Breaking News

ಪುರಾಣಗಳಿಂದ ಜನರಲ್ಲಿ ಸಂಸ್ಕಾರ, ಸಂಸ್ಕೃತಿವೃದ್ಧಿಯಾಗುತ್ತದೆ – ಹನುಮಂತಪ್ಪ ಅಂಡಗಿ

Mythology develops people’s rites and culture – Hanumanthappa Andagi

ಜಾಹೀರಾತು

ಕೊಪ್ಪಳ : ಪುರಾಣಗಳಿಂದ ಜನರಲ್ಲಿ ಸಂಸ್ಕಾರ ಬೆಳೆಯುತ್ತದೆ, ಜನರಲ್ಲಿ ಸಂಸ್ಕಾರ, ಸಂಸ್ಕೃತಿ, ಜ್ಞಾನ ವೃದ್ಧಿಯಾಗುತ್ತದೆ. ಮನುಷ್ಯ ಯಾವಾಗಲೂ ಪುರಾಣ, ಪುಣ್ಯ ಕಥೆಗಳನ್ನು ಕೇಳುತ್ತಿರಬೇಕು. ಇದರಿಂದ ಆಧ್ಯಾತ್ಮದ ಅನುಭವವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಶೈಕ್ಷಣಿಕ ಪ್ರಗತಿ ಆಗದೆ ಇರುವುದು ನೋವಿನ ಸಂಗತಿ. ಶಿಕ್ಷಣದಿಂದ ಮಾತ್ರ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಆದ್ದರಿಂದ ಪಾಲಕರು ಕಡ್ಡಾಯವಾಗಿ ತಮ್ಮ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದರ ಮೂಲಕ ಅವರನ್ನು ಸಾಕ್ಷರರನ್ನಾಗಿ ಮಾಡಬೇಕಾದ ಅಗತ್ಯತೆ ಇದೆ ಎಂದು ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.

ಅವರು ಕೊಪ್ಪಳ ತಾಲೂಕಿನ ಹಲವಾಗಲಿ ಗ್ರಾಮದಲ್ಲಿ ೩೪ನೇ ವರ್ಷದ ದೇವಿ ಪುರಾಣದ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಅವರು ಮುಂದುವರೆದ ಮಾತನಾಡುತ್ತಾ, ಮನುಷ್ಯ ಹಲವಾರು ಮೂಲದಿಂದ ದೊರೆಯುವ ಜ್ಞಾನವನ್ನು ಪಡೆದುಕೊಳ್ಳಬೇಕು. ಜ್ಞಾನದಿಂದ ವಿನಯ ಬರುತ್ತದೆ. ವಿನಯದಿಂದ ಗೌರವ ವೃದ್ಧಿಯಾಗುತ್ತದೆ. ಹಣವಂತರು ದಾನ, ಧರ್ಮ ಮಾಡುವ ಮನೋಭಾವನೆಗಳನ್ನು ಬೆಳೆಸಿಕೊಂಡಾಗ ಮಾತ್ರ ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಲು ಸಾಧ್ಯವಾಗುತ್ತದೆ ಎಂದರು.

ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಜೀವಶಾಸ್ತ್ರ ಉಪನ್ಯಾಸಕರಾದ ವೀರಶೇಖರ ಪತ್ತಾರ ಅವರು ಮಾತನಾಡುತ್ತಾ, ಇಡೀ ಆ ವಿಶ್ವವೇ ಭಗವಂತನ ಆಲಯ. ಇಲ್ಲಿ ಯಾವುದೂ ನಮ್ಮದಲ್ಲ. ಎಲ್ಲದೂ ಆ ಭಗವಂತನಿಂದಲೇ ಬಂದದ್ದು. ಆ ಭಗವಂತನ ನಿಜವಾದ ಪೂಜೆ ಮಾಡಬೇಕಾದರೆ ನಾವು ಏನು ಮಾಡಬೇಕೆಂದರೆ, ನಾವು ಏನೇನು ಕೆಲಸ ಮಾಡುತ್ತಿದ್ದೇವೆಯೋ, ಆ ಕೆಲಸವನ್ನು ನಿಷ್ಠೆಯಿಂದ, ಶ್ರದ್ಧೆಯಿಂದ, ಪ್ರಾಮಾಣಿಕತೆಯಿಂದ ನಮ್ಮ ಮನಮೆಚ್ಚುವ ಹಾಗೆ ಕೆಲಸ ಮಾಡಿದರೆ ಅದು ಭಗವಂತನ ನಿಜವಾದ ಪೂಜೆಯಾಗುತ್ತದೆ. ಅದು ನಿಜವಾದ ನವರಾತ್ರಿ ಉತ್ಸವವಾಗುತ್ತದೆ ಎಂದರು.

ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಇಂಗ್ಲಿಷ್ ಉಪನ್ಯಾಸಕರಾದ ವೀರಣ್ಣ ಜೋಗಿನ್, ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದಪ್ಪ ಹಳ್ಳಿ, ಚೆನ್ನಪ್ಪ ಕೊಂಡಾನಹಳ್ಳಿ, ಸಂತೋಷ ಹಳ್ಳಿ, ಸಾರೆಪ್ಪ ಪೂಜಾರ, ಹಿರಿಯರಾದ ದೊಡ್ಡ ಮೈಲಾರಪ್ಪ ಬಂಗಿ, ದೇವಪ್ಪ ಗುಡಿಸಲರ, ಹನುಮಂತಗೌಡ ಪೊಲೀಸಪಾಟೀಲ, ಶಿವಾನಂದಯ್ಯ ಗುರುವಿನ, ಸಿದ್ದಣ್ಣ ಗುಡಿಗೇರಿ, ಪುರಾಣ ಪ್ರವಚನಕಾರರಾದ ಪಂಡಿತ ವಸಂತ ಆಚಾರ್ಯ ಶಾಸ್ತ್ರಿಗಳು, ಸಂಗೀತ ಕಲಾವಿದರಾದ ಬಸವರಾಜ.ಎನ್.ಹನುಮನಾಳ, ತಬಲವಾದಕರಾದ ಬಸವರಾಜ ಹಂಸಪ್ರಸಾದ ಉಪಸ್ಥಿತರಿದ್ದರು. ಮಂಜುನಾಥ ಗೌಡ್ರು ನಿರೂಪಿಸಿದರು.

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.