Breaking News

ಹೃದಯಾಘಾತ:ಸ್ಪೂರ್ತಿ ನರ್ಸಿಂಗ್ಪ್ಯಾರಾಮೆಡಿಕಲ್ಕಾಲೇಜುವಿದ್ಯಾರ್ಥಿಗಳಿಂದ ಮೂಕಾಭಿನಯದ ನೃತ್ಯರೂಪಕ

Heart attack: A silent choreography by students of Spurti Nursing Paramedical College.

ಗಂಗಾವತಿ: 16 ಹೃದಯಾಘಾತ ಎನ್ನುವುದು ಇಂದು ಭಾರತೀಯರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ವಯೋಮಿತಿಯ ಯಾವುದೇ ಭೇದವಿಲ್ಲದೇ ಕಿರಿ ಜೀವಗಳನ್ನೂ ಆಪೋಶನ ಪಡೆಯುತ್ತಿರುವ ಈ ಖಾಯಿಲೆಗೆ ಏನು ಕಾರಣ?. ನಿಯಂತ್ರಣ ಹೇಗೆ ಎಂಬುದನ್ನು ನಗರದಲ್ಲಿ ವಿದ್ಯಾರ್ಥಿಗಳು ಮೂಕಾಭಿನಯದ ನೃತ್ಯ ರೂಪಕದಲ್ಲಿ ಪ್ರದರ್ಶಿಸಿದರು.ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವಾತಂತ್ರೋತ್ಸವ ಧ್ವಜಾರೋಹಣದ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಗರದ ಸ್ಪೂರ್ತಿ ನರ್ಸಿಂಗ್​ ಮತ್ತು ಪ್ಯಾರಾಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯರೂಪಕ&ಗಮನ ಸೆಳೆಯಿತು.”ಹೃದಯಾಘಾತ, ಕಾರ್ಡಿಯಾಕ್ ಅರೆಸ್ಟ್, ಹೃದಯ ಸ್ತಂಭನ ಎಂಬ ಕಾಯಿಲೆ ಭಾರತವನ್ನು ಪಿಡುಗಾಗಿ ಕಾಡುತ್ತಿದೆ. ವಿಧಿಯಾಟವನ್ನು ಯಾರೂ ಬಲ್ಲವರಿಲ್ಲ. ನಾವು ಅಂದುಕೊಂಡಂತೆ ಯಾವುದೂ ಆಗೋದಿಲ್ಲ” ಎಂಬ ಹಿನ್ನೆಲೆ ಧ್ವನಿಯೊಂದಿಗೆ ನೃತ್ಯರೂಪಕ ಆರಂಭವಾಗುತ್ತದೆ. ನಟ ಪುನೀತ್ ರಾಜ್​ಕುಮಾರ್​, ಚಿರಂಜೀವಿ ಸರ್ಜ, ಸ್ಪಂದನಾ, ವಿದ್ಯಾರ್ಥಿನಿ ಪೊಲೀಸ್ ಬಸವರಾಜ ಮಾಲಿಪಾಟೀಲ್ ಆಗೋಲಿ ಇತರರು ಹೃದಯಾಘಾತದಿಂದ ಸಾವನ್ನಪ್ಪಿದವರು. ಈ ಹೃದಯ ಸ್ತಂಭನಕ್ಕೆ ಏನು ಕಾರಣವಾಗುವ ಅಂಶಗಲೇನು ಎಂಬ ವಿಷಯವನ್ನು ನೃತ್ಯರೂಪಕದಲ್ಲಿ ವಿದ್ಯಾರ್ಥಿಗಳು ಸಾದರಪಡಿಸಲು ಪ್ರಯತ್ನಿಸಿದರು.

About Mallikarjun

Check Also

ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು : ಡಾ.ಲಿಂಗರಾಜ್‌ಸರ್ಕಾರಿ ಉಪವಿಭಾಗಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ಗಂಗಾವತಿ,14:ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ.12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.