ಮಾನ್ಯ ಜಿಲ್ಲಾ ಸತ್ರ ನ್ಯಾಯಾಧೀಶರಾದ ಸದಾನಂದ ನಾಯ್ಕ್‌ ಹಾಗೂ ವಿವಿಧ ಗಣ್ಯರುಲಯನ್ಸ್‌ ಕಣ್ಣಿನ ಆಸ್ಪತ್ರೆಗೆ ಭೇಟಿ.

H.Mallikarjun
H.Mallikarjun - Kalyanasiri
1 Min Read
Honorable District Sessions Judge Sadananda Naik and various dignitaries visited Lions Eye Hospital.

ಮಾನ್ಯ ಜಿಲ್ಲಾ ಸತ್ರ ನ್ಯಾಯಾಧೀಶರಾದ ಸದಾನಂದ ನಾಯ್ಕ್‌ ಹಾಗೂ ವಿವಿಧ ಗಣ್ಯರು
ಲಯನ್ಸ್‌ ಕಣ್ಣಿನ ಆಸ್ಪತ್ರೆಗೆ ಭೇಟಿ.

ಜಾಹೀರಾತು

ಗಂಗಾವತಿ: ಇತ್ತೀಚೆಗೆ ಗಂಗಾವತಿ ನಗರದ ಕಂಪ್ಲಿ ರಸ್ತೆಯಲ್ಲಿ ಉದ್ಘಾಟನೆಗೊಂಡ ಲಯನ್ಸ್‌ ಕಣ್ಣಿನ ಆಸ್ಪತ್ರೆಗೆ ಮಾನ್ಯ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶ್ರೀ ಸದಾನಂದ ನಾಯ್ಕ್‌̧ ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ನಾಗೇಶ ಪಾಟೀಲ್‌, ಖ್ಯಾತ ಹಾಸ್ಯ ಭಾಷಣಕಾರರಾದ ಗಂಗಾವತಿ ಪ್ರಾಣೇಶ್‌ ಅವರು ಭೇಟಿ ನೀಡಿದರು.
ಈ ಲಯನ್ಸ್‌ ಕಣ್ಣಿನ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ನಿತ್ಯ ಕಣ್ಣಿನ ತಪಾಸಣೆ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳು ನಡೆಯುತ್ತಿರುವ ಬಗ್ಗೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ವೈದ್ಯರಾದ ಡಾ|| ಜಿ. ಚಂದ್ರಪ್ಪ, ಡಾ|| ಸೋಮರಾಜು, ಲಯನ್ಸ್‌ ಕಣ್ಣಿನ ಆಸ್ಪತ್ರೆಯ ಚೇರಮನ್‌ರಾದ ಟಿ. ರಾಮಕೃಷ್ಣ, ವೈದ್ಯರಾದ ಡಾ|| ಸ್ನೇಹಲತಾ, ಲಯನ್ಸ್‌ ಕ್ಲಬ್‌ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್‌, ಕಾರ್ಯದರ್ಶಿಯಾದ ಜಂಬಣ್ಣ ಐಲಿ ಹಾಗೂ ಖಚಾಂಚಿಯಾದ ಶಿವಪ್ಪ ಗಾಳಿ ಹಾಗೂ ಇತರೆ ಸದಸ್ಯರು ಭೇಟಿ ನೀಡಿದ ಮಹನೀಯರನ್ನು ಆತ್ಮೀಯವಾಗಿ ಸನ್ಮಾನಿಸಿದರು.
ಖ್ಯಾತ ಹಾಸ್ಯಭಾಷಣಕಾರರಾದ ಗಂಗಾವತಿ ಪ್ರಾಣೇಶ್‌ ಅವರು ತಮ್ಮ ಕಣ್ಣುಗಳನ್ನು ಲಯನ್ಸ್‌ ಐ ಡೊನೇಷನ್‌ ಸೆಂಟರ್‌ಗೆ ದಾನ ಮಾಡುವುದಾಗಿ ವಾಗ್ಧಾನ ಮಾಡುವ ಮೂಲಕ ಈ ಮಹತ್ಕಾರ್ಯಕ್ಕೆ ಮುನ್ನುಡಿ ಬರೆದರು.

Total Views: 0
Share This Article