Breaking News

ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯಕೈಕಾಲು ಕಟ್ಟಿ ಚಿನ್ನಾಭರಣ ಕಳವುಗೈದ ಖದೀಮ!



A thief broke into a woman’s house in broad daylight, tied her hands and feet, and stole her jewelry

ಜಾಹೀರಾತು


ವರದಿ : ಬಂಗಾರಪ್ಪ .ಸಿ .‌
ಹನೂರು : ತಾಲೂಕಿನ ವ್ಯಾಪ್ತಿಯಲ್ಲಿನ ರಾಮಾಪುರ ಹೋಬಳಿ ಕೇಂದ್ರದಲ್ಲಿ ಅಪರೊಚಿತ ವ್ಯಕ್ತಿ ಮನೆಗೆ ನುಗ್ಗಿ ಮಹಿಳೆಯ ಕೈಕಾಲುಗಳನ್ನು ಕಟ್ಟಿಹಾಕಿ ಚಿನ್ನಾಭರಣವನ್ನು ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಗ್ರಾಮದ ಮಾರಿಗುಡಿ ಬೀದಿಯ ನಿವಾಸಿ ಮಹದೇವಮ್ಮ (55) ಎಂಬುವವರು ಕಾರ್ಯ ನಿಮಿತ್ತ ಮನೆಯಿಂದ ಹೊರಬಂದ ಸಂದರ್ಭದಲ್ಲಿ ಈ ಘಟನೆ ನಡೆದಿದೆ‌.
ಒಂಟಿ ಹೆಣ್ಣಿನ ಸಂಚಾರ ಗಮನಿಸಿದ ವ್ಯಕ್ತಿಯೊಬ್ಬ ಆಕೆಯನ್ನು ಹಿಡಿದು, ಕೈ ಕಾಲುಗಳನ್ನು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ಕಟ್ಟಿ ನಂತರ ಆಕೆಯ ಬಳಿ ಇದ್ದ ಸುಮಾರು 45 ಗ್ರಾಂ ಚಿನ್ನಾಭರಣ ಕಸಿದು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಘಟನೆ ನಡೆದ ನಂತರ ಮಹಿಳೆಯ ಚಿರಾಟ ಶಬ್ದ ಕೇಳಿದ ಸ್ಥಳೀಯರು ಮಹದೇವಮ್ಮ ರವರನ್ನು ರಕ್ಷಿಸಿದ್ದು, ವಿಷಯ ತಿಳಿದ ಕೂಡಲೇ ರಾಮಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ರು. ಘಟನೆ ಸಂಬಂಧ ಮಹಿಳೆಯಿಂದ ಘಟನೆಯ ಮಾಹಿತಿ ಪಡೆದುಕೊಂಡು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

About Mallikarjun

Check Also

ಇ.ಎಸ್.ಐ ಆಸ್ಪತ್ರೆ ಆವರಣದಲ್ಲಿ ವಿಶ್ವ ತೊನ್ನುರೋಗ ದಿನದ ಅಂಗವಾಗಿಜನ ಜಾಗೃತಿ

Public awareness campaign on World Tuberculosis Day at ESI Hospital premises ಬೆಂಗಳೂರು,ಜೂ.25: ವಿಶ್ವ ತೊನ್ನು ರೋಗ …

Leave a Reply

Your email address will not be published. Required fields are marked *