Breaking News

ಕಲ್ಯಾಣ ಸಿರಿ ಫಲ ಶೃತಿ, ಇಂದು ಹೊತ್ತಿದ ಎರಡು ಬದಿ ವಿದ್ಯುತ್ ದೀಪ,,

ನಾಮ ಕೇ ವಾಸ್ತೆ ನಮ್ಮೂರಲ್ಲೂ ವಿದ್ಯುತ್ ಕಂಬಗಳು

ಜಾಹೀರಾತು

Kalyana Siri Phala Shruti, double sided electric lamp lit today,,



IMG 20241023 WA0473

IMG 20241023 WA0476

ವರದಿ : ಪಂಚಯ್ಯ ಹಿರೇಮಠ,

ಕೊಪ್ಪಳ : ಕುಕನೂರು ಪಟ್ಟಣದ ವೀರಭದ್ರಪ್ಪ ವೃತ್ತದಿಂದ ಗುದ್ನೇಪ್ಪನ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಿದ್ಯುತ್ ಕಂಬಗಳುಂಟು ಆದರೇ ದೀಪಗಳು ಉರಿಯುವದಿಲ್ಲಾ ಎಂಬ ಶಿರ್ಷಿಕೆಯಡಿ ಸೋಮವಾರ ಪ್ರಕಟವಾದ ವರದಿಯಿಂದ ಫಲಶ್ರುತಿ ಲಭಿಸಿದೆ.

IMG 20241023 WA0475 770x1024

ಸುಮಾರು ತಿಂಗಳುಗಳಿಂದ ಒಂದೇ ಬದಿಗೆ ಹೊತ್ತಿ ಉರಿಯುತ್ತಿದ್ದ ಕಂಬಗಳಲ್ಲಿ ಬೆಳಕು ಇಂದು ಎರಡು ಬದಿಗಳಲ್ಲಿರುವ ವಿದ್ಯುತ್ ಕಂಬಗಳಿಂದ ಬೆಳಕು ಹೊಮ್ಮುತ್ತಿದ್ದು ಸಾರ್ವಜನಿಕರು ಫುಲ್ ಖುಷ್ ಆಗಿದ್ದಾರೆ.

ಸುಮಾರು ತಿಂಗಳುಗಳಿಂದ ಅರ್ಧಂ ಬರ್ಧ ಕತ್ತಲೆಯಲ್ಲಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ಎರಡು ಕಣ್ಣು ಬಂದಷ್ಟು ಸಂತೋಷವಾಗಿದ್ದು, ಮುಂದೆ ದೀಪಾವಳಿ ಹಬ್ಬ ಇರುವದರಿಂದ ಈ ಬೆಳಕಿನ ಜೊತೆಯಲ್ಲಿ ಹಬ್ಬವನ್ನು ಸಂಭ್ರಮಿಸೋಣವೆಂದು ಮಾತನಾಡಿಕೊಳ್ಳುತ್ತಿದ್ದರು.

IMG 20241023 WA0474 771x1024

ನಮ್ಮ ಕಲ್ಯಾಣ ಸಿರಿಯಲ್ಲಿ ಪ್ರಕಟಿಸಿದ ಒಂದು ವಾರದೊಳಗೆ ವಿದ್ಯುತ್ ಕಂಬಗಳಲ್ಲಿ ದೀಪ ಅಳವಡಿಸಿದ್ದಕ್ಕಾಗಿ ಕುಕನೂರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಪಟ್ಟಣದ ನಾಗರಿಕರು ಈ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.