ಬಲ್ಡೋಟ ಕಾರ್ಖಾನೆ ಹಠಾವೋ ೯೯ನೇ ದಿನದ ಧರಣಿ ಯಶಸ್ವಿ೧೦೦ನೇ ದಿನದ ಹೋರಾಟದಕರಪತ್ರ ಬಿಡುಗಡೆ

screenshot 2026 02 06 19 24 28 64 e307a3f9df9f380ebaf106e1dc980bb6.jpg

ಬಲ್ಡೋಟ ಕಾರ್ಖಾನೆ ಹಠಾವೋ ೯೯ನೇ
ದಿನದ ಧರಣಿ ಯಶಸ್ವಿ೧೦೦ನೇ ದಿನದ ಹೋರಾಟದಕರಪತ್ರ ಬಿಡುಗಡೆ

Baldota Factory Hathao 99th day of protest successful, 100th day protest pamphlet released

ಕೊಪ್ಪಳ: ನಗರದ ನಗರಸಭೆ ಆವರಣದಲ್ಲಿ ೯೯ನೇ
ದಿನಗಳಿಂದ ನಡೆದಿರುವ ಬಲ್ಡೋಟ ಹಠಾವೋ ಅನಿರ್ದಿಷ್ಟಾವಧಿ
ಧರಣಿ ಸತ್ಯಾಗ್ರಹ ೯೯ನೇ ದಿನ ಪೂರೈಸಿತು. ಕೊಪ್ಪಳ
ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ
ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಮೂಲಕ
ನಡೆಸುತ್ತಿರುವ ಹೋರಾಟ ಶತದಿನ ಕಾರ್ಯಕ್ರಮ ಬೃಹತ್
ಸಮಾವೇಶವನ್ನು ಹಳೆ ಜಿಲ್ಲಾ ಆಸ್ಪತ್ರೆ ಮುಂದೆ
ನಡೆಸಲಾಗುವುದು, ಈ ಕುರಿತು ಹೊರಡಿಸಲಾದ
ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಭಾಗ್ಯನಗರ ಮತ್ತು ಕೊಪ್ಪಳದಲ್ಲಿ ಆಟೋ ಮೂಲಕ
೧೦೦ನೇ ದಿನದ ಹೋರಾಟಕ್ಕೆ ಬರುವಂತೆ ಜನರಿಗೆ ಸಂದೇಶ
ಕೊಡಲಾಗಿದೆ. ಕರಪತ್ರ ಹಂಚಲಾಗಿದೆ.
ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು
ಬೆಟ್ಟದೂರು ಮಾತನಾಡಿ, ಸಾವಿರಾರು ಜನರು, ಇದುವರೆಗೆ
ಹೋರಾಟ ಬೆಂಬಲಿಸಿದ ಸಂಘಟನೆಗಳು, ಸಂಸ್ಥೆಗಳ
ಸದಸ್ಯರು, ಪದಾಧಿಕಾರಿಗಳು ಭಾಗವಹಿಸುವರು. ಎಲ್ಲಾ
ಸಮಾಜದ, ಸಮುದಾಯದ, ಧಾರ್ಮಿಕ ಸಂಸ್ಥೆಗಳ
ಮುಖಂಡರು ಭಾಗವಹಿಸುವರು. ವಾಣಿಜ್ಯೋದ್ಯಮಿಗಳು,
ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಉದ್ಯಮಿಗಳು, ಗಂಜ್
ವರ್ತಕರು, ಮಹಿಳಾ ಸಮುದಾಯದ ಪ್ರಮುಖರು,
ಕಾರ್ಮಿಕ, ರೈತ, ದಲಿತರ ಚಳವಳಿಯ ಸಂಘಟನೆಗಳು
ಭಾಗವಹಿಸುತ್ತವೆ ಎಂದು ಹೇಳಿದರು.
ದಿನಾಂಕ: ೦೭.೦೨.೨೦೨೬ರ ಶನಿವಾರ ಬೆಳಿಗ್ಗೆ ೯ ಗಂಟೆಗೆ ನಗರ
ಸಭೆಯ ಧರಣಿ ಸ್ಥಳದಲ್ಲಿ ಶ್ರೀಗವಿಮಠದಿಂದ ಉಪಹಾರ ವ್ಯವಸ್ಥೆ
ಮಾಡುತ್ತದೆ. ಬೆ. ೧೦ ಗಂಟೆಗೆ ಸರಿಯಾಗಿ ಸಾಣೆಹಳ್ಳಿ ಶ್ರೀಸಾಣೆಹಳ್ಳಿ ಶ್ರೀ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬಾಧಿತ ಗಿಣಿಗೇರಿ,
ಅಲ್ಲಾನಗರ, ಹಿರೇಬಗನಾಳ, ಹಾಲವರ್ತಿ ಜನರನ್ನು ಭೇಟಿ ಮಾಡಿ ೧೧
ಗಂ. ವೇದಿಕೆಯ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ಇದೇ
ಸಂದರ್ಭದಲ್ಲಿ ರಂಜಾನ್ ದರ್ಗಾ, ಸೂರ್ಯಕಾಂತ ಗುಣಕಿಮಠ ಇಸ್ಲಾಂ
ದರ್ಗಾ ಹಳ್ಳಿ ಭೇಟಿ ಮಾಡುತ್ತಾರೆ. ಗದುಗಿನ ತೊeoಟದ ಶ್ರೀ
ಸಿದ್ಧರಾಮ ಸ್ವಾಮಿಗಳು, ಕೊಪ್ಪಳ ಜಿಲ್ಲೆಯ ಮೈನಳ್ಳಿ

ಸ್ವಾಮಿಗಳು ದದೇಗಲ್, ಹಿರೇಸಿಂದೋಗಿ, ಇಟಗಿ ಸ್ವಾಮಿಗಳು
ಆಗಮಿಸುತ್ತಾರೆ. ಬೆ. ೧೧ ಗಂಟೆಗೆ ಪ್ರತಿಭಟನೆ ಸಮಾವೇಶ
ಆರಂಭವಾಗುತ್ತದೆ.
ಧರಣಿಯಲ್ಲಿ ಸಾಹಿತಿ ಎಚ್.ಎಸ್. ಪಾಟೀಲ್, ಎ.ಎಂ. ಮಾದರಿ,
ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಡಿ.ಎಂ.
ಬಡಿಗೇರ, ಡಿ.ಎಚ್. ಪೂಜಾರ, ಮಂಜುನಾಥ ಜಿ. ಗೊಂಡಬಾಳ,
ಪ್ರಮುಖರಾದ ಬಿ.ಜಿ. ಕರಿಗಾರ, ವೀರಣ್ಣ ಹುರಕಡ್ಲಿ, ವಿಶ್ವನಾಥ
ಯಾಳಗಿ, ರಮೇಶ ಕರ್ಮುಡಿ, ಪ್ರಕಾಶ ಎಚ್, ರಾಜಶೇಖರ
ಏಳುಬಾವಿ, ಜಿ.ಬಿ. ಪಾಟೀಲ್, ಗಂಗಾಧರ್ ಖಾನಾಪುರ, ಶಿವಪ್ಪ ಜಲ್ಲಿ,
ಶರಣು ಶೆಟ್ಟರ್, ಸರೋಜಾ ಬಾಕಳೆ, ನಟರಾಜ ಸವಡಿ,
ಮಹಾಂತೇಶ ಮಲ್ಲನಗೌಡರ, ವೀರಯ್ಯ
ನರಸಿಂಗನಮಠ, ಸದಾಶಿವ ಪಾಟೀಲ್, ವಿಜಯಮಹಾಂತೇಶ
ಹಟ್ಟಿ, ರೇಣುಕಾ ಪೂಜಾರ, ಬಸವರಾಜ ನರೇಗಲ್, ಮೂಕಪ್ಪ
ಮೇಸ್ತಿç ಬಸಾಪುರ, ಶರಣು ಗಡ್ಡಿ, ಮಂಗಳಾದೇವಿ
ರಾಠೋಡ್, ಹನುಮಂತ ಕಟಿಗಿ, ಸಂಜೀವಮ್ಮ ಮುಂಡರಗಿ,
ಗಂಗಮ್ಮ ಕೊಡೆಕಲ್, ರತ್ನಮ್ಮ ದೊಡ್ಡಮನಿ
ಬಸವರಾಜಪ್ಪ ವಿ ಶೆಟ್ಟರ್, ವಿಶಾಲಾಕ್ಷಮ್ಮ ಬಿ. ಶೆಟ್ಟರ್
ಮುಂತಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *