Breaking News

ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕ ವತಿಯಿಂದ ಬೃಹತ್ ಪ್ರತಿಭಟನೆ.

A massive protest by the All Karnataka Valmiki Nayak Mahasabha Taluka.

Screenshot 2025 09 25 19 39 48 32 40deb401b9ffe8e1df2f1cc5ba480b128631949057037704077

ಗಂಗಾವತಿ ರಾಜ್ಯ ಸರಕಾರ ರಾಜ್ಯ ಪರಿಶಿಷ್ಟ ಪಂಗಡ( ಎಸ್ ಟಿ ) ಕುರುಬರು ಸೇರಿದಂತೆ ಅನ್ಯ ಜಾತಿಯರನ್ನು ಸೇರ್ಪಡೆಗೆ ಮುಂದಾಗಿರುವ ಕ್ರಮವನ್ನು ಖಂಡಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕ ಘಟಕ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿ ತಹಸಿಲ್ದಾರರ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು.

ಜಾಹೀರಾತು

ಈ ಸಂದರ್ಭದಲ್ಲಿ ಮಹಾಸಭಾ ತಾಲೂಕ ಘಟಕದ ಅಧ್ಯಕ್ಷ ವೀರಭದ್ರಪ್ಪ ನಾಯಕ ಮಾತನಾಡಿದರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ ಹಾಗೂ ಶೈಕ್ಷಣಿಕ ಜನಗಣತಿಯ ಹೆಸರಿನಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದು ಅತ್ಯಂತ ಖಂಡನೀಯವಾಗಿದೆ.

ಪರಿಶಿಷ್ಟ ಪಂಗಡಕ್ಕೆ ಕುರುಬ ಜನಾಂಗ ಸೇರಿದಂತೆ ಇತರೆ ಜನಾಂಗವನ್ನು ಸೇರಿಸುವುದರ ಮೂಲಕ ವಾಲ್ಮೀಕಿ ನಾಯಕ ಸಮಾಜವನ್ನು ಗುರಿಯನ್ನಾಗಿಸಿ ಶೋಷಣೆಯ ಉದ್ದೇಶವನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿರುವ 65 ಲಕ್ಷ ನಾಯಕ ಸಮಾಜಭಂಧವರ ಶಿರ ಛೇದನ ಮಾಡಿದರು ಸಹ ಯಾವುದೇ ಕಾರಣಕ್ಕೂ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಅವಕಾಶ ನೀಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಗುಡುಗಿದರು . ಮುಖ್ಯಮಂತ್ರಿ ಸ್ಥಾನಕ್ಕೆ ಕಂಟಕ ಬಂದಾಗ ಇಂತಹ ಸನ್ನಿವೇಶಗಳನ್ನು ಸೃಷ್ಟಿ ಮಾಡಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವಹು ನ್ನ ರ್ ಮಾಡುತ್ತಿದ್ದಾರೆ ಎಂದು ಆರೋಪಿಸಿದವರು ಕಾಂಗ್ರೆಸ್ ಪಕ್ಷದಲ್ಲಿರುವ ನಾಯಕ ಸಮಾಜದ ಸಚಿವರುಗಳು ಶಾಸಕರು ಮಾಜಿ ಹಾಲಿ ವಿವಿಧ ಘಟಕಗಳ ಸದಸ್ಯರುಗಳು ತಕ್ಷಣವೇ ಪಕ್ಷಕ್ಕೆ ಹಾಗೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜೋಗದ ನಾರಾಯಣಪ್ಪ ನಾಯಕ ಹನುಮಂತಪ್ಪ ನಾಯಕ ಪಂಪಣ್ಣ ನಾಯಕ. ವಿರುಪಾಕ್ಷ ನಾಯಕ ಬಳ್ಳಾರಿ ರಾಮಣ್ಣ ಬಸಪ್ಪ ಗುಡ್ಡೇಕಲ್ ನಾಯಕ ಚೌಡಕಿ ರಮೇಶ್ ನಾಯಕ ಮಲ್ಲೇಶಪ್ಪ ನಾಯಕ ಗುಡ್ಡೇಕಲ್ ಶರಣಪ್ಪ ನಾಯಕ ಬಸಪ್ಪ ಮರಮನಹಳ್ಳಿ ವಕೀಲರ ಸಂಘದ ಅಧ್ಯಕ್ಷರು ಶರಣಬಸಪ್ಪ ನಾಯಕ ಎಜೆ ರಂಗನಾಥ್ ನಾಯಕ ಮಾರುತಿ ಮೆತುಗಲ್ ನಾಗರಾಜ್ ಸೇರಿದಂತೆ ಅಪಾರ ಸಂಖ್ಯೆಯ ಸಮಾಜ ಸಮಾಜದ ಹಿರಿಯರು ಮುಖಂಡರು ಹಾಗೂ ಯುವ ಮುಖಂಡರು ಮತ್ತು ಬಾಂಧವರು ಪಾಲ್ಗೊಂಡಿದ್ದರು ಇದಕ್ಕೂ ಮುಂಚೆ ಮಹರ್ಷಿ ವಾಲ್ಮೀಕಿ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಡಾ. ಬಿಆರ್ ಅಂಬೇಡ್ಕರ್ ವೃತ್ತದ ಮೂಲಕ ಶ್ರೀ ಕೃಷ್ಣದೇವರಾಯ ವೃತದಲ್ಲಿ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.

About Mallikarjun

Check Also

screenshot 2025 10 09 09 44 42 09 40deb401b9ffe8e1df2f1cc5ba480b12.jpg

ಭೀಮಣ್ಣ ಖಂಡ್ರೆಯವರು ಶರಣ ಸಮಾಜ ಸೇವಾ ರತ್ನ ಪ್ರಶಸ್ತಿಗೆ ಅನರ್ಹ -ಸದ್ಗುರು ಬಸವಪ್ರಭು ಸ್ವಾಮೀಜಿ 

Bhimanna Khandre is not eligible for the Sharan Samaj Seva Ratna award - Sadhguru Basavaprabhu …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.