Breaking News

ತ್ಯಾಗ ಬಲಿದಾನದ ಸಂವಿಧಾನ,ಪ್ರಜಾಪ್ರಭುತ್ವ ಉಳಿವಿಗಾಗಿ ಜಾಗೃತಿ ಅಗತ್ಯ:ಲಕ್ಷ್ಮಣಗೌಡ

Sacrificial constitution, awareness needed for survival of democracy: Laxman Gowda

ಜಾಹೀರಾತು
Screenshot 2024 01 26 11 24 16 32 6012fa4d4ddec268fc5c7112cbb265e7 300x170


ಗಂಗಾವತಿ: ಸಾವಿರಾರು ಜನರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಲಭಿಸಿದ್ದು ಇದರ ಉಳಿವಿಗಾಗಿ ಸದಾ ಜಾಗೃತರಾಗಿರುವುದು ಅವಶ್ಯಕತೆ ಇದೆ ಎಂದು ನಿತ್ಯಹೊಯ್ಸಳ ಸಹಕಾರಿ ಸಂಸ್ಥೆಯ ಅಧ್ಯಕ್ಷ ಜೆ.ಬಿ.ಲಕ್ಷ್ಮಣಗೌಡ ಹೇಳಿದರು.
ಅವರು ಸಹಕಾರಿಯ ಆವರಣದಲ್ಲಿ ಗಣರಾಜ್ಯೋತ್ಸವದ ನಿಮಿತ್ತ ರಾಷ್ಟಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಹಿರಿಯರ ಕನಸು ಸರ್ವ ಜನಾಂಗಗಳ ಪ್ರಗತಿಯ ಮೂಲಕ ದೇಶವು ವಿಶ್ವಮಟ್ಟಕ್ಕೆ ಬೆಳವಣಿಗೆಯಾಗಬೇಕೆನ್ನುವ ಕನಸು ನಾವೆಲ್ಲ ಸಂವಿಧಾನದ ಅಡಿ ಅನುಷ್ಠಾನ ಮಾಡಬೇಕಿದೆ. ಶೋಷಿತರ ವರ್ಗಗಳಿಗೆ ಆರ್ಥಿಕ ,ಶೈಕ್ಷಣಿಕ ಶಕ್ತಿ ನೀಡುವ ಮೂಲಕ ಸಮಸಮಾಜಕ್ಕೆ ಮುನ್ನುಡಿ ಬರೆಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಹಕಾರಿ ಉಪಾಧ್ಯಕ್ಷ ಅಶೋಕ ಗೌಡ,ನಿರ್ದೇಶಕರಾದ ನೀಲಕಂಠಪ್ಪ ಹೊಸಳ್ಳಿ, ಮಲ್ಲೇಶಪ್ಪ, ರಾಜೇಂದ್ರ ನಾಯಕ,ಕೆಲೋಜಿ ವೆಂಕಟೇಶ, ಧನಲಕ್ಷ್ಮಿ,ಲಕ್ಷ್ಮಿದೇವಿ,ಕುಮಾರಪ್ಪ ಸಿಂಗನಾಳ, ಪರಶುರಾಮ ಇಟಗಿ, ಪರಶುರಾಮಗೌಡ,ವ್ಯವಸ್ಥಾಪಕ ರಘುರಾಮ ದರೋಜಿ, ಸಿಬ್ಬಂದಿಗಳಾದ ಶಿಲ್ಪಾ ಸೇರಿ ಸಹಕಾರಿ ಸದಸ್ಯರಿದ್ದರು.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.