Breaking News

ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ

Constitution Awareness Jatha Programme

ಜಾಹೀರಾತು

ತಿಪಟೂರು : ಕುಪ್ಪಾಳು ಗ್ರಾಮ ಪಂಚಾಯಿತಿ ವತಿಯಿಂದ ಕರಡಿ ಶೆಟ್ಟಿಹಳ್ಳಿಮಾರ್ಗವಾಗಿ ಮಧ್ಯಾನ್ಹ ಆಗಮಿಸಿದ ಸಂವಿಧಾನ ಜಾಗೃತಿ ಜಾಥ ರಥವನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಅನಿತಾ ಷಡಾಕ್ಷರಿ ಅವರು ಹಾಗೂ ಸರ್ವಸದಸ್ಯರು ಮತ್ತು ದಲಿತ ಮುಖಂಡರುಗಳು ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು. ವಿವಿಧ ಶಾಲಾ-ಕಾಲೇಜುಗಳ ಮಕ್ಕಳು ವಿವಿಧ ವೇಷ ಭೂಷಣದೊಂದಿಗೆ ಹಾಗೂ ಮಹಿಳಾ ಸಂಘಟನೆಗಳು ಪೂರ್ಣ ಕುಂಭದೊಂದಿಗೆ ಸ್ವಾಗತಿಸುತ್ತಾ ಕುಪ್ಪಾಳಿನ ಮುಖ್ಯ ರಸ್ತೆಗಳಲ್ಲಿ ಬ್ಯಾಂಡ್ ಸ ಟ್, ತಮಟೆ ವಾದ್ಯ, ಕಹಳೆ ಮುಂತಾದ ಹಲವಾರು ಸಾಂಸ್ಕೃತಿಕ ವಾದ್ಯಗಳೊಂದಿಗೆ ವೈಭವಪೂರಿತ ಮೆರವಣಿಗೆ ಮಾಡಲಾಯಿತು.ನಂತರ ಗ್ರಾಮ ದೇವತೆ ಕೆಂಪಮ್ಮನವರ ತೇರು ಬೀದಿಯ ಮಹಾವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅನಿತಾ ಹಾಗೂ ನೋಡಲ್ ಅಧಿಕಾರಿಗಳಾದ ಡಾ. ನಂದೀಶ್ ರವರು ಹಾಗೂ ದಲಿತ ಮುಖಂಡರು ಗ್ರಾಮ ಪಂಚಾಯತಿ ಸದಸ್ಯರುಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಹಾಲಿ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ಬಳ್ಳೇಕಟ್ಟೆ ಮಹೇಶ್ ರವರು ಪ್ರಾಸ್ತಾವಿಕವಾಗಿ ಉದ್ಘಾಟನಾ ನುಡಿಗಳಾಡುತ್ತಾ ಅಂಬೇಡ್ಕರ್ ಅವರ ಜೀವನ ಇಡೀ ಜಗತ್ತಿಗೆ ಆದರ್ಶವಾದುದ್ದು ಅವರ ಸಂವಿಧಾನದ ವಿಧಿ ವಿಧಾನಗಳು ಸರ್ವರಿಗೂ ಪ್ರೇರಕವಾದದ್ದು ,ಅವುಗಳನ್ನ ನಾವೆಲ್ಲರೂ ಅಳವಡಿಸಿಕೊಂಡಾಗ ಮಾತ್ರ ಅಂಬೇಡ್ಕರವರ ಆಶಯ ಹಿಡೆರುತ್ತದೆ ಎಂದರು. ನಂತರ ಹಿರಿಯ ದಲಿತ ಮುಖಂಡರಾದ ಶೆಟ್ಟಿಹಳ್ಳಿ ಚಿಕ್ಕಣ್ಣನವರು, ಕುಪ್ಪಾಳು ರಂಗಸ್ವಾಮಿಯವರು ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶಾಂತಪ್ಪನವರು ಸಂವಿಧಾನ ಜಾಗೃತಿ ಬಗ್ಗೆ ಮಾತನಾಡಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಡಾ.ಎಸ್ ಕೆ ಷಡಾಕ್ಷರಿ ಅವರು ಅಂಬೇಡ್ಕರ್ ಅವರ ಸಂವಿಧಾನದ ನೀತಿ ನಿಯಮಗಳು ಸರ್ವ ಕಾಯಕ ಸಮಾಜಕ್ಕು ಸಮಪಾಲು ಸಮ ಬಾಳನ್ನ ನೀಡುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿವೆ . ಭವ್ಯ ಭಾರತದ ಬೃಹತ್ ಸಂವಿಧಾನ ನಿರ್ಮಾಣಕ್ಕೆ ಅಂಬೇಡ್ಕರ್ ಅವರು ಅತಿಹೆಚ್ಚಿನ ಶ್ರಮವಹಿಸಿದ್ದಾರೆ ಹಾಗಾಗಿ ಅವರ ಜಾಥ ನಡೆಸುತ್ತಿರುವ ಸರ್ಕಾರಕ್ಕೂ ಹಾಗೂ ದಲಿತ ಮುಖಂಡರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ಸಮಾಜ ಕಲ್ಯಾಣ ಇಲಾಖೆ ತ್ರೀವೇಣಿ ರವರು ಬೆಂಗಳೂರು ಅರಮನೆ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಶಾಲಾ ಮಕ್ಕಳುಗಳ ವೇಷಭೂಷಣ ಸ್ಪರ್ಧೆಯಲ್ಲಿ ಪ್ರಥಮ -ಚಿರಂತ್, ದ್ವೀತಿಯ- ಜೀವನ ಇನ್ನೂ ಹಲವು ವಿಜೇತರಿಗೆ ಬಹುಮಾನ ಹಾಗು ಪ್ರಶಸ್ತಿ ಪತ್ರ ವಿತರಿಸಲಾಯಿತು, ಪ್ರಕೃತಿ ಸಂಜೀವಿನಿ ಒಕ್ಕೂಟ,ಆರೋಗ್ಯ ಇಲಾಖಾ ಮತ್ತು ಕೃಷಿ, ಪಶು ಸಖಿ, ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಆಶಾ ಕಾರ್ಯಕರ್ತರಾದ ಮಹಾಲಕ್ಷ್ಮಮ್ಮ ಮತ್ತು ಸಾವಿತ್ರಮ್ಮನವರು ಪ್ರಾರ್ಥಿಸಿ, ಗ್ರಂಥಪಾಲಕರಾದ ಪಿ ಶಂಕರಪ್ಪಬಳ್ಳೇಕಟ್ಟೆ ಸ್ವಾಗತಿಸಿ ,ಕರಡಾಳು ಸಂತೆ ಮೈದಾನ ಶಾಲೆಯ ಮುಖ್ಯ ಶಿಕ್ಷಕರಾದ ಪಟ್ಟಾಭಿರಾಮ್ ಕಾರ್ಯಕ್ರಮವನ್ನು ನಿರೂಪಿಸಿದರು , ಕೊಂಡ್ಲಿಘಟ್ಟ ಶಾಲಾ ಶಿಕ್ಷಕರಾದ ಉದಯ್ ರವರು ಅಂಬೇಡ್ಕರ್ ರವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಸರ್ವರನ್ನು ಪಿಡಿಒ ಪ್ರಸನ್ನಾತ್ಮ ವಂದಿಸಿದರು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರುಗಳಾದ ದರ್ಶನ್ ಕರಡಾಳು, ಕೋಟ್ಟಿಗೆಹಳ್ಳಿ ಯೋಗೀಶ್ ,ಕೊಂಡ್ಲಿಘಟ್ಟ ವಸಂತ್ ಕುಮಾರ್, ಉಪಾಧ್ಯಕ್ಷರಾದ ಗಾಯತ್ರಿ ಮೈಲಾರಸ್ವಾಮಿ, ಲಕ್ಷ್ಮಿ ಸುನಿಲ್ ರೂಪ ಮಂಜುನಾಥ್, ಮಿನಾಕ್ಷಮ್ಮಕಾಂತರಾಜು, ಮಂಜುಳ ಸೋಮಶೇಖರ್, ದಲಿತ ಮುಖಂಡರಾದ ಕರಡಾಳು ವೆಂಕಟೇಶ್ ಚಂದ್ರಶೇಖರ್ , ಶಂಕರಯ್ಯ, ಬಳ್ಳೇಕಟ್ಟೆ ಪ್ರಭಾಕರ್, ಬೈರಾಪುರ ಶೇಖರಯ್ಯ, ಬೈರಾಪುರದ ಮಹೇಶ್ ಛಲವಾದಿ ,ಸುರೇಶ್ ಛಲವಾದಿ, ರಮೇಶ್ ಶಿವಪುರ, ಕುಪ್ಪಾಳು ಧರಣೀಶ್, ಮೋಹನ್ , ಜಕ್ಕನಹಳ್ಳಿ ಮೋಹನ್ ಸುರೇಶ್ , ರಂಗಸ್ವಾಮಿ, ಕೆಂಪಣ್ಣ, ಚಂದ್ರಶೇಖರ್, ಕೀರ್ತಿ ಹತ್ಯಾಳು, ಶೆಟ್ಟಿಹಳ್ಳಿ ಕಲ್ಲೇಶ್,ಮಹೇಶ್, ಟ್ರ್ಯಾಕ್ಟರ್ ನಾಗರಾಜು, ಮಹಿಳಾ ಮತ್ತು ಮಕ್ಕಳಾ ಇಲಾಖೆಯ ಮೇಲ್ವಿಚಾರಕರಾದ ಜಲಜಾಕ್ಷಮ್ಮ . ಅಂ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರುಗಳು ಶಾಲಾ ಶಿಕ್ಷಕರು ಉಪನ್ಯಾಸಕರು ,ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ, ಗ್ರಾಮಗಳ ಮುಖ್ಯಸ್ಥರು ಸಾರ್ವಜನಿಕರು ಭಾಗವಹಿಸಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಜಾಗೃತಿ ಜಾಥ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *