೆ ಎಂದು ಹೇಳಿದ್ದಾರೆ.

ಕಾನೂನಿನಲ್ಲಿ ದೂರು ಸ್ವೀಕರಿಸದೇ ಇರಲು ಸಾಧ್ಯವೇ ಇಲ್ಲ. ಕಾನೂನು ಇರುವುದೇ ಹಾಗೆ. ಆದರೆ ಯಡಿಯೂರಪ್ಪ ವಿರುದ್ಧ ಇದು ಒಂದು ರೀತಿಯಲ್ಲಿ ತೇಜೋವಧೆಯಾಗಿದೆ. ಒಳ್ಳೆಯವರೋ, ಕೆಟ್ಟವರೋ ಯಾರೇ ದೂರು ನೀಡಿದರೂ ಸ್ವೀಕರಿಸಬೇಕಾಗುತ್ತದೆ. ಯಾರು ದೂರು ನೀಡಿದ್ದಾರೆ ಎಂಬುದು ಮುಖ್ಯವಲ್ಲ. ಪ್ರಕರಣ ದಾಖಲಾದ ನಂತರ ಬಂಧಿಸಬೇಕಿಲ್ಲ. ಆದರೆ ಬಂಧಿಸಬೇಕೋ ಅಥವಾ ಬೇಡವೋ ಎಂಬುದು ಪೊಲೀಸರ ವಿವೇಚೆನೆಗೆ ಬಿಟ್ಟದ್ದು ಎಂದು ಮುಗುಮ್ಮಾಗಿ ಹೇಳಿದರು.

ವಿದ್ಯಾ ಚೌಡೇಶ್ವರಿ ಮಠದ ಪೀಠಾಧಿಪತಿಗಳಾದ ಬಾಲ ಮಂಜುನಾಥ ಸ್ವಾಮಿಜೀ ಬಂಧನಕ್ಕೂ ಇದು ಅನ್ವಯವಾಗಲಿದೆ ಎಂದು ಮಾಜಿ ಕಾನೂನು ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಜೆ. ಸಿ.ಮಾಧುಸ್ವಾಮಿ ಹೇಳಿರುವುದು ಅತ್ಯಂತ ಮಹತ್ವ ಪಡೆದುಕೊಂಡಿದೆ.

ರಾಜ್ಯದಲ್ಲಿ ಹೆಸರುವಾಸಿಯಾಗಿರುವ ಶ್ರೀ ವಿದ್ಯಾ ಚೌಡೇಶ್ವರಿ ದೇವಸ್ಥಾನಕ್ಕೆ ಲಕ್ಷಾಂತರ ಬಕ್ತರು ಬಂದು ತಾಯಿ ಚೌಡೇಶ್ವರಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ. ಇದರ ಹಿನ್ನೆಲೆ ಕೆಲವು ನಕಲಿ ಜ್ಯೋತಿಷ್ಯರು ಶ್ರೀ ಬಾಲ ಮಂಜುನಾಥ ಸ್ವಾಮಿಯವರ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂಬುದು ಭಕ್ತರ ಆರೋಪವಾಗಿದೆ.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.