Breaking News

ಶ್ರೀ ಶಿವ ಸತ್ಯ ಶನೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವಹಾಗೂಸರ್ವಧರ್ಮ ಸಮ್ಮೇಳನ.

Jatra Mahotsava of Shri Shiva Satya Shaneswara Swami and Sarvadharma Sammelna.

ಜಾಹೀರಾತು

ವರದಿ – ತಿಪಟೂರು ಕಿರಣ್

ತಿಪಟೂರು ತಾಲ್ಲೂಕಿನ ಸುಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ನೊಣವಿನಕೆರೆ ಹೋಬಳಿಯ ರಂಗನಹಳ್ಳಿಯಲ್ಲಿ ನೆಲೆಸಿರುವ ಶ್ರೀ ಶಿವ ಸತ್ಯ ಶನೇಶ್ವರ ಸ್ವಾಮಿಯವರ 20ನೇ ವರ್ಷದ ಜಾತ್ರಾ ಮಹೋತ್ಸವ ದಿನಾಂಕ 19.2.2024 ರಿಂದ 24.02.2024 ರ ವರೆಗೆ ನಡೆಯಲಿದೆ.

ಈ ಅದ್ದೂರಿ ಜಾತ್ರಾ ಮಹೋತ್ಸವದ ಲ್ಲಿ ನಾಡಿನ ಹಿರಿಯ ಕಿರಿಯ ಪೀಠಾಧಿಪತಿಗಳು ಹರ ಗುರುಚರ ಮೂರ್ತಿಗಳು, ಕರ್ನಾಟಕ ರಾ ಜ್ಯ ಸರ್ಕಾರದ ಸಚಿವರು ಹಾಲಿ ಮಾಜಿ ಶಾಸಕರುಗಳು ಭಾ ಗವಹಿಸಲಿದ್ದು ಈ ಧಾರ್ಮಿಕ ಸಮಾರಂಭದ ಅಧ್ಯಕ್ಷತೆಯನ್ನು ತಿಪಟೂರು ಕ್ಷೇತ್ರದ ಶಾಸಕರಾದ ಕೆ. ಷಡಕರಿ ವಹಿಸಲಿದ್ದು ಸರ್ವಧರ್ಮ ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮವನ್ನು ತುರುವೇಕೆರೆ ಕ್ಷೇತ್ರದ ಶಾಸಕರಾದ ಎಂ ಟಿ ಕೃಷ್ಣಪ್ಪನವರು ಉದ್ಘಾಟಿಸಲಿದ್ದಾರೆ ಎಂದು ಶ್ರೀ ಶನೇಶ್ವರ ದೇವಾಲಯದ ಪದಾಧಿಕಾರಿ ನಾಗರಾಜು
ತಿಳಿಸಿದ್ದಾರೆ.
ನಾಡಿನ ಒಳಿತಿಗಾ ಗಿ ವೇದ ಪಾರಾಯಣ ಸಮೇತ ದು ರ್ಗಾ ಹೋಮ ನವಗ್ರಹ ಮೃತ್ಯುಂಜಯ ಹೋಮ ಪರಿವಾರ ನಾಡಿನ ಉತ್ತಮ ಮಳೆ ಬೆಳೆಗಾಗಿ ಸರ್ವಜನರ ಸುಖ ಶಾಂತಿಗಾಗಿ ಶ್ರೀ ರಂಗನಹಳ್ಳಿ ಕ್ಷೇತ್ರದಲ್ಲಿ ವೇದ ಪಾರಾಯಣ ಶ್ರೀ ಸೂಕ್ತ ದುರ್ಗಾ ಹೋಮನವಗ್ರಹಮೃತ್ಯುಂಜಯ ಹೋಮ ಪರಿವಾರ ಹೋಮ ಶ್ರೀ ಕ್ಷೇತ್ರಕ್ಕೆ ಆಗಮಿಸಲಿರುವ ಆಕ್ಕ ಪಕ್ಕದ ತಾಲ್ಲೂಕುಗಳು ಸೇರಿದಂತೆ ಹಲವಾರು ಗ್ರಾಮಗಳ ಗ್ರಾಮದೇವತೆಗಳು ಆಗಮಿಸಲಿದ್ದು ಈ ದೇವತೆಗಳ ಸಮ್ಮುಖದಲ್ಲಿ ಅಗ್ನಿ ಕುಂಡ ಪ್ರವೇಶ ಕಾರ್ಯಕ್ರಮವು ಸಹ ಹಮ್ಮಿಕೊಳ್ಳಲಾಗಿದೆ ಈ ಎಲ್ಲಾ ಧಾರ್ಮಿಕ ವಿಧಿವಿ ಧಾನಗಳನ್ನು ಪೂಜಾ ಕೈಕರ್ಯಗಳನ್ನು ಅರಳಿಕೆರೆಯ ಶ್ರೀ ವೇಮು ರಾಕೇಶ್ ಶಾಸ್ತ್ರಿಗಳು. ವೇಮು.. ನಾ ಗೇಂದ್ರ ಶಾಸ್ತ್ರಿಗಳು ಮತ್ತು ಇವರ ಸಂಗಡಿಗರು ನೆರ ವೇರಿಸಲಿದ್ದಾರೆ.
ಶ್ರೀ ಶನೇಶ್ವರ ಸ್ವಾಮಿ ಕ್ಷೇತ್ರದ ಜಾತ್ರೆ ಮಹೋತ್ಸವ ದಲ್ಲಿ ಸಹಸ್ರಾರು ಮಂದಿ ಭಕ್ತಾದಿಗಳು ಹಲವಾರು ಜಿಲ್ಲೆ ತಾಲ್ಲೂಕುಗಳಿಂದ ಆಗಮಿಸಲಿದ್ದು ಅದ್ದೂರಿ ಕಾರ್ಯಕ್ರ ಮದಲ್ಲಿ ಭಕ್ತಾದಿಗಳಿಗೆ ಪರಿಸರದ ಬಗ್ಗೆ ಜಾಗೃತಿ ಮೂ ಡಿಸುವುದು ಮತ್ತು ಸಸಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಸಮಾರಂಭಕ್ಕೆ ಅರಣ್ಯ ಮತ್ತು
ಪರಿಸರ ಜೀವಶಾಸ್ತ್ರ ಸಚಿವರಾದ ಈಶ್ವರ್ ಬಿ ಖಂಡ್ರೆ ಅವರು ಚಾಲನೆ ನೀಡಲಿದ್ದಾರೆ.

ಕೋಟ್ -01 ಸಿದ್ದಗಂಗಾ ಆಸ್ಪತ್ರೆ ಮತ್ತು ಆಮೂಲ್ಯ ‘ಫೌಂಡೇಶನ್ ಆಸ್ಪತ್ರೆ ಸಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ದಿನಾಂಕ ಫೆ.24 ರಂದು ಬೆಳಗ್ಗೆ 10 ಗಂಟೆಗೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆ ಮತ್ತು ಅಮೂಲ್ಯ ಫೌಂಡೇಶನ್ ಸಹಯೋಗದಲ್ಲಿ ಉಚಿತ ಆರೋಗ್ಯದ ತಪಾಸಣಾ ಮತ್ತು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಇದರ ಸದುಪಯೋಗವನ್ನು ರಂಗನಳ್ಳಿ ಅಕ್ಕಪಕ್ಕದ ಗ್ರಾಮಸ್ಥರು ಉಪಯೋಗಿಸಿಕೊಳ್ಳಬೇಕು

ಕೆ ಎನ್, ಮಂಜುನಾಥ್ ಅಮೂಲ್ಯ ಫೌಂಡೇಶನ್ ಸಂಸ್ಥಾಪಕ

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.