More than 350 people benefited from a massive free Ayurvedic treatment camp in Rampur village.
ಗಂಗಾವತಿ: ಇಂದು ಶನಿವಾರಆಯುರ್ವೇದ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆ , ಆಯುಷ್ ಫೆರ್ಡೇಷನ್ ಆಫ್ ಇಂಡಿಯಾ ಮತ್ತು ಗ್ರಾಮಪಂಚಾಯತ್ ಮಲ್ಲಾಪುರದವತಿಯಿಂದ ರಾಂಪುರ ಗ್ರಾಮದಲ್ಲಿ ಬೃಹತ್ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಆಯುಷ್ ಫೆರ್ಡೇಷನ್ ಆಫ್ ಇಂಡಿಯಾ ದ ಜಿಲ್ಲಾಧ್ಯಕ್ಷರಾದ ಡಾ. ಮಗದಾಳ , ಡಾ. ಮಹಾಲಿಂಗಪ್ಪ ಕಾಳಗೆ , ಡಾ. ತ್ರಿವೇಣಿ ಗೌಡರ್ , ಡಾ. ಶ್ರೇಯಾ ಭಾಗವಹಸಿದ್ದರು .
ಗ್ರಾಮಪಂಚಾಯುತಿ ಪಿ.ಡಿ.ಓ ಕೃಷ್ಣ, ಸದಸ್ಯರಾದ ಕಾಶಿ ರಾವ್ , ವೆಂಕಟೇಶ್ , ಭಾಸ್ಕರ್ ರಾವ್ ಮತ್ತು ಊರಿನ ಹಿರಿಯರು ಭಾಗವಹಿಸಿದ್ದರು.

ಆಯುಷ್ ಇಲಾಖೆಯಿಂದ ಡಾ. ಗುರುರಾಜ ಉಮಚಗಿ , ಡಾ. ಕವಿತಾ ಹೆಚ್ .ಎಫ್. ಡಾ. ಭಾನುಪ್ರಕಾಶ ,ಡಾ. ವೀಣಾ , ಡಾ. ಜಯಶ್ರೀ ಭಾಗವಹಿಸದ್ದರು.
ವೇದಿಕೆಯ ಮೇಲಿದ್ದ ಎಲ್ಲಾ ಗಣ್ಯರು ಆಯುರ್ವೇದದ ಪ್ರಾಮುಖ್ಯತೆ ಇಂದು ಹೆಚ್ಚಾಗುತ್ತಿದೆ . ಸರ್ಕಾರವು ಆಯುರ್ವೇದ ದಿನಾಚರಣೆಯ ಮೂಲಕ ಆಯುರ್ವೇದ ಚಿಕಿತ್ಸ ಪದ್ದತಿಯನ್ನು ಮುನ್ನಲೆಗೆ ತರುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಒಟ್ಟು 350ಕ್ಕೂ ಹೆಚ್ಚು ಜನರು ಈ ಚಿಕಿತ್ಸಾ ಶಿಬಿರದ ಉಪಯೋಗವನ್ನು ಪಡೆದರು. ಕಾರ್ಯಕ್ರಮದಲ್ಲಿ ಮುಖ್ಯವಾಗಿ 65 ಜನ ರೋಗಿಗಳಿಗೆ ಸಂಧಿವಾತಕ್ಕಾಗಿ ಅಭ್ಯಂಗ ಮತ್ತು ನಾಡಿ ಸ್ವೇದ ಪಂಚಕರ್ಮ ಚಿಕಿತ್ಸೆ ನೀಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಮಲ್ಲಾಪುರ ಗ್ರಾಮದ ವೈದ್ಯಾಧಿಕಾರಿಗಳಾದ ಡಾ.ರಾಜಶೇಖರ ನಾರನಾಳ ನಿರೂಪಿಸಿದರು. ವಂದನಾರ್ಪಣೆಯನ್ನು ಡಾ. ವಿಜಯ್ ಗೌಡರು ನೇರವೇರಿಸಿದರು.
Kalyanasiri Kannada News Live 24×7 | News Karnataka
