Breaking News

ಡಿ.16ಕೆ.ಆರ್.ಪೇಟೆಯಲ್ಲಿ ಸ್ವರ್ಣ ಪುರಸ್ಕಾರ: ಸ್ವರ್ಣ ಟೀವಿ ಮುಖ್ಯಸ್ಥ ಕಬ್ಬನಹಳ್ಳಿ ಶಂಭು

D. 16 Golden Award in KR Pete: Golden TV Head Kabbanahalli Shambhu

Screenshot 2023 12 11 20 20 53 69 6012fa4d4ddec268fc5c7112cbb265e7 300x171

*ಕೆ.ಆರ್.ಪೇಟೆ ವರದಿ: ಮಂಡ್ಯ ಜಿಲ್ಲೆಯ
ಸ್ವರ್ಣ ವಾಹಿನಿಯ “ಸ್ವರ್ಣ ಪುರಸ್ಕಾರ ಸಾಂಸ್ಕೃತಿಕ ಸಂಭ್ರಮ”ಕಾರ್ಯಕ್ರಮವು ಇದೇ ಡಿ.16ರಂದು ಕೆ.ಆರ್.ಪೇಟೆ ಪಟ್ಟಣದ ಬಿಜಿಎಸ್ ಶಾಲೆಯ ಆವರಣದಲ್ಲಿ ಅದ್ದೂರಿ ವರ್ಣರಂಜಿತ ವೇದಿಕೆಯಲ್ಲಿ ನಡೆಯಲಿದೆ ಎಂದು ಸ್ವರ್ಣ ವಾಹಿನಿಯ ಮುಖ್ಯಸ್ಥ ಕಬ್ಬನಹಳ್ಳಿ ಶಂಭು ತಿಳಿಸಿದರು.

ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಮಾತನಾಡಿ ತಾಲ್ಲೂಕಿನ ಸಾಧಕರಿಗೆ ವಾಹಿನಿ ವತಿಯಿಂದ ಸ್ವರ್ಣ ಪುರಸ್ಕಾರ ನೀಡಲಿದ್ದು ಮಾಜಿ ಸ್ಪೀಕರ್ ದಿ|| ಕೃಷ್ಣರವರಿಗೆ ಹಾಗೂ ವೀರಯೋಧ ದಿ|| ಜನಾರ್ಧನ್ ಕಿಕ್ಕೇರಿರವರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಹೇಮಗಿರಿ ಬಿಜಿಎಸ್ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣಗೌಡ, ಕೃಷಿ ಮತ್ತು ಸಾಮಾಜಿಕ ಹೋರಾಟಕ್ಕೆ ಕೆ.ಎಸ್.ನಂದಿನಿ ಜಯರಾಂ, ಸಿನಿಮಾ ವಿಭಾಗದಿಂದ ಕೆ.ಆ‌ರ್.ಪೇಟೆಯ ಅರವಿಂದರಾವ್ ಹಾಗೂ ಕೆ.ಆರ್.ಪೇಟೆ ಶಿವರಾಜು, ಸಾಮಾಜಿಕ ಸೇವೆಗೆ ಮಾರಪ್ಪರವರನ್ನು ಆಯ್ಕೆ ಮಾಡಲಾಗಿದ್ದು

ಪ್ರೇಕ್ಷಕರನ್ನು ರಂಜಿಸಲು ಕಾಮಿಡಿ ಕಿಲಾಡಿಗಳು ತಂಡದ ದೀಪಿಕಾ, ಪ್ರವೀಣ್ ಜೈನ್, ಮನೋಹರ್ ಗೌಡ ಸೇರಿದಂತೆ ಪ್ರಸಿದ್ಧ ಚಲನಚಿತ್ರ ನಟನಟಿಯರು ಭಾಗವಹಿಸಲಿದ್ದು ಹೆಸರಾಂತ ಗಾಯಕ, ಗಾಯಕಿಯರು ಭರಪೂರ ಮನರಂಜನೆ ನೀಡಲಿದ್ದಾರೆ. ಇದರ ಜೊತೆಗೆ ಸೈ ಡ್ಯಾನ್ಸ್ ಗ್ರೂಪ್ ವತಿಯಿಂದ ಅದ್ಧೂರಿ ಡ್ಯಾನ್ಸ್ ಆಯೋಜನೆ ಮಾಡಲಾಗಿದೆ ತಾಲ್ಲೂಕಿನ ಎಲ್ಲಾ ಜನತೆಯು ಸಕಾಲಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸ್ವರ್ಣ ವಾಹಿನಿಯ ಮುಖ್ಯಸ್ಥ ಕಬ್ಬನಹಳ್ಳಿ ಶಂಭು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೆ.ಎಸ್. ಸೋಮಶೇಖರ್, ಮನು, ರಘು, ಇತರರು ಇದ್ದರು.

About Mallikarjun

Check Also

screenshot 2025 12 17 18 45 28 37 e307a3f9df9f380ebaf106e1dc980bb6.jpg

ಉದ್ಯೋಗ ಖಾತ್ರಿ ಸೇರಿ ಮಹತ್ವದ ಯೋಜನೆಗಳ ಬದಲಾವಣೆಯಿಂದ ಬಡವರಿಗೆ ಅನ್ಯಾಯ: ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ್ ಕುಮಾರ್

ಉದ್ಯೋಗ ಖಾತ್ರಿ ಸೇರಿ ಮಹತ್ವದ ಯೋಜನೆಗಳ ಬದಲಾವಣೆಯಿಂದ ಬಡವರಿಗೆ ಅನ್ಯಾಯ: ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.