ಹಿಂದಿ ಹೇರಿಕೆ ವಿರೋಧಿಸಿ ಬೃಹತ್ ಪ್ರತಿಭಟನೆ
Massive protest against Hindi imposition
ಹಿಂದಿ ಹೇರಿಕೆ ವಿರೋಧಿಸಿ ಬೃಹತ್ ಪ್ರತಿಭಟನೆ


ಬೆಂಗಳೂರು: ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹಿಂದಿ ಭಾಷಾ ಕಲಿಕೆಯನ್ನು ೧೦೦ ಅಂಕಗಳಿಗೆಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಇಂದು ಮಲ್ಲೇಶ್ವರದ ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಲಿಯ ಎದಿರು ಬೃಹತ್ ಪ್ರತಿಭಟನೆ
ನಡೆಸಲಾಯಿತು.
ಕನ್ನಡ ಪರ ಸಂಘಟನೆಗಳು, ರೈತ-ದಲಿತ ಸಂಘಟನೆಗಳು, ಪ್ರಗತಿಪರ ಜನ ಸಂಘಟನೆಗಳ ನೂರಾರು ಮಂದಿ ಇಂದು ಬೆಳಗ್ಗೆ ಪ್ರೌಢಶಿಕ್ಷಣ
ಮಂಡಳಿಯ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೋಲೀಸರು ಪ್ರತಿಭಟನಾಕಾರರನ್ನು ತಡೆದರು.
ಕೆಲಹೊತ್ತು ಮಾತಿನ ಚಕಮಕಿ ನಡೆದು ಹೋರಾಟಗಾರರು ಹಿಂದೆ ಸರಿಯದೆ ಹೋದಾಗ ಕೊನೆಗೆ ಪೋಲೀಸರು ಇಲಾಖೆಯ ನಿರ್ದೇಶಕರಾದ
ಮಹೇಶ್ ರವರನ್ನೇ ಕಚೇರಿಯಿಂದ ಕರೆಸಿ ಸಂಘಟನೆಗಳ ಬೇಡಿಕೆಗಳನ್ನು ಸಲ್ಲಿಸಲು ಅನುವು ಮಾಡಿಕೊಟ್ಟರು.
ಕನ್ನಡ ಚಳವಳಿಯ ಹಿರಿಯ ಮುಖಂಡರಾದ ಲೇಖಕ ಜಾಣಗೆರೆ ವೆಂಕಟರಾಮಯ್ಯನವರಃ ಮಾತನಾಡಿ ‘ಹಿಂದಿ ಕಡ್ಡಾಯ ಕಲಿಕೆಯನ್ನು
ಕನ್ನಡಿಗರು ಎಂದೂ ಒಪ್ಪುವುದಿಲ್ಲ, ಸರ್ಕಾರವು ವಿಳಂಬ ಮಾಡದೆ ಹಿಂದಿ ಹೇರಿಕೆ ರದ್ದು ಮಾಡಬೇಕೆಂದು’ ಅಗ್ರಹಿಸಿದರು.
ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸಾ.ರಾ. ಗೋವಿಂದು ಮಾತನಾಡಿ ‘ಕಳೆದ ನಾಲ್ಕು ದಶಕಗಳಿಂದಲೂ ನಾನು
ಹಿಂದಿ ಭಾಷೆಯ ಹೇರಿಕೆ ವಿರೋಧಿಸಿ ಹೋರಾಟ ಮಾಡುತ್ತಾ ಬಂದಿದ್ದು ಕನ್ನಡಿಗರು ಈ ವಿಚಾರದಲ್ಲಿ ರಾಜಿಯಾಗುವುದಿಲ್ಲ, ಸರ್ಕಾರವು ಈ
ಬಗ್ಗೆ ಖಚಿತ ನಿರ್ಧಾರ ಕ್ಯೆಗೊಳ್ಳುವಂತೆ’ ಆಗ್ರಹಿಸಿದರು.
ರೈತ ಸಂಘಟನೆಯ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ ‘ಸರ್ಕಾರದ ಹಿಂದಿ ಕಲಿಕೆ ನೀತಿಯಿಂದ ಲಕ್ಷಾಂತರ ಮಕ್ಕಳ
ಬದುಕು ಭವಿಷ್ಯವು ಅತಂತ್ರಗೊಳ್ಳುತ್ತಿದೆ. ಸರ್ಕಾರವು ಸೂಕ್ತ ತೀರ್ಮಾನ ಮಾಡುವವರೆಗೂ ಹೋರಾಟ ನಿಲ್ಲದೆಂದು’ ಎಚ್ಚರಿಸಿದರು.
ನಾವು ದ್ರಾವಿಡ ಕನ್ನಡಿಗರು ಚಳವಳಿಯ ಅಭಿಗೌಡ ಮಾತನಾಡಿ ‘ಸರ್ಕಾರವು ಹಿಂದಿ ಭಾಷಾ ಕಲಿಕೆ ರದ್ದುಮಾಡದಿದ್ದಲ್ಲಿ ಹಿಂದಿ ಭಾಷಾ
ಪರೀಕ್ಷೆ ನಡೆಯುವ ಮಾರ್ಚ್ ೩೦ರಂದು ಪರೀಕ್ಷಾ ಕೇಂದ್ರಗಳಿಗೆ ಹೋರಾಟಗಾರರು ನುಗ್ಗಿ ಅಡಚಣೆ ಉಂಟು ಮಾಡುವುದಾಗಿ ಎಚ್ಚರಿಕೆ’
ನೀಡಿದರು.
ನಾವೇ ಕರ್ನಾಟಕದ ಪಾರ್ವತೀಶ ಬಿಳಿದಾಳೆ ಐದು ಪ್ರಮುಖ ಬೇಡಿಕೆಗಳಿರುವ ಮನವಿ ಪತ್ರವನ್ನು ಸಭೆಯಲ್ಲಿ ಓದಿದರು.
ಪ್ರತಿಕ್ರಿಯಿಸಿದ ನಿರ್ದೇಶಕರಾದ ಮಹೇಶ್ ರವರು ಈ ವಿಚಾರವನ್ನು ತಕ್ಷಣ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಕದಂಬ ಸೇನೆಯ ಚೇತನ್ ಗೌಡ, ರಕ್ಷಣಾ ವೇದಿಕೆಯ ಶಿವರಾಮೇಗೌಡರು, ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಶೇ.ಬೊ
ರಾಧಾಕೃಷ್ಣ, ಸ್ವಾಭಿಮಾನಿ ಕನ್ನಡ ರಕ್ಷಣಾ ವೇದಿಕೆಯ ಕೃಷ್ಣೇಗೌಡರು, ಕರ್ನಾಟಕ ರಕ್ಷಣಾ ಪಡೆಯ ನೆ.ಲ ರಾಮಪ್ರಸಾದ್, ಡಾ. ರಾಜ್ ಸೇನೆಯ
ತ್ಯಾಗರಾಜ್, ನಮ್ಮ ಕರುನಾಡ ವಿಜಯ ಸೇನೆಯ ವಿಜಯ ಕುಮಾರ್, ಚಂದಾಪುರ ಯುವ ರಣಧೀರರ ಪಡೆಯ ಮಂಜುನಾಥ್, ಕರ್ನಾಟಕ
ಜನಶಕ್ತಿಯ ಸಿರಿಮನೆ ನಾಗರಾಜ್ ಮುಂತಾದವರು ಹಾಗೂ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸAಘರ್ಷಮಯ ವಾತಾವರಣ ಉಂಟಾಗುವ ನಿರೀಕ್ಷೆಯಿಂದ ಭಾರಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿ
