Breaking News

ಸೇವಂತಿ ಹೂ ಬೆಳೆದು ವ್ಯಾಪರವಿಲ್ಲದೆನಷ್ಟಕ್ಕೊಳಗಾದ ಭದ್ರಯ್ಯನಹಳ್ಳಿ ಗ್ರಾಮದ ಸಿದ್ದಪ್ಪ .

Siddappa of Bhadraiyanahalli village, who grew Sevanti flower and lost business.

ಜಾಹೀರಾತು
Screenshot 2023 10 28 16 47 04 21 6012fa4d4ddec268fc5c7112cbb265e72 300x231

ವರದಿ :ಬಂಗಾರಪ್ಪ ಸಿ ಹನೂರು .

ಹನೂರು : ತಾಲ್ಲೂಕಿನ ಭದ್ರಯನಹಳ್ಳಿ ಗ್ರಾಮದ ಮುನಿಶೆಟ್ಟಿಯವರ ಹಿರಿಯ ಮಗ ಸಿದ್ದಪ್ಪ ಎಂಬುವವರ ಜಮೀನಿನಲ್ಲಿ ಸುಮಾರು 2ಎಕರೆ ಸೇವಂತಿಗೆ ಹೂವು ಬೆಳೆದಿದ್ದಾರೆ .ಉತ್ತಮ ಬೆಳೆಗೆ ಉತ್ತಮ ಬೆಲೆ ಸಿಗದೆ ರೈತ ಸಿದ್ದಪ್ಪ ಕಂಗಾಲಾಗಿದ್ದಾರೆ. ಜೊತೆಗೆ ದಸರ ಹಬ್ಬದ ದಿನ ಸ್ವಲ್ಪ ಬೆಲೆ ಇತ್ತು ಆದರೂ ಸಹ ಹೂವು ಕೊಯ್ಯಲು ಕೂಲಿ ಆಳುಗಳು ಸಿಗದೇ ಸಾಕಷ್ಟು ಹೂವು ತೋಟದಲ್ಲಿಯೇ ಉಳಿದಿದೆ. ಇದರಿಂದ ನಾವು ಹಾಕಿದ ಬಂಡವಾಳ ಕೂಡ ಬಂದಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ, ಸ್ಥಳೀಯವಾಗಿ ಹೂವಿನ ಮಾರುಕಟ್ಟೆ ಇಲ್ಲವಾದ ಕಾರಣ ಸೇಲಂ ಅಥವಾ ಬೆಂಗಳೂರಿಗೆ ಹೂವನ್ನು ಸಾಗಿಸಲು ಸಾರಿಗೆ ವೆಚ್ಚ ತುಂಬಾ ತಗಲುತ್ತದೆ ಜೊತೆಗೆ ಗೊಬ್ಬರದ ಅಂಗಡಿಯವರಿಗೆ ಮತ್ತು ಕೂಲಿ ಆಳುಗಳಿಗೆ ಹಣ ನೀಡಲು ನಮ್ಮ ಬಳಿ ಯಾವುದೆ ಹಣ ಇಲ್ಲ ಎಂದು ರೈತ ದಂಪತಿಗಳು ಕಣ್ಣೀರು ಹಾಕುತ್ತಿದ್ದಾರೆ. ಇದುವರೆವಿಗೂ ಅಂದಾಜು 2ಲಕ್ಷ ವೆಚ್ಚವಾಗಿದೆ ಎಂದು ತಿಳಿಸಿದರು, ಈ ಬಾರಿಗೆ ಹೂವಿನ ಜೊತೆಗೆ ನಮ್ಮ ಬದುಕು ಕೂಡ ಅರಳಬಹುದು ಎಂದು ಕಾದು ಕುಳಿತ ರೈತ ದಂಪತಿಗಳಿಗೆ ಹೂವಿನ ಬೆಳೆಯಿಂದ ನಿರಾಸೆಯಾಗಿದೆ. ಇದೆನೇ ಇರಲಿ ಈ ರಸ್ತೆಯಲ್ಲಿ ಹೋಗುವ ದಾರಿಹೋಕರನ್ನ ಮಾತ್ರ ಈ ಹೂವಿನ ತೋಟ ಮಾತ್ರ ತನ್ನತ್ತ ಕೈ ಬೀಸಿಕರೆದು ಸೆಲ್ಪಿ ಕ್ಲಿಕ್ಕಿಸಿಕೊಳ್ಳುವಂತೆ ತನ್ನ ಸೌಂದರ್ಯದಿದ ಮೋಡಿ ಮಾಡುತ್ತಾ ಅರಳಿನಿಂತಿರೋದಂತು ಸತ್ಯ. ಇಷ್ಟೋಂದು ಅದ್ಭುತವಾಗಿ ಹೂವಿನ ಕೃಷಿ ಮಾಡಿದ ರೈತ ದಂಪತಿಗಳಿಗೆ ಅಭಿನಂದಿಸೋಣ ಜೊತೆಗೆ ಮುಂದಿನ ದಿನಗಳಲ್ಲಿ ಉತ್ತಮ ಬೆಲೆಗೆ ಮಾರಾಟವಾಗಿ ಅವರು ಬದುಕು ಹಸನಾಗಲಿ ಎಂದು ಹಾರೈಸೋಣ ಬಂಧುಗಳೇ. ಎಂದು ಸ್ಥಳೀಯ ನಿವಾಸಿ -ಗೋವಿಂದರಾಜು ಎಂ (ಕಲ್ಕಿ) ಎಂಬುವವರು ತಿಳಿಸಿದರು .

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.