Breaking News

ತೊಟ್ಲೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್‌ಡಿಎಂಸಿ ರಚನೆ

Formation of new SDMC in Totlura Government Senior Primary School

ಜಾಹೀರಾತು
Screenshot 2023 09 28 10 11 16 58 6012fa4d4ddec268fc5c7112cbb265e7 300x135

ಯಾದಗಿರಿ: ತೊಟ್ಲೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ರವಿ ಕೊಟಗೆರಿ ಮತ್ತು ಉಪಾಧ್ಯಕ್ಷರಾಗಿ ಜಯಮ್ಮ – ರಮೇಶ ಆಯ್ಕೆಯಾಗಿದ್ದಾರೆ.

ಶಾಲೆಯಲ್ಲಿ ಪಾಲಕರ ಸಭೆ ನಂತರ, ಎಸ್‌ಡಿಎಂಸಿ ರಚನೆ ಸಭೆ ಆಯೋಜಿಸಲಾಗಿತ್ತು, ಎಲ್ಲ ಊರಿನ ಗಣ್ಯರ ಸಹಮತದೊಂದಿಗೆ ಶಾಂತಿಯುತವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ನೂತನ ಅಧ್ಯಕ್ಷ ರವಿ ಕೊಟಗೆರಿ ಮಾತನಾಡಿ “ಎಲ್ಲರ ಸಹಕಾರದೊಂದಿಗೆ ಶಾಲಾಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ”

ಯಲ್ಹೇರಿ ಕ್ಲಸ್ಟರಿನ ಸಿಆರ್‌ಪಿ ಶಂಕರಪ್ಪ ಪೂಜಾರಿ ಮಾತನಾಡಿ, ” ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಶಾಲಾಭಿವೃದ್ಧಿ, ಶೈಕ್ಷಣಿಕ ಪ್ರಗತಿಗೆ ಅಗತ್ಯ ಸಲಹೆ, ಸೂಚನೆ,
ಮಾರ್ಗದರ್ಶನ ನೀಡಬೇಕು”

ಶಿಕ್ಷಕರಾದ ಶರಣಯ್ಯ ಹಿರೇಮಠ ಮಾತನಾಡಿ “
ಶಾಲೆಯ ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಕರ ಜತೆಗೆ, ಎಸ್‌ಡಿಎಂಸಿ ಪಾತ್ರ ಬಹುಮುಖ್ಯ “

ಈ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿಗಳಾದ ಆಸೀಮ್ ಜುಬೇರ್ ಚಿನ್ನಾಕಾರ, ಶಾಲೆ ಭೀಮಪ್ಪ, ಅರುಣ ಕುಮಾರ , ನರಸಪ್ಪ ಹಾಗೂ ನೂತನ ಸದಸ್ಯರಾದ ಲಕ್ಷ್ಮಪ್ಪ, ಹಣಮಂತ, ಬುರನ್ ಸಾಬ, ನಭಿ ಸಾಬ, ಆನಂದ, ಲಕ್ಷ್ಮೀ-ರಾಜು, ಸಂತೋಷಿ, ವಿಶ್ವನಾಥ, ಸೌಭಾಗ್ಯ, ಶರಣಮ್ಮ, ಸಂತೋಷ-ಮಲ್ಲಿಕಾರ್ಜುನ, ಸಾಮುಯಲ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಾಲಕ-ಪೋಷಕರು,ಗ್ರಾಮಸ್ಥರೆಲ್ಲ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂತ್ಯದಲ್ಲಿ ಮುಖ್ಯ ಗುರುಗಳಾದ ಸೂರ್ಯಕಾಂತ ರಾಥೋಡ ಅವರು ನೂತನ ಅಧ್ಯಕ್ಷ, ಉಪಾಧ್ಯಕ್ಷ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.