Breaking News

ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವದನ್ನು ಗಂಗಾವತಿ ರಾಷ್ಟ್ರೀಯ ಬಸವದಳ ಸ್ವಾಗತಿಸುತ್ತಿ ದೆ.

The Gangavati Rashtriya Basavadal welcomes the declaration of Basavanna as a cultural hero

ಜಾಹೀರಾತು
Screenshot 2024 01 19 13 59 23 41 6012fa4d4ddec268fc5c7112cbb265e7

ಗಂಗಾವತಿ,19: ಹನ್ನೆರಡನೇ ಶತಮಾನದಲ್ಲಿ ಕಾಯಕ ಜೀವಿಗಳ ಚಳವಳಿಯ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ನಡೆಸಿ, ವಚನಗಳ ಮೂಲಕ ಜಾಗೃತಿ ಮೂಡಿಸಿದ ಬಸವೇಶ್ವರರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ರಾಜ್ಯ ಸರ್ಕಾರ ಘೋಷಿಸಿದೆ.ಇದನ್ನು ಅಭಿನಂದಿಸಲು ಆನೆಗೊಂದಿ ರಸ್ತೆಯಲ್ಲಿ ಇರುವ ಬಸವೇಶ್ವರ ವೃತ್ತ ದಲ್ಲಿ ಗಂಗಾವತಿ ರಾಷ್ಟ್ರೀಯ ಬಸವದಳದವರು ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಮಾತನಾಡಿದ ಮಾಜಿ ಶಾಸಕ,ವೀರಶೈವ -ಲಿಂಗಾಯತ ಸಮಾಜದ ರಾಜ್ಯ ಉಪಾಧ್ಯಕ್ಷರು ಆದ ಪರಣ್ಣ ಮುನವಳ್ಳಿ ಅವರು, ‘ಮಾತನಾಡಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಬಸವ ಪಥ’ಕ್ಕೆ ಅಗ್ರಸ್ಥಾನ ನೀಡಲು ಕಾಂಗ್ರೆಸ್ ನೇತೃತ್ವದ ಸರ್ಕಾರ ತೀರ್ಮಾನಿಸಿದ್ದನ್ನು ಸ್ವಾಗತಿಸಿ ಬಸವಣ್ಣ ಅವರ ನೇತೃತ್ವದಲ್ಲಿ ಜಾತಿ ಭೇದ ಮತ್ತು ಲಿಂಗತಾರತಮ್ಯ ವಿಲ್ಲದ ಸಮಾಜವನ್ನು ರೂಪಿಸುವ ಕೆಲಸ ನಡೆಯಿತು.

ಭಾರತದ ಸಂವಿಧಾನವೂ ಇದನ್ನೇ ಎತ್ತಿ ಹಿಡಿದಿದೆ. ಅಲ್ಲದೇ, ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆ ತಾತ್ವಿಕ ಮೌಲ್ಯಗಳನ್ನೂ ಬಸವಣ್ಣ ಪ್ರತಿಪಾದಿಸಿದ್ದರು. ಅವರು ವಿಶ್ವ ಶ್ರೇಷ್ಠ ಮೌಲ್ಯಗಳನ್ನು ಪ್ರತಿಪಾದಿ ಸಿದ್ದ ಮಹಾನ್ ವ್ಯಕ್ತಿ ಆಗಿರುವುದರಿಂದ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವದು ತುಂಬಾ ಸಂತೋಷವಾಗಿದೆ, ಎಂದರು.

1001549065 1024x774

ಬಸವಣ್ಣ ಅವರ ತತ್ವ ಆದರ್ಶಗ ಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಸಾರ ಮಾಡಬೆಕಿದೆ ಎಂದು ಕಾರ್ಮಿಕ ಮುಖಂಡ ಜೆ .ಭಾರದ್ವಾಜ ಹೇಳಿದರು.

ರಾಷ್ಟ್ರೀಯ ಬಸವದಳದ ಅದ್ಯಕ್ಷ ದಿಲೀಪ್ ಕುಮಾರ್ ವಂದಾಲ ಮಾತನಾಡಿ ಸನ್ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ವಿಶ್ವಗುರು, ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕನೆಂದು ಘೋಷಣೆ ಮಾಡಿದ ಮಹಾನ್ ಕಾರ್ಯ ಮಾಡಿದ್ದಕ್ಕೆ, ಇಂದು ಗಂಗಾವತಿಯ ಬಸವೇಶ್ವರ ವೃತ್ತದಲ್ಲಿ,ರಾಷ್ಟ್ರೀಯ ಬಸವ ದಳ ವತಿಯಿಂದ ಸ್ವಾಗತಿಸಿ, ಅಭಿನಂದನೆ ಸಲ್ಲಿಸಲಾಯಿತು, ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸನ್ಮಾನ್ಯ ಪರಣ್ಣ ಮುನವಳ್ಳಿಯವರು, ಕಾರ್ಮಿಕ ಮುಖಂಡ ಜೆ ಭಾರದ್ವಾಜ್ ರವರು, ರಾಷ್ಟ್ರೀಯ ಬಸವ ದಳದ ಗೌರವ ಅಧ್ಯಕ್ಷರಾದ ಹೆಚ್ ಮಲ್ಲಿಕಾರ್ಜುನ, ಅಧ್ಯಕ್ಷರಾದ ದಿಲೀಪ್ ಕುಮಾರ್ ವಂದಲ,ಉಪಾಧ್ಯಕ್ಷರಾದ ಕೆ ವೀರೇಶಪ್ಪ, ರಾಷ್ಟ್ರೀಯ ಬಸವ ದಳದ ಯುವ ಮುಖಂಡರಾದ ವಿನಯ್ ಕುಮಾರ್ ಅಂಗಡಿ, ಮಲ್ಲಿಕಾರ್ಜುನ ಅರಳಹಳ್ಳಿ, ಮಂಜುನಾಥ ದೇವರ ಮನೆ, ಚನ್ನಬಸಮ್ಮ ಕಂಪ್ಲಿ, ಬಸವ ಜ್ಯೋತಿ ಬಿ ಲಿಂಗಾಯತ, ತಿಪ್ಪಮ್ಮ ರಾಮ ಸಾಗರ, ಶಾಂತಮ್ಮ ಪೋಲಿಸ್ ನಾಗರಾಜ್ ಅಂಗಡಿ , ಮಂಜುನಾಥ್ ದೇವರಮನಿ,ಚಲುವಾದಿ ಸಮಾಜದ ಮುಖಂಡ ಹುಲಿಯಪ್ಪ , ಕೆಸರಟ್ಟಿ ವಿಶ್ವನಾಥ ಮಾಲಿಪಾಟಿಲ್ ಹಾಗೂ ಬಸವ ಭಕ್ತರು ಸೇರಿಸಂತೆ ಇತರರುಇದ್ದರು.


ರಾಷ್ಟ್ರೀಯ ಬಸವ ದಳ ಗಂಗಾವತಿ
ಶರಣು ಶರಣಾರ್ಥಿ💐💐

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.