Breaking News

ಅಭಿವೃದ್ಧಿ ಹರಿಕಾರ ಶ್ರೀ ಇಕ್ಬಾಲ್ಅನ್ಸಾರಿಯವರಿಗೆ ಎಂ.ಎಲ್.ಸಿ ಸ್ಥಾನದ ಜೊತೆಗೆಸಚಿವ ಸ್ಥಾನ ನೀಡಬೇಕು: ಹುಲಿಗೆಮ್ಮ ಕಿರಿಕಿರಿ, ನಗರಸಭೆ ಸದಸ್ಯರು.

Development pioneer Mr. Iqbal Ansari along with MLC post Minister position should be given to: Huligemma Kiri, Municipal Councilor.

ಜಾಹೀರಾತು

ಗಂಗಾವತಿ: ಕ್ಷೇತ್ರದ ಅಭಿವೃದ್ಧಿ ಚಿಂತಕ, ಅಭಿವೃದ್ಧಿ ಹರಿಕಾರ ಎಂದೇ ಖ್ಯಾತಿ ಪಡೆದ ಮಾಜಿ ಸಚಿವ ಶ್ರೀ ಇಕ್ಬಾಲ್ ಅನ್ಸಾರಿಯವರಿಗೆ ಎಂ.ಎಲ್.ಸಿ ಸ್ಥಾನ ನೀಡುವ ಮೂಲಕ ಸಚಿವರನ್ನಾಗಿ ಮಾಡಬೇಕೆಂದು ಗಂಗಾವತಿಯ ೩೨ನೇ ವಾರ್ಡಿನ ನಗರಸಭೆ ಸದಸ್ಯರಾದ ಶ್ರೀಮತಿ ಹುಲಿಗೆಮ್ಮ ಕಿರಿಕಿರಿ ಒತ್ತಾಯಿಸಿದ್ದಾರೆ.
ಅವರು ಮಾರ್ಚ್-೦೧ ರಂದು ಶ್ರೀ ಇಕ್ಬಾಲ್ ಅನ್ಸಾರಿಯವರ ಪರವಾಗಿ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ (ಂIಅಅ) ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರಿಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾದ ಶ್ರೀ ರಣದೀಪ್ ಸುರ್ಜೆವಾಲಾರವರಿಗೆ, ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರಿಗೆ, ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರರವರಿಗೆ ಮನವಿ ಸಲ್ಲಿಸಿ ಪತ್ರಿಕಾ ಹೇಳಿಕೆ ನೀಡಿದರು.
ನಮ್ಮ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಈ ಹಿಂದೆ ಸಚಿವರಾಗಿದ್ದ ಶ್ರೀ ಇಕ್ಬಾಲ್ ಅನ್ಸಾರಿಯವರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿ, ಎಲ್ಲಾ ಜನಾಂಗದವರೊAದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಗಂಗಾವತಿ ಕ್ಷೇತ್ರ ಅಭಿವೃದ್ಧಿ ಹೊಂದಲು ಕಾರಣೀಭೂತರಾಗಿದ್ದಾರೆ. ಅಲ್ಲದೇ ಇವರು ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಡಿಜಿಟಲ್ ಮೆಂಬರ್‌ಶಿಪ್ ಮಾಡಿಸುವ ಮೂಲಕ ಕರ್ನಾಟಕದಲ್ಲಿಯೇ ಮೊದಲ ಸ್ಥಾನ ಪಡೆದಿದ್ದಾರೆ. ಆದರೆ ಕಳೆದ ೨೦೨೩ ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ ೮೨೬೬ ಮತಗಳ ಅಂತರದಲ್ಲಿ ಗೆದ್ದು ಸೋತಿದ್ದಾರೆ. ಇಂತಹ ಅಭಿವೃದ್ಧಿಪರ ಚಿಂತಕರಾದ ಇವರು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಅತ್ಯಂತ ಪ್ರಭಾವಿ ನಾಯಕರಾಗಿದ್ದಾರೆ. ಇವರಿಗೆ ಅಧಿಕಾರ ನೀಡಿದಲ್ಲಿ ಕ್ಷೇತ್ರ ಅಭಿವೃದ್ಧಿಯಾಗುವುದರ ಜೊತೆಗೆ ಪಕ್ಷ ಬಲವರ್ಧನೆಗೊಳ್ಳಲಿದೆ ಎಂಬುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಅಭಿಲಾಷೆಯಾಗಿದೆ. ಆದ್ದರಿಂದ ಇವರಿಗೆ ಇತ್ತೀಚೆಗೆ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಜಗದೀಶ್ ಶೆಟ್ಟರ್‌ರವರ ರಾಜೀನಾಮೆಯಿಂದ ತೆರವಾದ ಎಂ.ಎಲ್.ಸಿ ಸ್ಥಾನಕ್ಕೆ ಶ್ರೀ ಇಕ್ಬಾಲ್ ಅನ್ಸಾರಿಯವರನ್ನು ಆಯ್ಕೆ ಮಾಡಿ, ಸಚಿವ ಸ್ಥಾನ ನೀಡಬೇಕೆಂದು ಕ್ಷೇತ್ರದ ನಿಷ್ಟಾವಂತ ಕಾರ್ಯಕರ್ತರ ಪರವಾಗಿ ಪಕ್ಷದ ರಾಷ್ಟಿçÃಯ ಹಾಗೂ ರಾಜ್ಯ ವರಿಷ್ಠರಿಗೆ ಒತ್ತಾಯಿಸಿದ್ದೇನೆ ಎಂದು ತಿಳಿಸಿದರು.

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.