Breaking News

ಕಸ್ತೂರಿ ರಂಗನ್ ವರಿದಿಯಿಂದಮಲೆನಾಡಿನಜನರಿಗೆತೊಡಕಾಗದಿರಲಿ,ಚಂದ್ರಶೇಖರಕೆ.ಪಲ್ಲತ್ತಡ್ಕ

Kasturi Rangan should not cause trouble to the hill country people, Chandrasekharake. Pallattadka

ಜಾಹೀರಾತು
IMG 20241113 WA02503

ಸುಳ್ಯ: ಪಶ್ಚಿಮ ಘಟ್ಟವನ್ನು ಉಳಿಸಬೇಕು ಎನ್ನುವ ವಿಷಯಕ್ಕೆ ಮಲೆನಾಡಿನ ಜನರ ಸಹಮತವಿದೆ. ಆದರೆ ಈ ಉದ್ದೇಶ ಈಡೇರಿಕೆಗಾಗಿ ಮಲೆನಾಡಿನ ಜನರ ಬದುಕಿನ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ.ಕಸ್ತೂರಿರಂಗನ್ ವರದಿ ಹೆಸರಿನಲ್ಲಿ ಮಲೆನಾಡಿನ ಜನರ ಬದುಕನ್ನು ಅತಂತ್ರಗೊಳಿಸಲು ಸರ್ಕಾರಗಳು ಮುಂದಾಗಿದೆ ಇದನ್ನು ನಮ್ಮ ಸಂಘಟನೆ ಪಕ್ಷ,ಜಾತಿ ಮರೆತು ವಿರೋಧಿಸುತ್ತೆವೆ. ಕಸ್ತೂರಿರಂಗನ್ ವರದಿ ಸಿದ್ಧಪಡಿಸುವಾಗ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಮಾಡಿದ ವರದಿಯಾಗಿದೆ. ಈ ವರದಿ ಅನುಷ್ಠಾನಗೊಂಡರೆ ಪರಿಸರ ಸಂರಕ್ಷಣೆ ಅಸಾಧ್ಯ. ಪ್ರಸ್ತುತ ಜಾರಿಯಲ್ಲಿ ಇರುವ ಕಾನೂನುಗಳ ಮೂಲಕವೇ ಅರಣ್ಯ ಸಂರಕ್ಷಣೆ ಮಾಡಬಹುದು. ಪಶ್ಚಿಮ ಘಟ್ಟ ಉಳಿಸಬೇಕು ಎಂಬ ಹೋರಾಟ ಮಾಡಿದವರೇ ಮಲೆನಾಡಿಗರು ಮತ್ತು ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಮೂಲನಿವಾಸಿ ಅರಣ್ಯವಾಸಿಗಳೇ ಹೊರತು ಅಧಿಕಾರಿಗಳು ಅಥವಾ ಯಾವುದೇ ಸರ್ಕಾರಗಳು ಅಲ್ಲ. ಆದುದರಿಂದ ಸರಕಾರ ಸರಿಯಾದ ತೀರ್ಮಾನಕ್ಕೆ ಬಂದು ಮಲೆನಾಡಿಗರಿಗೆ ರಕ್ಷಣೆ ಒದಗಿಕೊಡಬೇಕೆಂದು ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ.ಕೆ ಪಲ್ಲತ್ತಡ್ಕ ಈ ಮುಖಾಂತರ ಸರ್ಕಾರಕ್ಕೆ ಮನವಿ ಮಾಡಿದರು

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.