Breaking News

ತುರುವೇಕೆರೆ:ಫೆಬ್ರವರಿ ಒಂದನೇ ತಾರೀಕು ತಾಲೂಕು ಮಟ್ಟದ ಮಹಿಳಾವಿಚಾರಗೋಷ್ಠಿ.

Turuvekere: Taluk level women’s seminar on February 1st.

ಜಾಹೀರಾತು
Screenshot 2024 01 16 17 59 58 54 6012fa4d4ddec268fc5c7112cbb265e7 300x130

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ವತಿಯಿಂದ, ಫೆಬ್ರವರಿ 1 ಕ್ಕೆ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ, ತುರುವೇಕೆರೆಯ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ತುರುವೇಕೆರೆ ಕ್ಷೇತ್ರ ಯೋಜನಾಧಿಕಾರಿ ಯಶೋಧರ್ ರವರು ಹೇಳಿದರ

ಪಟ್ಟಣದ ತುರುವೇಕೆರೆ ಗ್ರಾಮಾಂತರ ಯೋಜನಾ ಕಚೇರಿಯಲ್ಲಿ, ತಾಲೂಕು ಯೋಜನಾಧಿಕಾರಿ ಅನಿತಾ ಶೆಟ್ಟಿ, ಕ್ಷೇತ್ರ ಯೋಜನಾಧಿಕಾರಿ ಯಶೋಧರ್, ಮ್ಯಾನೇಜರ್ ಚೈತ್ರ, ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ಲಾವಣ್ಯ, ಇವರ ಸಮ್ಮುಖದಲ್ಲಿ ಪತ್ರಿಕಾ ಮಾಧ್ಯಮ ಗೋಷ್ಠಿಯನ್ನು ಕರೆಯಲಾಗಿತ್ತು,

ಇದೆ ವೇಳೆ ಕ್ಷೇತ್ರ ಯೋಜನಾಧಿಕಾರಿ ಯಶೋಧರ್ ಮಾತನಾಡಿ, ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ 2011ನೇ ವರ್ಷದಲ್ಲಿ ಪ್ರಾರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನ ಸಂಘಟನೆ, ಸೌಲಭ್ಯ ವಂಚಿತರ ಸಬಲೀಕರಣ ಹಾಗೂ ಗ್ರಾಮದ ಸರ್ವಾಂಗಿನ ಅಭಿವೃದ್ಧಿಗಾಗಿ ಗ್ರಾಮೀಣರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಾ ಬಂದಿದೆ ,ಜೊತೆಗೆ ಈ ಯೋಜನೆಯು ಶಿಸ್ತು ,ನೈತಿಕ ಮೌಲ್ಯಗಳು, ಜನರಲ್ಲಿ ಧಾರ್ಮಿಕ, ಜಾಗೃತಿ ಮೂಡಿಸುವ ವಿವಿಧ ದ್ಯೇಯೋದ್ದೇಶಗಳನ್ನು ಹೊಂದಿದ್ದು,

ಈ ಯೋಜನೆಯ ಕನಸುಗಾರರು ಮತ್ತು ಮಾರ್ಗದರ್ಶಕರು ಆದ ಪೂಜ್ಯಶ್ರೀ ಡಿ ವೀರೇಂದ್ರ ಹೆಗ್ಗಡೆ ಮತ್ತು ಶ್ರೀಮತಿ ಹೇಮಾವತಿ ವಿ ಹೆಗ್ಗಡೆಯವರ ಆಶಯದಂತೆ,

ಗ್ರಾಮೀಣ ಪ್ರದೇಶದ ಕೃಷಿಕರಿಗೆ, ಮಹಿಳೆಯರಿಗೆ, ಯುವಕ, ಯುವತಿಯರಿಗೆ, ದುಶ್ಚಟಗಳಿಂದ ಬಳಲುತಿರುವ ಜನರಿಗೆ, ದುಡಿಯಲು ಸಾಮರ್ಥ್ಯವಿಲ್ಲದವರಿಗೂ ಕೂಡ ಈ ಯೋಜನೆಯಿಂದ ಪ್ರತಿಯೊಬ್ಬರಿಗೂ ಸಹಕಾರಿಯಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಈ ಯೋಜನೆಗಳಾದ ಜನಸಂಘಟನೆ, ಪ್ರಗತಿ ಬಂದು ಸಂಘಟನೆ, ಸ್ವಸಹಾಯ ಸಂಘ, ಮಹಿಳಾ ಜ್ಞಾನವಿಕಾಸ, ಪ್ರಗತಿ ನಿಧಿ, ಸಂಪೂರ್ಣ ಸುರಕ್ಷಾ, ಆರೋಗ್ಯ ರಕ್ಷಾ, ಪ್ರಗತಿ ರಕ್ಷಾ ಕವಚ, ಮಾಶಾಸನ, ಸುಜ್ಞಾನ ನಿಧಿ ಶಿಷ್ಯ ವೇತನ, ಜನಮಂಗಲ, ಸಾಮಾನ್ಯ ಸೇವಾ ಕೇಂದ್ರ, ಹೀಗೆ ಹಲವಾರು ಯೋಜನೆಗಳಿಂದ 67,17,32,725 ಕೋಟಿ ರೂ, ಈ ಭಾಗದಲ್ಲಿರುವ ಸಂಘದ ಸದಸ್ಯರ ವಿವಿಧ ಬೇಡಿಕೆಗಳಿಗೆ ಅನುಗುಣವಾಗಿ ಇಸವಿ1995-96 ರಲ್ಲಿ ತಾಲೂಕಿನಲ್ಲಿ ಪ್ರಗತಿ ನಿಧಿ ಕಾರ್ಯಕ್ರಮ ಪ್ರಾರಂಭವಾಗಿದ್ದು,ಇಂದಿನವರೆಗೂ ಈ ಯೋಜನೆಯಡಿ ವಿವಿಧ ಮಾದರಿಯ ಸಂಘದ ಸದಸ್ಯರುಗಳಿಗೆ ಪ್ರಗತಿ ನಿಧಿ ನೀಡಲಾಗಿದೆ ,

ಪ್ರಗತಿ ನಿಧಿ ಯೋಜನೆಯಡಿ 26 ಸಾವಿರಕ್ಕೂ ಹೆಚ್ಚು ಸದಸ್ಯರು ಇದರ ಫಲಾನುಭವಿಗಳಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಅನೇಕ ಸೇವೆಗಳನ್ನು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ನೀಡಲಾಗುವುದು ಎಂದರು.

About Mallikarjun

Check Also

ಉಪ ಲೋಕಾಯುಕ್ತರಿಂದ ಅ.30, 31 ರಂದು ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ

Public inquiry reception program by the Deputy Lokayukta on October 30th and 31st ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.